ಹಾವೇರಿ: ಇದು ವಿಧಿಯ ಆಟವಲ್ಲದೇ ಮತ್ತೇನು ಅಲ್ಲ..ಒಂದೇ ಕುಟೂಂದ 13 ಸದಸ್ಯರನ್ನು ಕಳೆದುಕೊಂಡ ಬಂಧುಗಳ ನೋವು ಹೇಳತೀರದಾಗಿದೆ.ಹೌದು ಹಾವೇರಿಯಲ್ಲಿ ನಿಂತಿದ್ದ ಲಾರಿಗೆ ಟಿಟಿ ಅಪ್ಪಳಿಸಿದ ಪರಿಣಾಮ ಅಪಘಾತದಲ್ಲಿ ಭದ್ರಾವತಿ ತಾಲೂಕಿನ ಎಮ್ಮೆಹಟ್ಟಿ ಗ್ರಾಮದ ಒಂದೇ ಕುಟುಂಬದ 13 ಸದಸ್ಯರು ಧಾರುಣ ಸಾವು ಕಂಡಿದ್ದಾರೆ. ಈ ಸಾವಿನಿಂದಾಗಿ ಇಡೀ ಗ್ರಾಮದಲ್ಲಿ ನೀರವ ಮೌನ ಆವರಿಸಿದೆ. ಸತ್ತ 13 ಮಂದಿ ಬಡ ಕುಟುಂಬದವರೇ ಆಗಿದ್ದು,
ಒಬ್ಬೊಬ್ಬರಕದ್ದು ಒಂದೊಂದು ಬೆವರಿನ ಕಥೆ ಇದೆ. ಆದರೆ ಎಲ್ಲಕ್ಕಿಂತಲೂ ಮನ ಕಲುಕುವುದು ಮಾನಸ (24) ಎಂಬ ಅಂಧೆ ಸಾವು. ಮಾನಸ ಅಂಧೆಯಾದ್ರೂ, ಭದ್ರಾವತಿ ತಾಲೂಕಿಗೆ ಹೆಮ್ಮೆಯ ಪುತ್ರಿಯಾಗಿದ್ದಳು. ಯಾಕೆಂದರೆ ಅಂಧೆಯಾದ್ರೂ, ಎಎಸ್ಸಿ ಪದವಿಯನ್ನು ಮಾಡಿದ್ದ ಮಾನಸ ಅಂಧರ ಪುಟ್ ಬಾಲ್ ನಲ್ಲಿ ಭಾರತ ಕ್ಯಾಪ್ಟನ್ ಆಗಿದ್ದಳು. ಹಲವು ಪಂದ್ಯಗಳನ್ನು ಗೆದ್ದು ದೇಶಕ್ಕೆ ಕೀರ್ತಿ ತಂದಿದ್ದಾಳೆ.
ʼʼಚೆಂಡು ಹೂʼʼ ಪೂಜೆಗಷ್ಟೇ ಅಲ್ಲ, ನಿಮ್ಮ ಮುಖದ ಸೌಂದರ್ಯಕ್ಕೂ ಉಪಯೋಗ..! ಹೇಗೆ ಗೊತ್ತಾ..?
ಬ್ರೆನ್ ಲಿಪಿ ಮೂಲಕ ಎಎಸ್ಪಿ ಮಾಡಿದ ಭದ್ರಾವತಿಯ ಮೊದಲ ಯುವತಿ ಮಾನಸ ಆಗಿದ್ದಾಳೆ. ಐಎಎಸ್ ಕನಸು ಕಂಡಿದ್ದ ಮಾನಸ ಅದಕ್ಕಾಗಿ ಬೆಂಗಳೂರಿನಲ್ಲಿ ಅಭ್ಯಾಸ ಮಾಡುತ್ತಿದ್ದಳು. ಐಎಎಸ್ ತನ್ನ ಪರಮ ಗುರಿ ಎಂದುಕೊಂಡಿದ್ದ ಮಾನಸ ದೇವರ ಬಳಿ ಆಶಿರ್ವಾದ ಪಡೆಯಲೆಂದು ಕುಟುಂಬಸ್ಥರೊಂದಿಗೆ ಹೋಗಿದ್ದಳು. ಆದರೆ ಅಲ್ಲಿ ವಿಧಿಯಾಟವೇ ಬೇರೆಯಾಗಿತ್ತು ಅಂತಾ ಕಾಣುತ್ತೆ. ಹಿಂದಿನ ದಿನ ತನ್ನ ಗ್ರಾಮದ ಜನರಿಗೆ ಸಂಬಂಧಿಕರಿಗೆ ಫೋನ್ ಮಾಡಿ ನಾಳೆ ಬೆಳಿಗ್ಗೆ ಎಮ್ಮೆ ಹಟ್ಟಿಗೆ ಬರುವುದಾಗಿ ಹೇಳಿದ್ದ ಮಾನಸ ಮತ್ತೆ ಬಾರದ ಲೋಕಕ್ಕೆ ತೆರಳಿದ್ದಾಳೆ. ಆಕೆಯ ಸಾವಿಗೆ ಇಡೀ ನಾಡು ಕಂಬನಿ ಮಿಡಿದಿದೆ.