ಬೆಂಗಳೂರು: ನಿನ್ನೆ ಸುರಿದ ಮಳೆಯಿಂದಾಗಿ ಮಹದೇವಪುರ ವಿಧಾನಸಭಾ ಕ್ಷೇತ್ರದ ರಸ್ತೆಗಳು ಸಂಪೂರ್ಣ ದ್ವೀಪದಂತಾಗಿದ್ದು ಬಿಬಿಎಂಪಿಯ ವೈಫಲ್ಯವನ್ನು ಎತ್ತಿ ತೋರಿಸುತ್ತಿದೆ ಎಂದು ಇಂದು ಬೆಳಿಗ್ಗೆ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ರಸ್ತೆಗಳಿದು ಅಕ್ರೋಶ ವ್ಯಕ್ತಪಡಿಸಿದರು.
ಆಮ್ ಆದ್ಮಿ ಪಕ್ಷದ ಬೆಂಗಳೂರು ನಗರ ಸಂಘಟನಾ ಕಾರ್ಯದರ್ಶಿ ಅಶೋಕ್ ಮೃತ್ಯುಂಜಯ ಈ ಸಂದರ್ಭದಲ್ಲಿ ಮಾತನಾಡುತ್ತಾ ಸಾವಿರಾರು ಕೋಟಿ ತೆರಿಗೆಯನ್ನು ನೀಡುವ ಮಹದೇವಪುರ ವಲಯದ ರಸ್ತೆಗಳು ಸಣ್ಣ ಸಣ್ಣ ಮಳೆ ಬಂದಾಗಲೂ ಸಹ ಪ್ರತಿ ಬಾರಿಯೂ ಇದೇ ರೀತಿ ದ್ವೀಪದಂಥಾಗುತ್ತದೆ.
ಕೂಡಲೇ ಬಿಬಿಎಂಪಿ ರಸ್ತೆ ಸುಧಾರಣೆಯ ನೆಪದಲ್ಲಿ ನೂರಾರು ಕೋಟಿ ವೆಚ್ಚವನ್ನು ವ್ಯಯ ಮಾಡುತ್ತದೆ. ಮತ್ತದೇ ಮಳೆ ಬಂದಾಗ ಇದೇ ರೀತಿಯ ಕೆಟ್ಟ ಅವ್ಯವಸ್ಥೆ ಮುಂದುವರಿಯುತ್ತದೆ.
ಇದು ಸರ್ಕಾರದ ಹಾಗೂ ಬಿಬಿಎಂಪಿಯ ಬೇಜವಾಬ್ದಾರಿತನ ,ಭ್ರಷ್ಟ ಗುಳಿತನ, ಹಾಗೂ ನಿರ್ಲಕ್ಷ್ಯಕ್ಕೆ ಸ್ಪಷ್ಟ ಉದಾಹರಣೆಯಾಗಿದೆ. ಸ್ಥಳೀಯ ಶಾಸಕಿ ಮಂಜುಳಾ ಲಿಂಬಾವಳಿ ಸೇರಿದಂತೆ ಬಿಬಿಎಂಪಿಯ ಯಾವ ಉನ್ನತ ಅಧಿಕಾರಿಗಳು ಸಹ ಇತ್ತ ಕಡೆ ಗಮನ ಹರಿಸಿಲ್ಲ.
ಇಲ್ಲಿನ ನಾಗರೀಕರ ಬದುಕು ನರಕ ಸದೃಶವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.