ಭಾರತ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರು ಚೆನ್ನೈ ಸೂಪರ್ ಕಿಂಗ್ಸ್ ನಾಯಕತ್ವಕ್ಕೆ ಗುಡ್ಬೈ ಹೇಳಿದ್ದಾರೆ.
ನಾಳೆಯಿಂದಲೇ ಐಪಿಎಲ್-2024 ಟೂರ್ನಿ ಆರಂಭವಾಗಲಿದ್ದು, CSK ತಂಡದಲ್ಲಿ ಮಹತ್ವದ ಬದಲಾವಣೆ ಮಾಡಲಾಗಿದೆ. ಈ ಬಗ್ಗೆ ಚೆನ್ನೈ ತಂಡ ಎಕ್ಸ್ ಖಾತೆಯಲ್ಲಿ ಅಧಿಕೃತ ಪ್ರಕಟಣೆ ಹೊರಡಿಸಿದೆ.
ಧೋನಿ ಬದಲಿಗೆ ಚೆನ್ನೈ ತಂಡ ಆರಂಭಿಕ ಬ್ಯಾಟರ್ ಋತುರಾಜ್ ಗಾಯಕ್ವಾಡ್ ಅವರನ್ನು ನೂತನ ನಾಯಕರಾಗಿ ಆಯ್ಕೆ ಮಾಡಲಾಗಿದೆ. ಸದ್ಯ ಐಪಿಎಲ್ ಟ್ರೋಫಿಯೊಂದಿಗೆ 10 ತಂಡಗಳ ನಾಯಕರು ನೀಡಿದ ಫೋಟೋ ಶೂಟ್ನಲ್ಲಿ ಧೋನಿ ಬದಲು ಋತುರಾಜ್ ಗಾಯಕ್ವಾಡ್ ಕಾಣಿಸಿಕೊಂಡಿದ್ದಾರೆ.
ಮೊದಲೇ ಸುಳಿವು ನೀಡಿದ್ದ ಧೋನಿ
ಐಪಿಎಲ್-2024ಗೂ ಮುನ್ನವೇ ಎಂ.ಎಸ್. ಧೋನಿ ನಾಯಕತ್ವ ತ್ಯಜಿಸುವ ಬಗ್ಗೆ ಸುಳಿವು ನೀಡಿದ್ದರು. ಸ್ವತಃ ಧೋನಿಯೇ ಫೇಸ್ಬುಕ್ನಲ್ಲಿ ಪೋಸ್ಟ್ ಮಾಡಿದ್ದರು. Can’t wait for the new season and the new ‘role’. Stay tuned!. ‘ಹೊಸ ಸೀಸನ್ನಲ್ಲಿ, ಹೊಸ ರೋಲ್ನಲ್ಲಿ ಕಾಣಿಸಿಕೊಳ್ಳಲು ಕಾಯುತ್ತಿದ್ದೇನೆ’ ಎಂದು ಧೋನಿ ಅವರು ತಮ್ಮ ಫೇಸ್ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದರು.
ಹೊಸ ರೋಲ್ನಲ್ಲಿ ಧೋನಿ
ಕ್ರಿಕೆಟ್ ಪ್ರೇಮಿಗಳು ಕಾಯುತ್ತಿದ್ದ ಐಪಿಎಲ್ 17ನೇ ಸೀಸನ್ ನಾಳೆಯಿಂದ (ಮಾರ್ಚ್ 22) ಪ್ರಾರಂಭವಾಗಲಿದೆ. ಮೊದಲ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಸೆಣಸಾಡಲಿದೆ. ಈ ಪಂದ್ಯದಲ್ಲಿ ಧೋನಿ ಹೊಸ ರೋಲ್ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಧೋನಿ ನಾಯಕತ್ವದಲ್ಲಿ 5 ಬಾರಿ ಚಾಂಪಿಯನ್
- 2010 ರಲ್ಲಿ ಚಾಂಪಿಯನ್
- 2011 ರಲ್ಲಿ ಚಾಂಪಿಯನ್
- 2018 ರಲ್ಲಿ ಚಾಂಪಿಯನ್ಸ್
- 2021 ರಲ್ಲಿ ಚಾಂಪಿಯನ್ಸ್
- 2023 ರಲ್ಲಿ ಚಾಂಪಿಯನ್ಸ್