ಬೆಂಗಳೂರು: ಬೆಂಗಳೂರನೇ ಬೆಚ್ಚಿಬಿಳಿಸಿತ್ತು ಮಹಾಲಕ್ಷ್ಮಿ ಕೊಲೆ ಪ್ರಕರಣ.. ಈಗಾಗಲೇ ಪೊಲೀಸರ ತನಿಖೆ ಚುರುಕಾಗಿದ್ದು..ಆರೋಪಿಯನ್ನು ಹೆಡೆಮುರಿ ಕಟ್ಟಲು ಪೊಲೀಸರು ತಂಡ ರಚನೆ ಮಾಡಿದ್ದಾರೆ.. ಹಾಗಾದರೆ ಮಹಿಳೆಯನ್ನು ಕೊಲೆ ಮಾಡಲು ಉದ್ದೇಶವಾದ್ರು ಏನಿತ್ತು..? ನೇಪಾಳದ ಮಹಾಲಕ್ಷ್ಮಿಯನ್ನ ಆ ರೀತಿ ಕೊಂದಿದ್ಯಾಕೆ..? ಕೊಲೆ ಮಾಡಿದ್ದು ಹೇಗೆ..? ಕೊಲೆಗೆ ಕಾರಣ ಏನು ಅನ್ನೊನದನ್ನು ಹೇಳ್ತೀವಿ ನೋಡಿ. ಯೆಸ್ ವೈಯಾಲಿಕಾವಲ್ ಠಾಣಾ ವ್ಯಾಪ್ತಿಯಲ್ಲಿ ಮಹಾಲಕ್ಷ್ಮಿ ಕೊಲೆ ಪ್ರಕರಣದ ಜಾಡುಹಿಡಿದು ಬೇರೆ ರಾಜ್ಯಗಳಿಗೆ ಹೊರಟ ಪೊಲೀಸರು..
ಮತ್ತೊಂದು ಕಡೆ ಪ್ರಕರಣ ಸಂಬಂಧಿಸಿದಂತೆ ಪರಸಂಗದ ಪೀಕಲಾಟಕ್ಕೆ ಕೊಲೆಯಾದಳಾ ಎಂಬ ಹಲವು ಅನುಮಾನ ಮೂಡುತ್ತಿದ್ದೆ… ಬಿಹಾರ ಮೂಲದ ವ್ಯಕ್ತಿ ಜೊತೆ ಮಹಾಲಕ್ಷ್ಮಿ ಆತ್ಮೀಯವಾಗಿ ಇದ್ದಳಂತೆ. ಆದರೆ ಕೆಲ ದಿನಗಳಿಂದ ಇಬ್ಬರ ಸಂಬಂಧದಲ್ಲಿ ಬಿರುಕು ಬಿಟ್ಟಿತ್ತು ಎನ್ನಲಾಗಿದೆ. ಹೀಗಾಗಿ ಬಿಹಾರದ ವ್ಯಕ್ತಿಯ ಮೇಲೆ ಅನುಮಾನ ಸಾಕಷ್ಟು ಮೂಡಿದೆ. 10 ದಿನವಾದರೂ ಯಾರಿಗೂ ವಿಷಯ ತಿಳಿಯದ ಕಾರಣ, ಮೆನೆಯ ಮಾಲೀಕ ಜೀವನ ಪ್ರಕಾಶ್ ಎಂಬುವ ವ್ಯಕ್ತಿ ಮೃತ ಮಹಾಲಕ್ಷ್ಮಿ ತಾಯಿ ಮೀನಾಗೆ ಕಾಲ್ ಮಾಡಿ ಮಹಾಲಕ್ಷ್ಮಿ ಮನೆಯಿಂದ ವಾಸನೆ ಬರ್ತಿದೆ ಬಂದು ನೋಡಿ ಅಂತಾ ಹೇಳಿದ್ದನಂತೆ.
