ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಜೆಡಿಎಸ್ ನಡುವೆ ಒಕ್ಕಲಿಗ ಮತಬ್ಯಾಂಕ್ ಗೆ ಕಣ್ಣು ಬಿದ್ದಿದೆ.ಒಕ್ಕಲಿಗ ಮತಗಳ ಡೈವರ್ಟ್ ಗಾಗಿ ಕೈತೆನೆ ನಾಯಕರ ನಡುವೆ ಮಠದ ಪಾಲಿಟಿಕ್ಸ್ ಶುರುವಾಗಿದೆ.ನಿರ್ಮಲಾನಂದ ಶ್ರೀಗಳನ್ನೇ ಮುಂದಿಟ್ಟುಕೊಂಡು ಕಾಂಗ್ರೆಸ್ ನಾಯಕರು ಕುಮಾರಸ್ವಾಮಿಯವರನ್ನ ಟಾರ್ಗೆಟ್ ಮಾಡಿದ್ದಾರೆ.ಶ್ರೀಗಳ ಫೋನ್ ಟ್ಯಾಪಿಂಗ್ ಹಾಗೂ ಪರ್ಯಾಯ ಮಠದ ವಿಚಾರಗಳನ್ನೆತ್ತಿ ಒಕ್ಕಲಿಗ ಸಮುದಾಯದ ಜನರನ್ನೇ ಡೈವರ್ಟ್ ಮಾಡೋ ಪ್ರಯತ್ನ ನಡೆದಿದೆ..ಇದು ಯಾರಿಗೆ ಪ್ಲಸ್ ಆಗಲಿದೆ..ಯಾರಿಗೆ ಮೈನಸ್ ಆಗಲಿದೆ ..ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್..
ಪ್ರಸ್ತುತ ಲೋಕಸಭಾ ಚುನಾವಣೆಯಲ್ಲಿ ಹೆಚ್ಚು ಸೀಟು ಗೆಲ್ಲೋಕೆ ನಾನಾ ತಂತ್ರಗಾರಿಗೆ ಶುರುವಾಗಿದೆ..ಕಾಂಗ್ರೆಸ್ ಹಾಗೂ ಮೈತ್ರಿಪಕ್ಷಗಳ ನಡುವೆ ಟಾಕ್ ವಾರ್ ಪ್ರಾರಂಭವಾಗಿದೆ..ಅದ್ರಲ್ಲೂ ಒಕ್ಕಲಿಗ ಸಮುದಾಯದ ಮತಗಳ ಮೇಲೆಯೇ ಎರಡು ಕಡೆಯವರ ಕಣ್ಣು ಬಿದ್ದಿದೆ..ಜೆಡಿಎಸ್ ಕಡೆ ಇದ್ದ ಸಾಂಪ್ರದಾಯಿಕ ಮತಗಳನ್ನ ಈ ಭಾರಿ ಡೈವರ್ಟ್ ಮಾಡುವ ಪ್ರಯತ್ನ ನಡೆದಿದೆ…ಹಿಂದೆ ದೇವೇಗೌಡರು ಮಾಡಿದ್ದ ಒಕ್ಕಲಿಗ ಸಮುದಾಯದ ಪರ್ಯಾಯ ಮಠವನ್ನೇ ಮುಂದಿಟ್ಟುಕೊಂಡು ದಾಳ ಉರುಳಿಸಿದ್ದಾರೆ..ಇದ್ರ ಜೊತೆಗೆ ಮೈತ್ರಿ ಸರ್ಕಾರದ ವೇಳೆ ನಿರ್ಮಲಾನಂದ ಶ್ರೀಗಳ ಫೋನ್ ಟ್ಯಾಪಿಂಗ್ ಮಾಡಿಸಿದ್ರು ಎಂಬ ವಿಚಾರವನ್ನಕೆದಕಿ ದಳಪತಿಗಳ ಮೇಲೆ ಡೈರೆಕ್ಟ್ ಟಾರ್ಗೆಟ್ ಮಾಡಿದ್ದಾರೆ..ಯಾವಾಗ ಬಿಜೆಪಿ ನಾಯಕರನ್ನ ಕರೆದುಕೊಂಡು ಕುಮಾರಸ್ವಾಮಿ ನಿರ್ಮಲಾನಂದರನ್ನ ಭೇಟಿ ಮಾಡಿಸಿದ್ರೋ ಆಗಿನಿಂದಲೇ ಮಠ ಪಾಲಿಟಿಕ್ಸ್ ಶುರುವಾಗಿದೆ..
