ಚಾಮರಾಜನಗರ: ಒಂದೇ ಕುಟುಂಬದ ನಾಲ್ವರು ಸಾಮೂಹಿಕವಾಗಿ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿ ಓರ್ವ ಸಾವನ್ನಪ್ಪಿ ಮೂವರು ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿರುವ ಘಟನೆ ಗಡಿ ಜಿಲ್ಲೆಯಲ್ಲಿ ನಡೆದಿದೆ.ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನಲ್ಲಿರುವ ಪ್ರಸಿದ್ದ ಯಾತ್ರಾ ಸ್ಥಳವಾದಂತಹ ಮಲೇಮಹದೇಶ್ವರಬೆಟ್ಟಕ್ಕೆ ಮೈಸೂರು ಜಿಲ್ಲೆಯ ಕೆ.ಆರ್.ನಗರ ತಾಲೂಕಿನ ಚಂದಗಾಲು ಗ್ರಾಮದ ನಾಲ್ವರು ಸದಸ್ಯರನ್ನು ಒಳಗೊಂಡ ಕುಟುಂಬವು ಶುಕ್ರವಾರ ಸಂಜೆ ಪ್ರಯಾಣ ಬೆಳೆಸಿದ್ರು ಎನ್ನಲಾಗಿದೆ.
ಈ ವೇಳೆ ತಾಳುಬೆಟ್ಟದಿಂದ ಮಾದಪ್ಪನ ಸನ್ನಿದಿಗೆ ಕಾಲ್ನಡಿಯಲ್ಲಿ ಹೊರಟಂತ ಕುಟುಂಬವು ತಾಳುಬೆಟ್ಟದ ಮೊದಲನೇ ತಿರುವಿನ ಹಳ್ಳವೊಂದರಲ್ಲಿ ಸಾಮೂಹಿಕವಾಗಿ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದು ತಿಳಿದುಬಂದಿದೆ. ಈ ಘಟನೆಯಲ್ಲಿ ಮನೆಯ ಯಜಮಾನ 75 ವರ್ಷದ ಮಹದೇವನಾಯಕ ಮೃತ ಪಟ್ಟಿದ್ದಾರೆ. ಶನಿವಾರ ಮುಂಜಾನೆ ಮಹದೇವನಾಯಕರ ಮೊಮ್ಮಗಳು ರಿಷಿಕಾ ತಾಳಬೆಟ್ಟದ ಮೊದಲ ತಿರುವಿನ ಮುಖ್ಯರಸ್ತೆಯಲ್ಲಿ ಅಸ್ವಸ್ಥ ಸ್ತಿತಿಯಲ್ಲಿ ಕಂಡು ಬಂದಿದ್ದು ಮಾದಪ್ಪನ ಭಕ್ತರು ಸ್ಥಳೀಯ ಪೋಲೀಸರಿಗೆ ವಿಷಯ ತಿಳಿಸಿದ್ದಾರೆ.
ಈ ವೇಳೆ ಕೂಡಲೆ ಸ್ಥಳಕ್ಕೆ ಆಗಮಿಸಿದ ಮಲೇಮಹದೇಶ್ವರಬೆಟ್ಟದ ಸರ್ಕಲ್ ಇನ್ಸಪೆಕಟ್ಟರ್ ಜಗದೀಶ್ ಹಾಗೂ ಸಿಬ್ಬಂಧಿಗಳು ಮೃತ ಪಟ್ಟಿದ್ದ ಮಹದೇವನಾಯಕರನ್ನು ಆಸ್ಪತ್ರೆಗೆ ರವಾನಿಸಿದ್ದಾರೆ. ಅಲ್ಲದೆ ಅಸ್ವಸ್ಥರಾಗಿದ್ದಂತಹ ಮೃತ ಮಹದೇವನಾಯಕರ ಪತ್ನಿ 60 ವರ್ಷ ವಯಸ್ಸಿನ ಗೌರಮ್ಮ ಹಾಗೂ ಮಗಳು 45 ವರ್ಷದ ಲೀಲಾವತಿ ಮತ್ತು ಸುಮಾರು 17 ವರ್ಷದ ರಿಷಿತಾ ರನ್ನು ಕೂಡಲೆ ಕಾಮಗೆರೆಯ ಹೋಲಿಕ್ರಾಸ್ ಆಸ್ಪತ್ರೆಗೆ ಸಕಾಲದಲ್ಲಿ ದಾಖಲಿಸಿ ಚಿಕಿತ್ಸೆ ಕೊಡಿಸಿ ಪೋಲಿಸರು ಪ್ರಾಣ ಉಳಿಸಿದ್ದಾರೆ.
ಇನ್ನು ಮೃತ ಮಹದೇವನಾಯಕರ ಮಗಳು ಲೀಲಾವತಿಯ ಸ್ಥಿತಿ ಚಿಂತಾಜನಕವಾಗಿದ್ದು ಚಿಕಿತ್ಸೆ ಮುಂದುವರಿದಿದೆ ಎನ್ನಲಾಗಿದೆ.ಇನ್ನೂ ಘಟನಾ ಸ್ಥಳಕ್ಕೆ ಡಿವೈಎಸಪಿ ದೇವೆಂದ್ರ ಸರ್ಕಾಲ್ ಇನ್ಸಪೆಕ್ಟರ್ ಜಗದೀಶ್ ಭೇಟಿ ನೀಡಿ ಕ್ರಮಕೈಗೊಂಡಿದ್ದು ,ಮಲೆಮಹದೇಶ್ವರ ಬೆಟ್ಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.