ಮಂಡ್ಯ : ಗಂಡು ಮಕ್ಕಳಿಗೆ ಮದುವೆಗೆ ಹೆಣ್ಣು ಮಕ್ಕಳೇ ಸಿಗುತ್ತಿಲ್ಲ ಅನ್ನೋದು ಬಹುತೇಕರ ಗೋಳಾಗಿದೆ. ಹೀಗಾಗಿ ಬ್ರಹ್ಮಚಾರಿಗಳ ಸಂಖ್ಯೆಯೂ ಜಾಸ್ತಿನೇ ಇದೆ. ಇದೀಗ ಮಂಡ್ಯದ ಗಂಡು ಮಕ್ಕಳು ಕಂಕಣ ಭಾಗ್ಯಕ್ಕಾಗಿ ಮಾದಪ್ಪನ ಮೊರೆ ಹೋಗಿದ್ದಾರೆ.
ಎಸ್. ಮಂಡ್ಯದ ಒಂದೇ ಗ್ರಾಮದ 80 ಗಂಡು ಮಕ್ಕಳಿಗೆ ಹೆಣ್ಣು ಸಿಗುತ್ತಿಲ್ವಂತೆ. ಹೀಗಾಗಿ ಬೇಸತ್ತ ಯುವಕರು ಮದುವೆಗಾಗಿ ಮಾದಪ್ಪನ ಮೊರೆ ಹೋಗಿದ್ದು, ಮಲೆ ಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆ ಕೈಗೊಂಡಿದ್ದಾರೆ. ಈ ಹಿಂದಡ ಕೂಡ ಮಂಡ್ಯದ ಮಳವಳ್ಳಿ ಭಾಗದ ಯುವಕರು ಪಾದಯಾತ್ರೆ ನಡೆಸಿದ್ದರು.
ಇದೀಗ ಮಂಡ್ಯ ತಾಲೂಕಿನ ಅವ್ವೇರಹಳ್ಳಿ ಗ್ರಾಮದ 50 ಕ್ಕೂ ಹೆಚ್ಚು ಜನರಿಂದ ಪಾದಯಾತ್ರೆಕೈಗೊಂಡಿದ್ದು, ಮೂರು ದಿನಗಳ ಕಾಲ ಕಾಲ್ನಡಿಗೆಯಲ್ಲೆ ಮಾದಪ್ಪನ ಸನ್ನಿಧಿ ಸೇರುವರು. ಹೀಗೆ ಮಾದಪ್ಪನ್ನ ಸನ್ನಿದಿಗೆ ಪಾದಯಾತ್ರೆ ಮಾಡಿದ್ರೆ ಹೆಣ್ಣು ಸಿಗುತ್ತೆ ಅನ್ನೋ ನಂಬಿಕೆ ಇದೆ.