ಗದಗ: ಇಡೀ ಜಿಲ್ಲೆಯಲ್ಲಿ ತೀವ್ರ ಬರಗಾಲ ಆವರಿಸಿದೆ. ಹನಿ, ಹನಿ ನೀರಿಗೂ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಇಂತಹ ಬರದ ಹೊತ್ತಿನಲ್ಲಿಯೇ ಗಂಗಾದೇವಿ ಗಗನಕ್ಕೆ ಚಿಮ್ಮಿದ್ದಾಳೆ.
ಗದಗ ಜಿಲ್ಲೆ ಗಜೇಂದ್ರಗಡ ತಾಲೂಕಿನ ರಾಜೂರು ಗ್ರಾಮದ ಮುತ್ತಪ್ಪ ಹಾದಿಮನಿ ಎನ್ನುವವರ ಜಮೀನಿನಲ್ಲಿ ಒಮ್ಮೆಲೇ ನೀರು ಆಕಾಶಕ್ಕೆ ಚಿಮ್ಮಿದೆ. ಜಮೀನಿನಲ್ಲಿ ಬೋರವೇಲ್ ಕೊರಿಸುವಾಗ ಕೇವಲ 600 ಅಡಿಗೆ 4 ರಿಂದ 5 ಇಂಚು ನೀರು ಉಕ್ಕಿದೆ.
![Demo](https://ainlivenews.com/wp-content/uploads/2023/12/spoorthi-1.jpg)
ಈ ಭಾಗದಲ್ಲಿ 700 ರಿಂದ 800 ಅಡಿ ಕೊರಿಸಿದ್ರು ನೀರು ಸಿಗಲ್ಲಾ.. ಅಂತದರಲ್ಲಿ ಕೇವಲ 600 ಅಡಿಗೆ ಮುಗಿಲೆತ್ತರಕ್ಕೆ ನೀರು ಚಿಮ್ಮಿದೆ. ಒಮ್ಮೆಲೇ ನೀರು ಕಂಡ ರೈತ ಹರ್ಷಗೊಂಡಿದ್ದಾರೆ. ನೀರು ಕಂಡು ರೈತ ಮುತ್ತಪ್ಪ ಹಾದಿಮನಿ ಕುಟುಂಬಸ್ಥರು ಕುಣಿದು ಕುಪ್ಪಳಿಸಿದ್ದಾರೆ.
![](https://ainlivenews.com/wp-content/uploads/2024/01/Ad-Banner-copy-scaled.jpg)