![Demo](https://ainlivenews.com/wp-content/uploads/2023/12/spoorthi-1.jpg)
ಇಂತದ್ದೊಂದು ಮಾತು ರಾಜಕೀಯ ಪಟಸಾಲೆಯಲ್ಲಿ ಕೇಳಿ ಬರ್ತಿದೆ..ಯಾವಾಗ ಕುಮಾರಸ್ವಾಮಿಯವರು ಬಿಜೆಪಿ ನಾಯಕರನ್ನ ನಿರ್ಮಲಾನಂದರ ಭೇಟಿ ಮಾಡಿಸಿದ್ರೋ ಇದು ಕಾಂಗ್ರೆಸ್ ಪಾಳಯಕ್ಕೆನುಂಗಲಾರದ ತುತ್ತಾಗಿತ್ತು..ಶ್ರೀಗಳು ಎಲ್ಲಿ ಮೈತ್ರಿ ಪಕ್ಷಗಳ ಕಡೆ ವಾಲ್ತಾರೋ ಎಂಬ ಕಾರಣಕ್ಕೆ ಅಲರ್ಟ್ ಆಗಿದ್ದಾರೆ..ಮೂರು ದಶಕಗಳ ಹಿಂದಿನ ಒಕ್ಕಲಿಗ ಪರ್ಯಾಯ ಮಠದ ವಿಚಾರವನ್ನ ಮುಂದೆ ತಂದಿದ್ದಾರೆ.. ಆದಿಚುಂಚನಗಿರಿಯಲ್ಲಿ ಸಮುದಾಯದ ಮಠ ಇದ್ರೂ ಕೆಂಗೇರಿ ಬಳಿ ದೇವೇಗೌಡರು ಮತ್ತೊಂದು ಮಠ ಹುಟ್ಟು ಹಾಕಿದ್ದೇಕೆಂಬ ಪ್ರಶ್ನೆಯನ್ನ ಎತ್ತಿದ್ದಾರೆ..ಈ ಮೂಲಕ ವೈಯುಕ್ತಿಕ ವಿಚಾರಗಳಿಗಾಗಿ ಮತ್ತೊಂದು ಮಠ ಹುಟ್ಟುಹಾಕಿದ್ದಾರೆಂಬ ವಿಚಾರವನ್ನೇ ಮುಂದಿಟ್ಟು ಕೊಂಡು ಕುಮಾರಸ್ವಾಮಿ ವಿರುದ್ಧ ತಿರುಗಿಬಿದ್ದಿದ್ದಾರೆ..
Old Pension Scheme: ಸರ್ಕಾರಿ ನೌಕರರಿಗೆ ಭರ್ಜರಿ ಗುಡ್ ನ್ಯೂಸ್: ಹಳೆಯ ಪಿಂಚಣಿಗೆ ಮಹತ್ವದ ಆದೇಶ
ಇದ್ರಿಂದ ಹಳೆಯ ಮೈಸೂರು ಭಾಗದಲ್ಲಿರುವ ಒಕ್ಕಲಿಗ ಸಮುದಾಯಕ್ಕೆ ಬೇರೆಯದೇ ಸಂದೇಶ ಕೊಡುವ ಪ್ರಯತ್ನ ಮಾಡಿದ್ದಾರೆ..ಇದ್ರ ಜೊತೆಗೆ ಮೈತ್ರಿ ಸರ್ಕಾರದ ವೇಳೆ ಕುಮಾರಸ್ವಾಮಿ ನಿರ್ಮಲಾನಂದ ಶ್ರೀಗಳ ಫೋನ್ ಕದ್ದಾಲಿಕೆ ಮಾಡಿದ್ದಾರೆಂಬ ಆರೋಪವನ್ನೂ ಮುಂದಿಟ್ಟಿದ್ದಾರೆ..ಈ ಮೂಲಕ ಒಕ್ಕಲಿಗ ಸಮುದಾಯವನ್ನ ಡಿಸ್ಟರ್ಬ್ ಮಾಡುವುದು..ಜೆಡಿಎಸ್ ಕಡೆ ಇರುವ ಸಾಂಪ್ರದಾಯಿಕ ಒಕ್ಕಲಿಗ ಮತಗಳನ್ನ ಸೆಳೆಯುವ ಉದ್ದೇಶವೂ ಇದ್ರ ಹಿಂದಿರೋದು ಗುಟ್ಟಾಗಿಯೇನು ಉಳಿದಿಲ್ಲ..ಹಾಗಾಗಿಯೇ ಕುಮಾರಸ್ವಾಮಿ,ಡಿಕೆಶಿ ನಡುವೆ ಕಳೆದ ಮೂರು ದಿನಗಳಿಂದ ಇದ್ರ ಬಗ್ಗೆ ವಾದವಿವಾದಗಳು ಮುಂದುವರಿದಿವೆ..ಇದಕ್ಕೆ ಕಾಂಗ್ರೆಸ್ ಒಕ್ಕಲಿಗ ಸಮುದಾಯದ ನಾಯಕರ ಬೆಂಬಲವೂ ಸಿಕ್ಕಿದೆ..
