ಶಿವಮೊಗ್ಗ: 2ಜಿ ಸ್ಪೆಕ್ಟ್ರಮ್, ಕಾಮನ್ವೆಲ್ತ್ ಗೇಮ್ಸ್, ನ್ಯಾಷನಲ್ ಹೆರಾಲ್ಡ್, ಬೋಫೋರ್ಸ್, ಆದರ್ಶ ಹೌಸಿಂಗ್ ಸೊಸೈಟಿಯಂತಹ ದೊಡ್ಡ ಹಗರಣಗಳನ್ನೇ ನಡೆಸಿರುವ ಕಾಂಗ್ರೆಸ್ಸಿಗರದ್ದು ‘ಇಂಡಿಯನ್ ನ್ಯಾಷನಲ್ ಕರಪ್ಶನ್ ಪಾರ್ಟಿ’ ಎಂಬುದು ಮತ್ತೊಮ್ಮೆ ಸಾಬೀತಾಗಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಲೇವಡಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿಮಾತನಾಡಿ, ರಾಜ್ಯ ರಾಜಕೀಯ ಇತಿಹಾಸದಲ್ಲಿಹಿಂದೆಂದೂ ಇಲ್ಲದಷ್ಟು ಹಗರಣಗಳು ಕಾಂಗ್ರೆಸ್ ಸರಕಾರದ ಅವಧಿಯಲ್ಲಿಬೆಳಕಿಗೆ ಬಂದಿವೆ. ಆ ಮೂಲಕ ತಮ್ಮದು ಇಂಡಿಯನ್ ನ್ಯಾಷನಲ್ ಕರಪ್ಶನ್ ಪಾರ್ಟಿ ಎಂದು ಸಾಬೀತುಪಡಿಸುತ್ತಲೇ ಇದ್ದಾರೆ ಎಂದು ಟೀಕಿಸಿದರು.
ಮೂತ್ರ ವಿಸರ್ಜನೆ ವೇಳೆ ಕೆಟ್ಟ ವಾಸನೆ ಬರುತ್ತಿದೆಯೇ..? ಹಾಗಾದ್ರೆ ಈ ಕಾಯಿಲೆಗಳ ಸೂಚನೆ ಇರಬಹುದು.!
ತಮ್ಮ ಹಗರಣಗಳು ಬೆಳಕಿಗೆ ಬರುತ್ತಿದ್ದಂತೆ ಪ್ರತಿಪಕ್ಷಗಳ ಹಗರಣಗಳನ್ನು ಬಯಲಿಗೆಳೆಯುತ್ತೇವೆ ಎಂದು ಬೆದರಿಕೆ ಹಾಕುತ್ತಿದ್ದಾರೆ. ಪ್ರತಿಪಕ್ಷಗಳ ಮುಖಂಡರನ್ನು ಇಲ್ಲದ ಹಗರಣದಲ್ಲಿ ಸಿಲುಕಿಸುವ ಪ್ರಯತ್ನ ನಡೆಸುತ್ತಿದ್ದಾರೆ. ಅದಕ್ಕಾಗಿ ಸಭೆಗಳನ್ನು ನಡೆಸಿ ಅಧಿಕಾರಿಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಇದರ ಭಾಗವಾಗಿಯೆ ಹಳೇ ಪ್ರಕರಣವನ್ನು ಮುಂದಿಟ್ಟುಕೊಂಡು ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ವಿರುದ್ಧ ಸುಳ್ಳು ಆಪಾದನೆ ಮಾಡುತ್ತಿದ್ದಾರೆ ಎಂದು ಟೀಕಿಸಿದರು.