ಗದಗ: ಲಿಂ. ಡಾ. ತೋಂಟದ ಸಿಧ್ಧಲಿಂಗ ಮಹಾಸ್ವಾಮಿಗಳ 75 ನೇ ಜಯಂತಿ ಅಂಗವಾಗಿ ಭಾವೈಕ್ಯತಾ ಯಾತ್ರೆ ಗದಗ ನಗರದ ಭೀಷ್ಮ ಕೆರೆ ಆವರಣದ ಬಸವೇಶ್ವರ ಪುಥ್ಥಳಿ ಆವರಣದಲ್ಲಿ ಡಾ. ತೋಂಟದ ಸಿಧ್ಧರಾಮ ಶ್ರೀಗಳಿಂದ ಭಾವೈಕ್ಯತಾ ಯಾತ್ರೆಗೆ ಚಾಲನೆ ನೀಡಲಾಯಿತು.
ಅದಕ್ಕೂ ಮುನ್ನ ಡಾ. ತೋಂಟದ ಸಿಧ್ಧರಾಮ ಶ್ರೀಗಳು ಭೀಷ್ಮ ಕೆರೆ ಆವರಣದ ಬಸವೇಶ್ವರ ಪುಥ್ಥಳಿಗೆ ಮಾಲಾರ್ಪಣೆ ಮಾಡಿದರು. ಬೈರನಹಟ್ಟಿ ದೊರೆಸ್ವಾಮಿ ವಿರಕ್ತಮಠದ ಶ್ರೀ ಶಾಂತಲಿಂಗ ಮಹಾಸ್ವಾಮಿಗಳು ಉಪಸ್ಥಿತರಿದ್ದರು.
ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ತೋಂಟದಾರ್ಯ ಮಠದವರೆಗೂ ಸಾಗಲಿರುವ ಭಾವೈಕ್ಯತಾ ಯಾತ್ರೆಯಾಗಿದ್ದು, ವಿವಿಧ ಧರ್ಮಗಳ ಭಾವಚಿತ್ರಗಳ ಮೆರವಣಿಗೆಯಲ್ಲಿ ನೂರಾರು ಭಕ್ತಾಧಿಗಳು, ವಿದ್ಯಾರ್ಥಿಗಳು ಭಾವೈಕ್ಯತಾ ಯಾತ್ರೆಯಲ್ಲಿ ಭಾಗಿಯಾಗಿದ್ದಾರೆ.