ಇನ್ನು ಕುಮಾರಸ್ವಾಮಿವಿರುದ್ಧ ಸಚಿವ ಚೆಲುವರಾಯಸ್ವಾಮಿ ಕೂಡ ಸಿಡಿದು ನಿಂತಿದ್ದಾರೆ..ಪರ್ಯಾಯ ಮಠ,ಪೋನ್ ಟ್ಯಾಪಿಂಗ್ ಹಾಗೂ ಎಸ್ ಎಂ ಕೃಷ್ಣರಿಗೆ ಸಿಎಂ ಸ್ಥಾನ ತಪ್ಪಿಸಿದ ವಿಚಾರಗಳನ್ನ ಕೆದಕಿ ದಳಪತಿಗಳಿಗೆ ಡ್ಯಾಮೇಜ್ ಮಾಡೋ ಪ್ರಯತ್ನ ಮಾಡಿದ್ದಾರೆ..ಎಸ್ ಎಂ ಕೃಷ್ಣರನ್ನ ನಾಯಕರು ಭೇಟಿ ಮಾಡಿಸಿದ್ರು..ಹಿಂದೆ ೨೦೦೪ ರಲ್ಲಿ ಎಸ್ ಎಂಕೆ ಯಾವ ಪಕ್ಷಕ್ಕೆ ಬಹುಮತ ಬಾರದಿದ್ದಾಗ ಜೆಡಿಎಸ್ ಗೆ ಒಂದು ಚಾನ್ಸ್ ಕೊಡಿ ಅಂದ್ರು..ಅಂದು ಮಂಡ್ಯದ ಎಸ್ ಎಂಕೆಯವರನ್ನ ಸಿಎಂ ಮಾಡುವ ಅವಕಾಶ ಬಂದಿತ್ತು..
ಆಗ ಕೃಷ್ಣರಿಗೆ ಜೆಡಿಎಸ್ ಸಪೋರ್ಟ್ ಮಾಡಲಿಲ್ಲ,ಸಿಎಂ ಆಗುವ ಅವಕಾಶವನ್ನೂತಪ್ಪಿಸಿದ್ರು..ಖರ್ಗೆಯವರಿಗೆ ಎರಡನೇ ಆಪ್ಶನ್ ಇತ್ತು..ಖರ್ಗೆ ತಪ್ಪಿಸಿ ಧರ್ಮಸಿಂಗ್ ಅವರಿಗೆ ಸಪೋರ್ಟ್ ಮಾಡಿದ್ರು..ಈಗ ಕಥೆಗಳನ್ನ ಹೇಳ್ತಾರೆ ಅಂತ ಹೆಚ್ಡಿಕೆ ವಿರುದ್ಧ ಕುಟುಕಿದ್ದಾರೆ..ನಿರ್ಮಲಾನಂದ ಶ್ರೀಗಳ ಫೋನ್ ಟ್ಯಾಪಿಂಗ್ ಮಾಡಿದ್ದು ಯಾರು..ಕೆಂಗೇರಿಯಲ್ಲಿ ಎರಡನೇ ಮಠ ಹುಟ್ಟುಹಾಕಿದ್ದು ಯಾರು ಅಂತ ಪ್ರಶ್ನಿಸಿದ್ದಾರೆ..ಈ ಮೂಲಕ ಕುಮಾರಸ್ವಾಮಿಯವರನ್ನ ಡ್ಯಾಮೇಜ್ ಗೆ ಪ್ರಯತ್ನ ನಡೆಸಿದ್ದಾರೆ..ಮಾಗಡಿ ಬಾಲಕೃಷ್ಣ ಕೂಡ ದಳಪತಿಗಳ ವಿರುದ್ಧ ಹರಿಹಾಯ್ದಿದ್ದಾರೆ…
