ಬೆಂಗಳೂರು:- ಕೇಂದ್ರದಿಂದ ಬಿಡುಗಡೆಯಾಗುವ ಅನುದಾನದಲ್ಲಿ ತಾರತಮ್ಯ ಆಗುತ್ತಿದೆ ಎಂದು CM ಸಿದ್ದರಾಮಯ್ಯ ಹೇಳಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು,ದೇಶದ ಸಾರ್ವಭೌಮ್ಯತೆ ಅತಿ ಮುಖ್ಯವಾದದ್ದು, ನಾವು ಒಕ್ಕೂಟ ವ್ಯವಸ್ಯೆಯನ್ನು ಒಪ್ಪಿಕೊಂಡಿರುವುದರಿಂದ ರಾಜ್ಯ ಸರ್ಕಾರಗಳು ಕೇಂದ್ರ ಸರ್ಕಾರದ ಮುಂದೆ ಬೇಡಿಕೆಗಳನ್ನಿಡುತ್ತವೆ ಎಂದರು.
ತೆರಿಗೆ ಹಣ ಹಂಚಿಕೆ ವಿಷಯಕ್ಕೆ ಬಂದರೆ, ತೆರಿಗೆಗಳಿಂದ ಸಂಗ್ರಹವಾಗುವ ಅತಿಹೆಚ್ಚು ಮೊತ್ತವನ್ನು ಕೇಂದ್ರಕ್ಕೆ ಸಲ್ಲಿಸುವ ರಾಜ್ಯಗಳಲ್ಲಿ ಮಹಾರಾಷ್ಟ್ರ ಮೊದಲ ಸ್ಥಾನದಲ್ಲಿದ್ದರೆ ಕರ್ನಾಟಕ ಎರಡನೇ ಸ್ಥಾನದಲ್ಲಿದೆ ಎಂದು ಹೇಳಿದ ಸಿದ್ದರಾಮಯ್ಯ, ರಾಜ್ಯಕ್ಕೆ ಸಿಗುತ್ತಿರುವ ಪಾಲು ಬಹಳ ಕಡಿಮೆಯಾಗಿದೆ ಎಂದರು. 15ನೇ ಹಣಕಾಸು ಬಜೆಟ್ ನಲ್ಲಿ 14ನೇ ಹಣಕಾಸು ಬಜೆಟ್ ಗಿಂತ ಕಡಿಮೆ ಅನುದಾನ ರಾಜ್ಯಕ್ಕೆ ಸಿಕ್ಕಿದೆ ಎಂದು ಸಿದ್ದರಾಮಯ್ಯ ಹೇಳಿದರು. ರಾಯಚೂರಲ್ಲಿ ಏಮ್ಸ್ ಸೇರಿದಂತೆ ರಾಜ್ಯದ ಹಲವಾರು ಬೇಡಿಕೆಗಳನ್ನು ಬಜೆಟ್ ನಲ್ಲಿ ಕಡೆಗಣಿಸಲಾಗಿದೆ ಎಂದು ಮುಖ್ಯಮಂತ್ರಿ ಹೇಳಿದರು.