ಗದಗ:- ವಿದ್ಯುತ್ ಕಂಬವೇರಿ ಕೆಲಸ ಮಾಡ್ತಿದ್ದ ವ್ಯಕ್ತಿ ಶಾಖ್ ನಿಂದ ಸಾವನ್ನಪ್ಪಿದ ಘಟನೆ ಗದಗ ಜಿಲ್ಲೆ ಮುಂಡರಗಿ ಪಟ್ಟಣದ ಹಳೇ ತಹಶೀಲ್ದಾರ ಕಚೇರಿ ಬಳಿ ಜರುಗಿದೆ.
Kampli: SSLC ಫಲಿತಾಂಶ ಕುಸಿತ.. ಸುದ್ದಿಗೋಷ್ಠಿಯಲ್ಲಿ ಭೀಮ್ ಆರ್ಮಿ ಆಕ್ರೋಶ…!
ಲೈನ್ ಮ್ಯಾನ್ ಕೈ ಕೆಳಗೆ ಕೆಲಸ ಮಾಡ್ತಿದ್ದ ಗುರುಸಿದ್ದಯ್ಯ ಹಿರೇಮಠ ಮೃತ ವ್ಯಕ್ತಿ ಎನ್ನಲಾಗಿದೆ. ಹಲವು ವರ್ಷಗಳಿಂದ ಲೈನ್ ಮ್ಯಾನ್ ಬಳಿ ಗುರುಸಿದ್ದಯ್ಯ ಕೆಲಸ ಮಾಡುತ್ತಿದ್ದ. ಲೈನ್ಮ್ಯಾನ್ ಸೂಚನೆ ಮೇರೆಗೆ ವಿದ್ಯುತ್ ಕಂಬ ಏರಿ ಕೆಲಸ ಮಾಡುತ್ತಿದ್ದ. ಈ ವೇಳೆ ವಿದ್ಯುತ್ ಶಾಖ್ ಸಂಭವಿಸಿ ಅವಘಡ ಸಂಭವಿಸಿದೆ.
ಘಟನೆಗೆ ಅಧಿಕಾರಿಗಳ ನಿರ್ಲಕ್ಷವೇ ಕಾರಣ ಅಂತ ಸ್ಥಳೀಯರ ದೂರು ನೀಡಿದ್ದಾರೆ. ಮುಂಡರಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.