ಬಳಿಕ ತಾಯಿ ಹಾಗೂ ಅಕ್ಕ ಇಬ್ಬರು ಬಂದು ಮನೆ ಬಾಗಿಲು ತೆಗೆದು ನೋಡಿದಾಗ ಮಹಾಲಕ್ಷ್ಮಿ ಕೊಲೆಯಾಗಿರುವ ಘಟನೆ ಬೆಳಕಿಗೆ ಬಂದಿದೆ. ವಿಷಯ ತಿಳಿಯುತ್ತಿದ್ದಂತೆ ವೈಯಾಲಿಕಾವಲ್ ಠಾಣಾ ಪೊಲೀಸರು ಸ್ಥಳಕ್ಕೆ ಬಂದು ತನಿಖೆ ಕೈಗೊಳ್ಳುತ್ತಿದ್ದಂತೆ ಪೊಲೀಸರು ಆರೋಪಿ ಬೆನ್ನು ಹಿಂದೆ ಬಿದ್ದಿದ್ದಾರೆ. ಕೊಲೆ ಪ್ರಕರಣವನ್ನು ಗಂಭೀರವಾಗಿರ ತೆಗೆದುಕೊಂಡಿರೋ ಪೊಲೀಸ್ ಇದೀಗ ಆರೋಪಿ ಪತ್ತೆಗ ಹತ್ತು ಆರು ತಂಡಗಳನ್ನು ರಚನೆ ಮಾಡಿದ್ದಾರೆ..
Sunday Special Recipe: ಭಾನುವಾರದ ಬಾಡೂಟಕ್ಕೆ ಮನೆಯಲ್ಲಿಯೇ ಮಾಡಿ ರುಚಿಯಾದ ಕಲ್ಮಿ ಕಬಾಬ್!
ಹೌದು..ವೈಯಾಲಿಕಾವಲ್ ಠಾಣಾ ವ್ಯಾಪ್ತಿಯಲ್ಲಿ ಮಹಾಲಕ್ಷ್ಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಒಂದೊಂದೆ ವಿಚಾರಗಳು ಹೊರಬರುತ್ತಿದೆ. ಖಾಸಗಿ ಮಾಲ್ ನಲ್ಲಿ ಕೆಲಸ ಮಾಡಿಕೊಂಡಿದ್ದ ಮಹಾಲಕ್ಷ್ಮಿಗೆ ಅಲ್ಲಿದ್ದ ಬಿಹಾರ ಮೂಲದ ಯುವಕ ಪರಿಚಯವಾಗಿದ್ದನಂತೆ.. ಆ ಯುವಕ ಆಕೆಯನ್ನಯ ದಿನವೂ ಪಿಕ್ ಆ್ಯಂಡ್ ಡ್ರಾಪ್ ಮಾಡುತ್ತಿದ್ದನಂತೆ. ಆತನಿಂದಲೇ ಮಹಾಲಕ್ಷ್ಮಿಯ ಘೋರ ಹತ್ಯೆಯಾಗಿದೆ ಅನ್ನೋ ಅನುಮಾನ ವ್ಯಕ್ತವಾಗಿದೆ. ಅಲ್ಲದೇ ಮಹಾಲಕ್ಷ್ಮಿ ಮದುವೆಯಾಗಿದ್ರೂ ಮಹಾಲಕ್ಷ್ಮಿಯೊಂದಿಗೆ ಆತನ ಸಂಬಂಧ ಇತ್ತು ಅನ್ನು ಅನುಮಾನ ಸಾಕಷ್ಟು ಹುಟ್ಟಿಕೊಂಡಿದೆ.. ಅಲ್ಲದೇ ಆತನ ಮೇಲೆ ಮಹಾಲಕ್ಷ್ಮಿಯ ಕುಟುಂಬಸ್ಥರು ಆರೋಪ ಮಾಡಿದ್ದಾರೆ.
