ದಾವಣಗೆರೆ: ಎಲ್ಐಸಿ ಹೌಸಿಂಗ್ ಪೈನಾನ್ಸ್ ಲೋನ್ ಪಡೆದು ವಂಚನೆಗೆ ಯತ್ನಿಸಿದ ಆರೋಪಿಗಳನ್ನು ದಾವಣಗೆರೆ ಪೊಲೀಸರ ಬಂಧಿಸಿದ್ದು, ಮ್ಯಾನೇಜರ್ ನ್ನು ರಕ್ಷಣೆ ಮಾಡಿದ್ದಾರೆ. ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕು ಅಮರವಾತಿ ಗ್ರಾಮದ ಕೆಹೆಚ್ಪಿ ಕಾಲೋನಿಯಲ್ಲಿರುವ ನಂ ೧೭೪ ರ ಮನೆಯನ್ನು ಖರೀದಿ ಮಾಡಿಕೊಂಡಂತೆ ನಕಲಿ ದಾಖಲೆಗಳನ್ನು ಸೃಷ್ಟಿಸಿಕೊಂಡು ಆರೋಪಿಗಳಲ್ಲಿ ಒಬ್ಬರಾದ ಜ್ಯೋತಿ ಶೆಟ್ಟಿ ಪತಿ ಭೋಜರಾಜಶೆಟ್ಟಿ ದಾವಣಗೆರೆ ನಗರದ ಕೆಟಿಜೆ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ,
ಬರುವ ಎಲ್ಐಸಿ ಹೌಸಿಂಗ್ ಪೈನಾನ್ಸ್ ಗೆ ನಕಲಿ ದಾಖಲೆಗಳನ್ನು ನೀಡಿ ಮ್ಯಾನೇಜರ್ ಎಂ ಎಸ್ ಶರಣು ಅವರಿಂದ 49.01 ಲಕ್ಷ ಲೋನ್ ಹಣವನ್ನು ಮಂಜೂರು ಮಾಡಿಸಿಕೊಂಡಿದ್ದರು. ಲೋನ್ ಹಣಕ್ಕೆ ಸಂಬಂಧಪಟ್ಟಂತೆ ಚೆಕ್ ನೀಡುವ ಸಮಯದಲ್ಲಿ ಆರೋಪಿಗಳು ಹಾಜರುಪಡಿಸಿದ ದಾಖಲೆಗಳು ನಕಲಿ ದಾಖಲೆಗಳೆಂದು ಮ್ಯಾನೇಜರ್ ಗೆ ಮನವರಿಕೆಯಾಗಿ ಚೆಕ್ನ್ನು ನೀಡದೆ ತಡೆಹಿಡಿದಿದ್ದರು. ಮೇ 31 ರಂದು ಸಂಜೆ ಕರಿಬಸಮ್ಮ @ ರೋಜಾ ಎಂಬ ಮಹಿಳೆ ಎಲ್ಐಸಿ ಹೌಸಿಂಗ್ ಪೈನಾನ್ಸ್ ಕಚೇರಿಗೆ ಬಂದು ಮ್ಯಾನೇಜರ್ ಶರಣುರವರಿಗೆ ಲೋನ್ ಯಾಕೆ ಕೊಡುತ್ತಿಲ್ಲಾ ಎಂದು ಕೇಳಿ ವಿನಾಕಾರಣ ಅವರ ಕಪಾಳಕ್ಕೆ ಹೊಡೆದಿದ್ದಾಳೆ.
ಆಗ ಮ್ಯಾನೇಜರ್ ಪೊಲೀಸ್ ಠಾಣೆಗೆ ಹೋಗಿ ದೂರು ಕೊಡುತ್ತೇನೆಂದು ಹೋದಾಗ ಇದರಿಂದ ಆರೋಪಿಗಳು ಮಾಡಿರುವ ಮೋಸ ವಿಷಯ ಬೆಳಕಿಗೆ ಬಂದಿದೆ. ಆರೋಪಿಗಳೆಲ್ಲ ಸೇರಿಕೊಂಡು ಮಾರುತಿ ಎರಿಟಿಗಾ ಕಾರಿನಲ್ಲಿ ಮ್ಯಾನೇಜರ್ ರನ್ನು ಅಪಹರಿಸೊ ಕೊಲೆ ಮಾಡಲು ಪ್ರಯತ್ನಿಸಿದ್ದಾರೆ. ಅಪಹರಣದ ಮಾಹಿತಿ ಬಂದ ಕೂಡಲೇ ಪೊಲೀಸ್ ಅಧೀಕ್ಷಕಿ ಉಮಾಪ್ರಶಾಂತ್ ಎಲ್ಲಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಾಕಾಬಂಧಿಯನ್ನು ಹಾಕಲು ಸೂಚಿಸಿದ್ದು,
ಹೊನ್ನಾಳಿ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಮುದ್ದುರಾಜ್ & ಅವರ ಸಿಬ್ಬಂದಿ ಹೊನ್ನಾಳಿ ನಗರದ ವಡ್ಡಿನ ಕೆರೆ ಹಳ್ಳದ ಬಳಿ ಎರಟಿಗಾ ಕಾರಿನಲ್ಲಿ ಬಂದ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಅಲ್ಲದೆ, ಅಪಹರಿಸಿ ಕರೆದೊಯ್ಯುತ್ತಿದ್ದ ಮ್ಯಾನೇಜರ್ ನ್ನು ರಕ್ಷಣೆ ಮಾಡಿದ್ದಾರೆ.ಇನ್ನು, ಮ್ಯಾನೇಜರ್ ಅಪಹರಣವಾದ ಬಗ್ಗೆ ತೇಜಸ್ವಿ ನೀಡಿದ ದೂರಿನ ಮೇರೆಗೆ ಕೆಟಿಜೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣ ದಾಖಲಾದ ಕೇವಲ 2 ಗಂಟೆಗಳಲ್ಲಿ ಕಾರ್ಯಾಚರಣೆ ನಡೆಸಿ 7 ಆರೋಪಿಗಳನ್ನ ಬಂಧಿಸಿದ್ದಾರೆ.
