ಗದಗ:- ಗಂಜೀ ಬಸವೇಶ್ವರ ಜಾತ್ರೆ ಹಾಗೂ ಬಸವ ಜಯಂತಿ ಹಿನ್ನೆಲೆ ಗದಗನಲ್ಲಿ ರೈತಮಿತ್ರ ರಾಸುಗಳ ಮೆರವಣಿಗೆ ನಡೆದಿದೆ.
ಗದಗ ನಗರದ ಪ್ರಮುಖ ಬೀದಿಗಳಲ್ಲಿ ಜೋಡೆತ್ತು ಮತ್ತು ಹೋರಿಗಳ ಮೆರವಣಿಗೆ ನಡೆದಿದೆ. ಬಿರು ಬಿಸಿಲಿನಲ್ಲೂ ಹಬ್ಬದ ಸಂಭ್ರಮ ಮನೆ ಮಾಡಿದೆ. ಎತ್ತುಗಳಿಗೆ ಸಿಂಗರಿಸಿ ಬಸವೇಶ್ವರರ ಭಾವಚಿತ್ರ ಕಟ್ಟಿ ಮೆರವಣಿಗೆ ಮಾಡಲಾಗಿದೆ. ಮುಂಗಾರು ಪ್ರಾರಂಭಕ್ಕೂ ಮುನ್ನ ಸಂಭ್ರಮದಿಂದ ಗಂಜೀ ಬಸವೇಶ್ವರ ಜಾತ್ರೆಯನ್ನು ಜನತೆ ಆಚರಿಸಿದ್ದಾರೆ.
ಆ ಮೂಲಕ ಮಳೆ ಬೇಳೆ ಚೆನ್ನಾಗಿ ಆಗಲಿ, ಒಳ್ಳೆ ಫಸಲು ಬರಲಿ, ಬೆಳೆದ ಬೆಳೆಗಳಿಗೆ ಒಳ್ಳೇ ದರ ಸಿಗಲಿ ಎಂದು ರೈತಾಪಿ ವರ್ಗ ಮನವಿ ಮಾಡಿದ್ದಾರೆ.