ಮಹಾಲಕ್ಷ್ಮಿಯೊಂದಿಗೆ ಬಿಹಾರ ಮೂಲದ ಯುವಕ ಆಕೆಯೊಂದಿಗೆ ಬಹಳ ಆತ್ಮೀಯವಾಗಿ ಆಕೆಯ ಜೊತೆಗೆ ಓಡಾಡುತ್ತಿದ್ದನಂತೆ.. ರಾತ್ರಿ ಹತ್ತು ಗಂಟೆ ಮೇಲೆ ಆಕೆಯ ಜೊತೆಗೆ ಮನೆಗೆ ಬಂದು ಸ್ವಲ್ಪ ಹೊತ್ತು ಇದ್ದು ಮಧ್ಯರಾತ್ರಿ ಏರಿಯಾ ಸೈಲೆಂಟ್ ಆದಾಗ ವಾಪಸು ಹೋಗ್ತಿದ್ದನಂತೆ.. ಆಕೆಯ ಜೊತೆಗೆ ಸಂಭೋಗ ನಡೆಸಿ ಬಳಿಕ ತನ್ನ ತೀಟೆ ತೀರಿಸಿಕೊಂಡು ಉಸಿರುಗಟ್ಟಿಸಿ ಕೊಂದು ಹಾಕಿ ಎಸ್ಕೇಪ್ ಅಗಿದ್ದಾನೆಂತೆ ಬಿಹಾರದ ಪಾಪಿ ಯುವಕ. ಗಂಡನ ತೊರೆದು ಬಂದಿದ್ದ ಮಹಾಲಕ್ಷ್ಮೀ ಸೋದರನೊಂದಿಗೆ ವಾಸವಾಗಿದ್ದಳು. ಬಳಿಕ ಮಹಾಲಕ್ಷ್ಮಿ ತಾಯಿ ಮೀನಾ ರಾಣಾ ಆಗಾಗ ಮಗಳ ಮನೆಗೆ ಬಂದು ಯೋಗ ಕ್ಷೇಮ ವಿಚಾರಿಸಿಕೊಂಡು ಹೋಗುತ್ತಿದ್ದರು.
ಸೆಪ್ಟೆಂಬರ್ 2 ರಂದು ತಂದೆಗೆ ಕರೆ ಮಾಡಿದ್ದ ಮಹಾಲಕ್ಷ್ಮಿ ಮನೆಗೆ ಬರುವುದಾಗಿ ತಿಳಿಸಿದ್ದಳು. ಆದರೆ ಅದಾದ ಬಳಿಕ ಯಾರ ಸಂಪರ್ಕಕ್ಕೂ ಸಿಕ್ಕಿರಲಿಲ್ಲ. ಎರಡು ದಿನಗಳ ಹಿಂದೆ ಅಂದರೆ ಸೆಪ್ಟೆಂಬರ್ 20 ರಂದು ಸಂಜೆ 7 ಗಂಟೆ ಮೃತಳು ವಾಸವಾಗಿದ್ದ ಕಟ್ಟಡದಲ್ಲೆ ವಾಸವಾಗಿರುವ ಜೀವನ್ ಪ್ರಕಾಶ್ ಮನೆಯೊಳಗೆ ಏನೋ ವಾಸನೆ ಬರುತ್ತಿದೆ ಎಂದು ಮಹಾಲಕ್ಷ್ಮಿ ಸೋದರ ಉಕ್ಕುಂ ಸಿಂಗ್ಗೆ ಕಾಲ್ ಮಾಡಿ ಹೇಳಿದ್ದಾರೆ. ಉಕ್ಕು ಸಿಂಗ್ ಮತ್ತೊಬ್ಬ ಸಹೋದರಿ ಲಕ್ಷ್ಮಿಗೆ ಹೇಳಿ ಆಕೆ ತಾಯಿ ಮೀನಾ ರಾಣಾಗೆ ಕರೆ ಮಾಡಿದ್ದಾರೆ. ಫೋನ್ ಮಾಡಿ ಮಹಾಲಕ್ಷ್ಮಿ ಮನೆ ಬಳಿ ಏನೋ ವಾಸನೆ ಬರ್ತಿದೆಯಂತೆ ಎಂದು ಮಾಹಿತಿ ನೀಡಿದ್ದಳು. ಆ ದಿನ ರಾತ್ರಿಯಾದ ಕಾರಣ ಬೆಳಗ್ಗೆ ಹೋಗಿ ನೋಡೋಣ ಎಂದುಕೊಂಡಿದ್ದರು.