ಇನ್ನು ಕಾಂಗ್ರೆಸ್ ನಾಯಕರ ಪರ್ಯಾಯ ಮಠ,ಫೋನ್ ಟ್ಯಾಪಿಂಗ್ ವಿಚಾರ ದಳಪತಿಗಳ ನಿದ್ರೆಗೆಡಿಸಿವೆ..ಒಕ್ಕಲಿಗ ಸಮುದಾಯವನ್ನೇ ಟಾರ್ಗೆಟ್ ಮಾಡಿ ಇವರು ಹಳೆಯ ವಿಚಾರಗಳನ್ನ ಕೆದಕ್ತಿದ್ದಾರಲ್ಲ ಅಂತ ಅಕ್ರೋಶ ಗೊಂಡಿದ್ದಾರೆ..ಇನ್ನೊಬ್ಬರ ಫೋನ್ ಟ್ಯಾಪಿಂಗ್ ಮಾಡುವ ದರ್ದು ನನಗಿಲ್ಲ..ಅದರ ತನಿಖೆ ಏನಾಗಿದೆ ಅಂತ ಗೊತ್ತಿರಬೇಕು..ಬೇರೆ ಬೇರೆ ಸಮುದಾಯದಲ್ಲಿ ೧೪೦ ಮಠಗಳಿವೆ..ಅಂತಾದ್ದರಲ್ಲಿ ಒಕ್ಕಲಿಗ ಸಮುದಾಯಕ್ಕೆ ಮತ್ತೊಂದು ಮಠದ ಅಗತ್ಯತೆ ಇತ್ತು ಹಾಗಾಗಿ ದೇವೇಗೌಡರು ಮಾಡಬೇಕಾಯ್ತು..ಈಗ ಅದೆಲ್ಲಹಳೆಯಕಥೆ ಅಂತ ತಳ್ಳಿಹಾಕಿದ್ದಾರೆ..
ಒಟ್ನಲ್ಲಿ ಹಳೇ ಮೈಸೂರು ಭಾಗದಲ್ಲೇ ೧೪ ಕ್ಷೇತ್ರಗಳಿಗೆ ಮತದಾನ ನಡೆಯಲಿದೆ..ಒಕ್ಕಲಿಗ ಸಮುದಾಯ ಪ್ರಬಲವಾಗಿರುವ ಪ್ರದೇಶ..ಇಲ್ಲಿಯವರೆಗೆ ಸಮುದಾಯ ಜೆಡಿಎಸ್ ಬೆನ್ನಿಗೆ ನಿಂತಿದೆ..ಹಾಗಾಗಿಯೇ ಸಮುದಾಯದ ಮತಗಳನ್ನ ಡೈವರ್ಟ್ ಮಾಡೋಕೆ ಕೈ ನಾಯಕರು ನಾನಾ ಪ್ಲಾನ್ ರೂಪಿಸ್ತಿದ್ದಾರೆ..ಮುಚ್ಚಿಹೋಗಿದ್ದ ಫೋನ್ ಟ್ಯಾಪಿಂಗ್,ಪರ್ಯಾಯ ಮಠದ ವಿಚಾರ ಕೆದಕಿದ್ದಾರೆ..ಈಮೂಲಕ ದಳಪತಿಗಳು ಈ ರೀತಿಯಾಗಿ ಸಮುದಾಯ ಬಳಸಿಕೊಂಡ್ರಾ ಅನ್ನೋ ಸಂದೇಶ ಹೋಗುವಂತೆ ಮಾಡ್ತಿದ್ದಾರೆ ಎನ್ನಲಾಗಿದೆ.
![](https://ainlivenews.com/wp-content/uploads/2024/01/Ad-Banner-copy-scaled.jpg)