ಬಾಗಲಕೋಟೆ:- ಇಂದಿನ ಆದುನಿಕ ಜಗತ್ತಿನ ಜಂಜಾಟದಲ್ಲಿ ಸಮಯದ ಕೊರತೆಯಿಂದ ಪಾಲಕರು ಮಕ್ಕಳ ಜೊತೆಗಿನ ಸಮಯವನ್ನು ಕಳೆಯದೆ ಇರುವದು ಮಕ್ಕಳ ಮಾನಸಿಕತೆಗೆ ಕಾರಣವಾಗಬಹುದು, ಈ ಹಿನ್ನೆಲೆಯಲ್ಲಿ ಮಕ್ಕಳ ಜೊತೆ ಸ್ವಲ್ಪ ಸಮಯ ಕಳೆದು ಮಕ್ಕಳನ್ನು ಸಂತೋಷ ಪಡಿಸುವದರ ಜೊತೆಗೆ ಸಾಕಾರಾತ್ಮಕ ಭಾವನೆಗಳಿಗೆ ಕಾರಣವಗಬಹುದು ಎಂದು ಶಾಂತಿನಿಕೇತನ ಶಾಲೆಯ ಶಿಕ್ಷಕಿ ಪೂಜಾ ಅವರು ಅಭಿಪ್ರಾಯ ವ್ಯಕ್ತಪಡಿಸಿದರು
ಬಾಗಲಕೋಟ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಮದಭಾವಿ ಗ್ರಾಮದ ಶಾಂತಿನಿಕೇತನ ಆಂಗ್ಲಮಾಧ್ಯಮ ಶಾಲೆಯಲ್ಲಿ ಹಮ್ಮಿಕೊಂಡಿದ್ದ ತಾಯಿಯಂದಿರ ಸಭೆಯಲ್ಲಿ ಮಾತನಾಡಿದ ಅವರು ಮಕ್ಕಳಿಗೆ ಮೊಬೈಲ್, ಟಿವಿ, ಸೀರಿಯಲ್, ಗಳಿಂದ ದೂರವಿಟ್ಟು ಅವರಲ್ಲಿಯ ಸೂಕ್ತ ಪ್ರತಿಭೆಯನ್ನು ಗುರುತಿಸಿ ಸಾಕಾರಾತ್ಮಕ ಅಂಶಗಳ ಆಗರವಾಗಿ ಮಗುವನ್ನು ಬೆಳೆಸುವದಕ್ಕೆ ಸಹಕಾರ ನೀಡಬೇಕು ಎಂಬು ಅಭಿಪ್ರಾಯ ಪಟ್ಟರು
ಒಂದು ಮಗವಿನ ಎಲ್ಲಾ ರೀತಿಯ ಬೆಳವಣಿಗೆಗೆ ತಾಯಿಯ ಕೊಡುಗೆ ಆಪಾರವಾಗಿದೆ ” ಜನನಿ ತಾನೇ ಮೊದಲ ಗುರು ” ಎಂಬ ಅರ್ಥ ಬಹಳ ಸ್ತುತ್ಯವಾಗಿದೆ ಎಂದು ಶಾಲಾ ನಿರ್ದೇಶಕರೋರವರು ಅಭಿಪ್ರಾಯ ಪಟ್ಟರು
ನೂರಾರು ಸಂಖ್ಯೆಯಯಲ್ಲಿ ತಾಯಿಯಂದಿರು ಸಭೆಯಲ್ಲಿ ಪಾಲ್ಗೊಂಡು ಶಾಲಾ ವಾರ್ಷಿಕಸ್ನೇಹ ಸಮ್ಮೇಳನ ಕುರಿತು ಹಲವಾರು ಚರ್ಚೆಗಳು ನಡೆದವು
ಶಾಲಾ ಆಡಳಿತಮಂಡಳಿ ಹಾಗೂ ಶಾಲಾ ಸಿಬ್ಬಂದಿ ಮಕ್ಕಳು ಪಾಲಕ ಪೋಷಕರು ಹಾಜರಿದ್ದರು
ವರದಿ = ಎಂ. ಕೆ. ಸಪ್ತಸಾಗರ
ಜಿಲ್ಲಾ ವರದಿಗಾರರು ಬಾಗಲಕೋಟ