ದರಂತೆ ನಿನ್ನೆ ಅಂದರೆ ಸೆ.21ರ ಬೆಳಗ್ಗೆ ನೆಲಮಂಗಲದಿಂದ ವೈಯಾಲಿಕಾವಲ್ಗೆ ಮಹಾಲಕ್ಷ್ಮಿ ತಾಯಿ ಮತ್ತು ಸೋದರಿ ಬಂದಿದ್ದರು. ಆಗ ಮಹಾಲಕ್ಷ್ಮೀ ವಾಸವಾಗಿರುವ ಮನೆಗೆ ಬೀಗ ಹಾಕಿದ್ದರಿಂದ ಜೀವನ್ ಪ್ರಕಾಶ್ಗೆ ಫೋನ್ ಮಾಡಿ ಮನೆಯ ಬೀಗವನ್ನು ಕೇಳಿದ್ದಾರೆ. ಅಲ್ಲಿಯೇ ವಾಸವಾಗಿರೋ ಪೂಜಾ ರಾವತ್ರವರ ಬಳಿ ತೆಗೆದುಕೊಳ್ಳಲು ಸೂಚಿಸಿದ್ದಾರೆ. ಅವರಿಂದ ಬೀಗ ತೆಗೆದುಕೊಂಡು ಮನೆ ಬಾಗಿಲು ತೆರೆಯುತ್ತಿದ್ದಂತೆ ಬಟ್ಟೆಗಳೆಲ್ಲಾ ಮನೆಯ ತುಂಬಾ ಹರಡಿಕೊಂಡಿದ್ದ ದೃಶ್ಯ ಕಣ್ಣಿಗೆ ಬಿದ್ದಿತ್ತು. ಚಪ್ಪಲಿ, ಬ್ಯಾಗ್ ಎಲ್ಲಾ ವಸ್ತುಗಳು ಚೆಲ್ಲಾಪಿಲ್ಲಿಯಾಗಿ ಇದ್ದವು. ಹಾಲ್ನಲ್ಲಿರುವ ಫ್ರಿಡ್ಜ್ನಲ್ಲಿ ರಕ್ತ ಸೋರುತ್ತಿತ್ತು. ಮತ್ತೊಂದೆಡೆ ಹುಳಗಳು ಹರಿದಾಡುತ್ತಿದ್ದವು.
ಏನಿರಬಹುದೆಂದು ಫ್ರಿಡ್ಜ್ ತೆಗೆದು ನೋಡಿದರೆ ಮಹಾಲಕ್ಷ್ಮಿ ದೇಹವನ್ನು ತುಂಡು ತುಂಡಾಗಿ ಕತ್ತರಿಸಿ ಫ್ರಿಡ್ಜ್ನಲ್ಲಿನ ಎಲ್ಲಾ ಬಾಕ್ಸ್ಗಳಲ್ಲಿ ತುಂಬಲಾಗಿತ್ತು. ಬಳಿಕ ಗಾಬರಿಯಿಂದ ಮಗಳೊಂದಿಗೆ ಹೊರಗೆ ಬಂದು ಅಳಿಯ ಇಮ್ರಾನ್ಗೆ ತಿಳಿಸಿ, ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ. ಸದ್ಯ ಮಹಾಲಕ್ಷ್ಮಿ ಕೊಲೆಯ ಸುತ್ತು ಹಲವು ಅನುಮಾನಗಳ ಹುತ್ತು ಹುಟ್ಟಿಕೊಂಡಿದೆ. ಈಗಾಗಲೇ ಪೊಲೀಸರು ಸಿಸಿಟಿವಿ ಪರಿಶೀಲನೆ ಹಾಗೂ ಮನೆಯವರು ಹೇಳಿಕೆಗಳು ಆಧಾರದ ಮೇಲೆ ತನಿಖೆಯ ನಡೆಸುತ್ತಿದ್ದಾರೆ ಪೊಲೀಸರು.. ಒಟ್ನಿಲ್ಲಿ ಇಡೀ ನಗರವನ್ನೆ ಬೆಚ್ಚಿಬಿಳಿಸಿದ್ದ ನರಹಂತಕನನ್ನ ಪೊಲೀಸರು ಅದಾಷ್ಟು ಬೇಗ ಪತ್ತೆ ಮಾಡಿದ ಬಳಿಕ ಅಸಲಿ ಕಥೆ ಏನೋ ಅನ್ನೋದು ಗೊತ್ತಾಗಬೇಕಾಗಿದೆ