ಬೆಂಗಳೂರು: ರಾಜಧಾನಿ ಬೆಂಗಳೂರಿನ ಅತ್ತಿಗುಪ್ಪೆ ಮೆಟ್ರೋ ನಿಲ್ದಾಣದಲ್ಲಿ ನಾಗರಭಾವಿಯ ನ್ಯಾಷನಲ್ ಲಾ ಕಾಲೇಜಿನ ವಿದ್ಯಾರ್ಥಿ ಧ್ರುವ್ ಕಕ್ಕರ್ ಎಂಬಾತ ಆತ್ಮಹತ್ಯೆ ಶರಣಾಗಿರುವ ಘಟನೆ ದೇಶದಾದ್ಯಂತ ಭಾರೀ ಚರ್ಚೆಗೆ ಕಾರಣವಾಗಿದೆ. ಇದರ ವಿರುದ್ಧ ಜನರು ಆಕ್ರೋಶ ಹೊರ ಹಾಕುತ್ತಿದ್ದಾರೆ..
ನಿನ್ನೆಯಷ್ಟೇ ವಿದ್ಯಾರ್ಥಿಯೊಬ್ಬಮೆಟ್ರೋ ಟ್ರ್ಯಾಕ್ ಮೇಲೆ ಜಿಗಿದು ಸೂಸೈಡ್ ಮಾಡಿಕೊಂಡಿರುವ ಘಟನೆ ಎಲ್ಲರಿಗೂ ತಿಳಿದಿದ್ದೆ ಆದರೆ ಮೆಟ್ರೋ ಟ್ರ್ಯಾಕ್ಗೆ ಪ್ರಯಾಣಿಕರು ಜಿಗಿಯುವುದು, ಮೆಟ್ರೋ ಹಳಿಯಲ್ಲಿ ಕಾಣಿಸಿಕೊಳ್ಳುವುದು ಈ ಹಿಂದೆ ಅನೇಕ ಘಟನೆಗಳು ನಡೆದಿವೆ.ಹೌದು.. ಸೂಸೈಡ್ ಸ್ಪಾಟ್ ಆಗುತ್ತಿದೆಯಾ ನಮ್ಮ ಮೆಟ್ರೋ ಟ್ರ್ಯಾಕ್ ರೈಲ್ವೆ ಟ್ರ್ಯಾಕ್ ಗಳಂತೆ ಮೆಟ್ರೋ ಟ್ರ್ಯಾಕ್ ಗಳಲ್ಲೂ ಆತ್ಮಹತ್ಯೆ ಮಾಡಿಕೊಳ್ಳುವುದು ಪ್ರಮುಖ ಮೆಟ್ರೋ ಸ್ಟೇಷನ್ ಗಳ ಸೂಸೈಡ್ ಹಾಟ್ ಸ್ಪಾಟ್ ಆಗಿ ಇತ್ತೀಚೆಗೆ ಕಾಣಿಸಿಕೊಳ್ಳುತ್ತಿದೆ.
BIGG BREAKING: 5, 8, 9, 11ನೇ ತರಗತಿ ‘ಬೋರ್ಡ್ ಪರೀಕ್ಷೆ’ಗೆ ಅಸ್ತು: ಹೈಕೋರ್ಟ್’ನಿಂದ ಮಹತ್ವದ ತೀರ್ಪು
ನಿನ್ನೆ ಅತ್ತಿಗುಪ್ಪೆ ಮೆಟ್ರೋ ನಿಲ್ದಾಣದಲ್ಲಿ ಯುವಕ ಆತ್ಮಹತ್ಯೆ ಚಲಿಸುತ್ತಿದ್ದ ಮೆಟ್ರೋ ಗೆ ಸಿಲುಕಿ ಯುವಕ ಸಾವು ಈ ಹಿಂದೆ ಜಾಲಹಳ್ಳಿ ಮೆಟ್ರೋ ಸ್ಟೇಷನ್ ನಲ್ಲಿ ಮೆಟ್ರೋ ಹಳಿ ಮೇಲೆ ಜಿಗಿದು ಯುವಕನಿಂದ ಆತ್ಮಹತ್ಯೆ ಯತ್ನ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದ ಯುವಕ ಕೆಂಗೇರಿ ನಿಲ್ದಾಣದಲ್ಲೂ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಬೆಳಕಿಗೆ ಸಾಲು ಸಾಲು ದುರಂತಗಳತ್ತಾ ಸಾಗುತ್ತಿದೆ ನಮ್ಮ ಮೆಟ್ರೋ ನಿರ್ಲಕ್ಷ್ಯವೇ ಕಾರಣ ಎಂದು ಸಮಾಜಿಕ ಜಾಲತಾಣದಲ್ಲಿ ಚೀಮಾರಿ ಹಾಕುತ್ತಿದ್ದು ಸಾಲು ಸಾಲು ಪ್ರಕರಣಗಳ ಬಳಿಕ ಎಚ್ಚೆತ್ತುಕೊಳ್ಳದ ಅಧಿಕಾರಿಗಳ ವಿರುದ್ದ ಆಕ್ರೋಶ ವ್ಯಕ್ತವಾಗಿದ್ದು ಮೆಟ್ರೋ ನಿಲ್ದಾಣಗಳಲ್ಲಿ ಭದ್ರತಾ ವ್ಯವಸ್ಥೆ ಸರಿ ಮಾಡುವಂತೆ ಒತ್ತಾಯ ಮಾಡಲಾಗಿದೆ..
