ಮಹದೇವಪುರ: ಪ್ರತಿಯೊಬ್ಬರ ಉಳಿವಿಗೆ ಹಾಗೂ ಮುಂದಿನ ಪೀಳಿಗೆಗೆ ಪರಿಸರ ಅನಿವಾರ್ಯ, ಎಲ್ಲರೂ ಪರಿಸರ ಸಂರಕ್ಷಣೆ ಮಾಡಬೇಕಾಗಿದೆ ಎಂದು ಕಾಡುಗುಡಿ ಸರ್ಕಲ್ ಇನ್ಸ್ಪೆಕ್ಟರ್ ರಂಗಸ್ವಾಮಿ ಅಭಿಪ್ರಾಯಪಟ್ಟರು.
ಕಾಡುಗುಡಿ ಪೋಲಿಸ್ ಠಾಣೆ ಅಂಗಳದಲ್ಲಿ ಮಿಡಿತ ಫೌಂಡೇಶನ್ ಹಾಗೂ ಭಾರತೀಯ ಸ್ತ್ರೀ ಶಕ್ತಿ ಸಂಘಟನ ಟ್ರಸ್ಟ್ ವತಿಯಿಂದ ಆಯೋಜಿಸಿದ 101 ವೃಕ್ಷನಾಟಿ ಹಾಗೂ ವೃಕ್ಷ ಬಂಧನ ಕಾರ್ಯಕ್ರಮದಲ್ಲಿ ಭಾಗಿಯಾಗಿ ಗಿಡ ನೆಟ್ಟು ಮಾತನಾಡಿದ ಅವರು.
ಪರಿಸರ ಉಳಿದರೆ ಮಾತ್ರ ಭೂಮಿ ಉಳಿವುದು ಇದನ್ನು ಅರಿತು ಸಂಘಸಂಸ್ಥೆಗಳು ಯುವ ಸಮುದಾಯ ಪರಿಸರ ಸಂರಕ್ಷಣೆಗೆ ಮಾಡಬೇಕು ಎಂದರು.
ಸಾಲುಮರದ ತಿಮ್ಮಕ್ಕನವರಂತೆ ಪ್ರತಿಯೊಬ್ಬರು ಪರಿಸರ ಪ್ರೇಮವನ್ನು ರೂಢಿಸಿಕೊಂಡು, ಗಿಡಮರಗಳನ್ನು ಬೆಳೆಸಿ ಪರಿಸರ ಉಳಿಸಬೇಕೆಂದು ಭಾರತೀಯ ಸ್ತ್ರೀ ಶಕ್ತಿ ಸಂಘಟನಾ ಟ್ರಸ್ಟ್ ರಾಜ್ಯಾಧ್ಯಕ್ಷೆ ಶ್ರೀಮತಿ ಭಾಗ್ಯ ಸರ್ವನ್ ತಿಳಿಸಿದರು.
ಅರಣ್ಯನಾಶ, ಹವಾಮಾನ ಬದಲಾವಣೆ ತಗ್ಗಿಸಲು, ಜೀವವೈವಿಧ್ಯ ಸಂರಕ್ಷಣೆಗೆ ಕೊಡುಗೆ ನೀಡುವ ಸುಸ್ಥಿರ ಭವಿಷ್ಯಕ್ಕಾಗಿ ಹಾಗೂ ವೃಕ್ಷಗಳ ಸಂರಕ್ಷಣೆಗಾಗಿ ವೃಕ್ಷ ರಕ್ಷಾ ಬಂಧನ ಹಾಗೂ ವೃಕ್ಷನಾಟಿ ಕಾರ್ಯ ಮಾಡಲಾಗಿದೆ ಎಂದು ಮಿಡಿತ ಫೌಂಡೇಶನ್ ಅಧ್ಯಕ್ಷ ಪರಿಸರ ಮಂಜು ಹೇಳಿದರು.
ಇದೇವೇಳೆ ದಲಿತ ಮುಖಂಡರಾದ ದ್ರಾವಿಡ್ ಸರ್ವನ್, ಮಿಡಿತ ಫೌಂಡೇಶನ್ ಸಂಸ್ಥೆ ಪ್ರ.ಕಾರ್ಯದರ್ಶಿ ಸೌಮ್ಯ ಪವಾರ್, ಟ್ರಸ್ಟಿನ ಪದಾಧಿಕಾರಿಗಳು ಪರಿಸರ ಪ್ರೇಮಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.