ಬೆಂಗಳೂರು: ಕೆರೆ ಅಭಿವೃದ್ದಿ ನೆಪದಲ್ಲಿ ಕೋಟಿಗಟ್ಟಲೇ ಜನರ ಹಣ ನೀರಲ್ಲಿ ಹೊಮಾ ಮಾಡಲು ಹೊರಟಿದ್ಯಾ ಬಿಬಿಎಂಪಿ ಎಂಬ ಪ್ರಶ್ನೆ ಮೂಡಿದೆ. ಕಳೆದ ವರ್ಷ 4 ಕೋಟಿ ವೆಚ್ಚದಲ್ಲಿ ಕೆರೆ ಅಭಿವೃದ್ಧಿ ಪಡಿಸಿದ ಪಾಲಿಕೆ. ಈ ವರ್ಷ ಅದೇ ಕೆಲಸಕ್ಕೆ ಇಪ್ಪತ್ತು ಕೋಟಿ ಹಣ ಖರ್ಚು ಮಾಡ್ತಿರೋದು ಇಂತಹದೊಂದ ಅನುಮಾನಕ್ಕೆ ಕಾರಣವಾಗಿದೆ. ಹಾಗಾದ್ರೆ ಯಾವುದು ಅದು ಕೋಟಿ ಕೆರೆ ಅಂತೀರಾ ಈ ಸ್ಟೋರಿ ನೋಡಿ,
ಸುತ್ತಲು ಹಚ್ಚ ಹಸಿರು, ಗಿಡಮರಗಳ ಸಾಲು.. ತಂಪಾದ ಗಾಳಿ, ಸ್ವಚ್ಚಂದ ನೀರು..ಅಬ್ಬ ವಾಯುವಿಹಾರಿಗಳಿಗೆ ಸ್ವರ್ಗದಂತಿದೆ ಬೆಂಗಳೂರಿನಲ್ಲಿರುವ ಹಲಸೂರು ಕೆರೆ. 16ನೇ ಶತಮಾನದಲ್ಲಿ ನಿರ್ಮಾಣಗೊಂಡು ಈ ಐತಿಹಾಸಿಕ ಕೆರೆ ಅಭಿವೃದ್ದಿ ಮಾಡಲು ಹೊರಟಿರುವ ಪಾಲಿಕೆ ದುಂದು ವೆಚ್ಚ ಮಾಡಲು ಮುಂದಾಗಿದ್ಯಾ ಎಂಬ ಪ್ರಶ್ನೆ ಮೂಡಿದೆ ಬ್ರ್ಯಾಂಡ್ ಬೆಂಗಳೂರು ಯೋಜನೆಯಡಿ ಬಿಬಿಎಂಪಿ ಹಲಸೂರು ಕೆರೆ ಅಭಿವೃದ್ಧಿಗೆ ಮುಂದಾಗಿದೆ.
![Demo](https://ainlivenews.com/wp-content/uploads/2023/12/spoorthi-1.jpg)
ಬರೊಬ್ಬರಿ 20 ಕೋಟಿ ರೂಪಾಯಿ ವೆಚ್ಚ ಮಾಡ್ತಿದೆ. ಸುಮಾರು 50 ಹೆಕ್ಟೆರ್ ಪ್ರದೇಶದಲ್ಲಿರುವ ಈ ಕೆರೆ ಕಾಮಗಾರಿ ಆರಂಭಿಕ ಹಂತವಾಗಿ ಬೇಲಿ ನಿರ್ಮಾಣ ಕಾಮಗಾರಿ ಮಾಡ್ತಿದೆ. ಅಗತ್ಯವಿರುವ ಕಡೆ ಮಾತ್ರ ಹೂಳು ತೆಗೆಯಲು ಬಿಬಿಎಂಪಿ ಮುಂದಾಗಿದೆ. ಕಳೆದ ವರ್ಷ ಅಮೃತ್ಥ ನಗರೋತ್ಥಾನ ಯೋಜನೆಯಡಿಯಡಿ 4 ಕೋಟಿ ರೂಪಾಯಿ ವೆಚ್ಚದಲ್ಲಿ ಹಲಸೂರು ಕೆರೆ ಅಬಿವೃದ್ಧಿ ಪಡಿಸಲಾಗಿತ್ತು. ಇದೀಗ ಅದೇ ಕೆರೆಗೆ 20 ಕೋಟಿ ಅಭಿವೃದ್ಧಿಗೆ ಮುಂದಾಗಿರೋದು ಜನರ ಅನುಮಾನಕ್ಕೆ ಕಾರಣವಾಗಿದೆ.
Consuming Milk After Eating Fish: ಮೀನು ತಿಂದ್ಮೇಲೆ ತಪ್ಪಿಯೂ ಹಾಲು ಕುಡಿಯಬೇಡಿ..! ಯಾಕೆ ಗೊತ್ತಾ..?
ಕಳೆದ ವರ್ಚ ಮಾಡಿದ ಕೆಲಸಕ್ಕೆ ಇಪ್ಪತ್ತು ಕೋಟಿ ಖರ್ಚು ಮಾಡಿ ಮತ್ತೆ ಅಭಿವೃದ್ಧಿ ಪಡಿಸೋದು ಅಂತಹದ್ದೆನಿದೆ ಅಲ್ಲಿ ಅಂತ ಸಾರ್ವಜನಿಕರು ಪ್ರಶ್ನೆಸ್ತಿದ್ದಾರೆ. ಕೆರೆ ಮುಖ್ಯಧ್ವಾರದಲ್ಲಿ ಶಾಸಕರ ಫೋಟೋದೊಂದಿಗೆ ಕಾಮಗಾರಿ ನಡೆಯುತ್ತಿದೆ ಎಂಬ ಸೂಚನ ಫಲಕ ಕೂಡ ಹಾಕಲಾಗಿದೆ. ಒಟ್ಟಾರೆ ಕಳೆದ ವರ್ಷ ನಾಲ್ಕು ಕೋಟಿ ಖರ್ಚು ಮಾಡಿ, ಈಗ ಏಕಾಏಕಿ 5 ಪಟ್ಟು ಹೆಚ್ಚು ಖರ್ಚು ಮಾಡಲು ಮುಂದಾಗಿರುವುದು ಕೆರೆ ಹಣ ಯಾರ ಜೇಬು ಸೇರಲು ಮುಂದಾಗ್ತಿದೆ ಎಂಬ ಅನುಮಾನ ಮೂಡಿದೆ. ದುಂದುವೆಚ್ಚ ಕೈಬಿಟ್ಟು ಬಿಬಿಎಂಪಿ ಜನರ ಹಣ ಸರಿಯಾಗಿ ಬಳಸಿಕೊಳ್ಳಬೇಕು ಅಂತಿದ್ದಾರೆ ಜನರು
![](https://ainlivenews.com/wp-content/uploads/2024/01/Ad-Banner-copy-scaled.jpg)