ಆರ್ ಸಿ ಬಿ ಯ ಹೆಚ್ಚಿನ ಆಟಗಾರರಿಗೆ ಇಂಗ್ಲೀಷ್ ಕೂಡ ಅರ್ಥವಾಗುವುದಿಲ್ಲ ಎಂದು ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಹೇಳಿದ್ದಾರೆ.
ಪ್ರಸಕ್ತ ಐಪಿಎಲ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಕಳಪೆ ಪ್ರದರ್ಶನವು ಕಳವಳಕಾರಿಯಾಗಿದೆ. ಆರ್ ಸಿ ಬಿ ತಂಡವು ಹಲವಾರು ವಿಚಾರಗಳನ್ನು ಬಗೆಹರಿಸಿಕೊಳ್ಳಬೇಕಾಗಿದೆ ಎಂದರು.
Bengaluru: ರಸ್ತೆ ಬದಿ ನಿಂತಿದ್ದ ಖಾಸಗಿ ಬಸ್ ಅಗ್ನಿ ಅವಘಡದಲ್ಲಿ ಸುಟ್ಟು ಭಸ್ಮ !
ಭಾರತೀಯ ಸಹಾಯಕ ಸಿಬ್ಬಂದಿಯ ಕೊರತೆಯು ಪ್ರಮುಖ ಚಿಂತೆಯ ವಿಚಾರವಾಗಿದ್ದು ದೇಶೀಯ ಆಟಗಾರರಿಗೆ ತಮ್ಮ ಅಭಿಪ್ರಾಯವನ್ನು ಮುಕ್ತವಾಗಿ ಅಭಿವ್ಯಕ್ತಪಡಿಸಲು ಇದು ತೊಡಕಾಗಿ ಪರಿಣಮಿಸಿದೆ ಎಂದು ಸೆಹ್ವಾಗ್ ಅಭಿಪ್ರಾಯಪಟ್ಟಿದ್ದಾರೆ.
ನೀವು 12ರಿಂದ 15 ಭಾರತೀಯ ಆಟಗಾರರು, ಕೇವಲ 10 ವಿದೇಶಿ ಆಟಗಾರರನ್ನು ಹೊಂದಿರುವಾಗ ಸಂಪೂರ್ಣ ಸಹಾಯಕ ಸಿಬ್ಬಂದಿ ವಿದೇಶಿಗರಾಗಿದ್ದರೆ ಅದು ಸಮಸ್ಯೆಯಾಗುತ್ತದೆ. ಇದರಲ್ಲಿ ಕೆಲವರು ಮಾತ್ರ ಅಂತರರಾಷ್ಟ್ರೀಯ ಆಟಗಾರರಾಗಿದ್ದು, ಉಳಿದವರೆಲ್ಲರೂ ಭಾರತೀಯರಾಗಿದ್ದರೆ, ಅದರಲ್ಲಿ ಅರ್ಧದಷ್ಟು ಆಟಗಾರರಿಗೆ ಇಂಗ್ಲಿಷ್ ಅರ್ಥವಾಗುವುದಿಲ್ಲ. ಆಗ ನೀವು ಅವರನ್ನು ಹೇಗೆ ಪ್ರೇರೇಪಿಸುತ್ತೀರಿ? ಅವರೊಂದಿಗೆ ಸಮಯ ಕಳೆಯುವವರು ಯಾರು? ಅವರೊಂದಿಗೆ ಯಾರು ಮಾತನಾಡುತ್ತಾರೆ? ನನಗೆ ಒಬ್ಬರೂ ಭಾರತದ ಸಹಾಯಕ ಸಿಬ್ಬಂದಿ ಕಾಣಿಸುತ್ತಿಲ್ಲ. ಕನಿಷ್ಠ ಒಬ್ಬ ಆಟಗಾರನಾದರೂ ಇರಬೇಕಿತ್ತು ಎಂದು ಸೆಹ್ವಾಗ್ ಅವರು ಕ್ರಿಕ್ಬಝ್ ನಲ್ಲಿ ತಿಳಿಸಿದ್ದಾರೆ.
ಹರಾಜು ಪ್ರಕ್ರಿಯೆಯಿಂದ ಹಿಡಿದು ಮ್ಯಾನೇಜ್ಮೆಂಟ್ ತನಕ ಸಮಸ್ಯೆ ಏನೆಂದು ನನಗೆ ಗೊತ್ತಿದೆ. ಈ ಫ್ರಾಂಚೈಸಿಯ ಎಲ್ಲ ಉತ್ತಮ ಆಟಗಾರರು ಬಿಟ್ಟುಹೋಗುತ್ತಿದ್ದಾರೆ ಹಾಗೂ ಇತರ ತಂಡಗಳಲ್ಲಿ ಆಡುತ್ತಿದ್ದಾರೆ. ಈ ಋತುವಿನ ಐಪಿಎಲ್ ನಲ್ಲಿ ಗರಿಷ್ಠ ವಿಕೆಟ್ ಪಡೆದಿರುವ ಯಜುವೇಂದ್ರ ಚಹಾಲ್ ಅವರಲ್ಲಿ ಒಬ್ಬರಾಗಿದ್ದಾರೆ ಎಂದು ತಿವಾರಿ ಹೇಳಿದ್ದಾರೆ