ದೇಶದ ಅತಿದೊಡ್ಡ ಮೆಟ್ರೋ ಸಂಪರ್ಕ ಹೊಂದಿರುವ ಬೆಂಗಳೂರಿನಲ್ಲೆ ಅವವ್ಯಸ್ಥೆ ,ದೆಹಲಿ ಹಾಗೂ ಚೆನ್ನೈ ಮೆಟ್ರೋ ನಿಲ್ದಾಣಗಳಲ್ಲಿ ನಿರ್ಮಿಸಲಾಗಿರು ಸ್ಕ್ರೀನ್ ಡೋರ್ ಮಾಡಲಾಗಿದೆ..ಅದೇ ರೀತಿ ಇಲ್ಲಿ ಕೂಡ ಅಳವಡಿಸಲು ಒತ್ತಾಯ ಜನರು ಮಾಡುತ್ತಿದ್ದಾರೆ..ಮೆಟ್ರೋ ಟ್ರ್ಯಾಕ್ ಗಳಿಗೆ ಸಿಲಿಕಾನ್ ಸಿಟಿಯಲ್ಲೂ ಸ್ಕ್ರಿನ್ ಡೋರ್ ನಿರ್ಮಿಸಲು ಒತ್ತಾಯ ಅಪಾಯ ಕಮ್ಮಿಗೊಳಿಸಲು ಸ್ಕ್ರೀನ್ ಡೋರ್ ಅಳವಡಿಸಲು ಸಾಮಾಜಿಕ ಜಾಲತಾಣದಲ್ಲಿ ಕೂಗು ಜೋರಾಗಿದೆ.
ಈ ಬಗ್ಗೆ ನಮ್ಮ ಮೆಟ್ರೋದ ಹಿರಿಯ ಅಧಿಕಾರಿ ಮಾತನಾಡಿ, ಒಂದು ನಿಲ್ದಾಣದಲ್ಲಿ ಪ್ಲಾಟ್ಫಾರ್ಮ್ ಗೇಟ್ ಅಳವಡಿಸಲು 7-8 ಕೋಟಿ ರೂಪಾಯಿ ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ. ಬಿಎಂಆರ್ಸಿಎಲ್ ಉನ್ನತ ಅಧಿಕಾರಿಯೊಬ್ಬರು ಈಗಿರುವ ನಿಲ್ದಾಣಗಳಲ್ಲಿ ಪ್ಲಾಟ್ಫಾರ್ಮ್ ಗೇಟ್ಗಳನ್ನು ಸ್ಥಾಪಿಸಲು ಮರುಹೊಂದಿಸುವಿಕೆಯ ಅಗತ್ಯವಿರುತ್ತದೆ, ಇದು ಸವಾಲಾಗಿರಬಹುದು. ವೆಚ್ಚದ ಜೊತೆಗೆ, ನಾವು ವಿನ್ಯಾಸದ ಅಂಶಗಳನ್ನು ಮೌಲ್ಯಮಾಪನ ಮಾಡಬೇಕಾಗಿದೆ. ನಾವು ಸಮಗ್ರ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು ಮತ್ತು ಎಲ್ಲಾ ಅಂಶಗಳನ್ನು ಪರಿಗಣಿಸಬೇಕು ಎಂದು ಅಧಿಕಾರಿ ಹೇಳಿದರು.
ಪ್ಲಾಟ್ಫಾರ್ಮ್ ಗೇಟ್ಗಳನ್ನು ಸ್ಥಾಪಿಸುವುದರಿಂದ ಅಸ್ತಿತ್ವದಲ್ಲಿರುವ ನಿಲ್ದಾಣಗಳನ್ನು ಹಲವು ದಿನಗಳವರೆಗೆ ಮುಚ್ಚಬೇಕಾಗುತ್ತದೆ ಎಂದು ಇನ್ನೊಬ್ಬ ಅಧಿಕಾರಿ ಹೇಳಿದರು. ಬಿಎಂಆರ್ಸಿಎಲ್ ಮೆಜೆಸ್ಟಿಕ್ ಇಂಟರ್ಚೇಂಜ್ ನಿಲ್ದಾಣದಲ್ಲಿ ಒಂದು ಪ್ಲಾಟ್ಫಾರ್ಮ್ನಲ್ಲಿ ರೇಲಿಂಗ್ಗಳನ್ನು ಸ್ಥಾಪಿಸಿದೆ. ಬಿಎಂಆರ್ಸಿಎಲ್ನ ವ್ಯವಸ್ಥಾಪಕ ನಿರ್ದೇಶಕ ಎಂ.ಮಹೇಶ್ವರ್ ರಾವ್ ಮಾತನಾಡಿ, ಜನದಟ್ಟಣೆಯಿಂದ ಅಪಘಾತಗಳು ಸಂಭವಿಸದಂತೆ ನೋಡಿಕೊಳ್ಳಲು ಚಿಂತನೆ ನಡೆಸಲಾಗಿದೆ ಎಂದು ತಿಳಿಸಿದ್ದಾರೆ.
ಒಟ್ಟಾರೆ, ನಿನ್ನ ಆಗಿದ್ದ ಘಟನೆಯಿಂದಾಗಿ ಮೆಟ್ರೋ ಅದಿಕಾರಿಗಳು ತಲೆ ಕೆಡಿಸಿಕೊಂಡಿದ್ದು, ಮುಂದಿನ ದಿನಗಳಲ್ಲಿ ಈ ತರಹ ಪ್ರಾಣಕ್ಕೆ ಕುತ್ತು ಬರದಂತೆ ಯಾವ ರೀತಿಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುತ್ತಾರೆ ಎಂದು ಕಾದು ನೋಡಬೇಕಿದೆ..