೧]. ಚೇತನ್ @ ಚೇತನ್ ರಾಥೋಡ್ ವಾಸ: ಕಾಶಿಪುರ, ಶಿವಮೊಗ್ಗ.
೨] ಶ್ರೀಮತಿ ಕರಿಬಸಮ್ಮ @ ರೋಜ @ ನೀಲಾ ವಾಸ ನೇರಲಿಗೆ ಗ್ರಾಮ, ದಾವಣಗೆರೆ ತಾಲ್ಲೂಕು.
೩] ಮಂಜ @ ಮಂಜನಾಯ್ಕ್, ವಾಸ ಸೋಮಯ್ಯ ಲೇಔಟ್ ಹಿಂಭಾಗ, ಶಿವಮೊಗ್ಗ.
೪] ವಿಶ್ವನಾಥ್ ವಾಸ; ಹಿರೇಜಂಬೂರು ಗ್ರಾಮ, ಶಿಕಾರಿಪುರ ತಾಲ್ಲೂಕು, ಶಿವಮೊಗ್ಗ ಜಿಲ್ಲೆ.
೫] ನಾಗರಾಜ್ ವಾಸ: ಹಿರೆಜಂಬೂರು ಗ್ರಾಮ, ಶಿಕಾರಿಪುರ ತಾಲ್ಲೂಕು. ಶಿವಮೊಗ್ಗ ಜಿಲ್ಲೆ.
೬] ನಜೀರ್ಖಾನ್ @ ನಾಸಿರ್ಖಾನ್ ವಾಸ: ಬಸವನಗುಡಿ, ಶಿವಮೊಗ್ಗ ಟೌನ್,
೭] ರಾಮು ವಾಸ: ಬಸವನಗುಡಿ, ಅಮೀರ್ಅಹ್ಮದ್ ಕಾಲೋನಿ, ಶಿವಮೊಗ್ಗ ಟೌನ್,
ಆರೋಪಿತರುಗಳಿಂದ ಕೃತ್ಯಕ್ಕೆ ಉಪಯೋಗಿಸಿದ ಎರಿಟಿಗಾ & ಸಿಯಾಝಾ ೦೨ ಕಾರುಗಳನ್ನು, ಲ್ಯಾಪ್ಟಾಪ್, ಕಂಪ್ಯೂಟರ್ & ಚಾಕು, ದಾಖಲಾತಿಗಳನ್ನು ವಶಪಡಿಸಿಕೊಳ್ಳಲಾಗಿರುತ್ತದೆ. ಸದರಿ ಆರೋಪಿಗಳಲ್ಲಿ ಚೇತನ್ ಎಂಬ ಆರೋಪಿಯು ಇದೇ ರೀತಿಯಾಗಿ ಸರಿಯಾದ ದಾಖಲೆಗಳನ್ನು ನೀಡಿದೆ ಮೋಸ ಮಾಡಿ ಎಲ್ಐಸಿ ಹೌಸಿಂಗ್ ಪೈನಾನ್ಸ್ನಿಂದ ಸಾಲವನ್ನು ಮಂಜೂರು ಮಾಡಿಸಿಕೊಂಡಿಂರುವ ಬಗ್ಗೆ ಕೆಟಿಜೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ಚೇತನ ಮೇಲೆ ಈ ಹಿಂದೆ ಶಿವಮೊಗ್ಗ ನಗರದ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಕೂಡ ಪ್ರಕರಣ ದಾಖಲಾಗಿರುತ್ತದೆ.
ಈ ಕಾರ್ಯಚರಣೆಯಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ವಿಜಯಕುಮಾರ ಎಂ ಸಂತೋಷ, ಶ್ರೀ ಮಂಜುನಾಥ ಜಿ, ನಗರ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕರಾದ ಮಲ್ಲೇಶ ಡಿ ದೊಡ್ಡಮನಿ ಮಾರ್ಗದರ್ಶನದಲ್ಲಿ ಕೆಟಿಜೆ ನಗರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಸುನಿಲ್ ಕುಮಾರ ಹೆಚ್ ಎಸ್,
ಹೊನ್ನಾಳಿ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಮುದ್ದುರಾಜ್ & ಕೆಟಿಜೆ ನಗರ ಠಾಣೆಯ ಪಿಎಸ್ಐ ಸಾಗರ್ ಅತ್ತರವಾಲ & ಎಎಸ್ಐ ಈರಣ್ಣ ಸಿಬ್ಬಂದಿಗಳಾದ ಪ್ರಕಾಶ, ಶಂಕರ ಜಾಧವ್, ಶಿವರಾಜ್, ಮಂಜಪ್ಪ, ಮಂಜೇಗೌಡ, ಚಂದ್ರಪ್ಪ, ಶ್ರೀನಿವಾಸ, ಗಿರೀಶ, ಹರೀಶ ಹೊನ್ನಾಳಿ ಠಾಣೆಯ ಸಿಬ್ಬಂದಿಗಳಾದ ಬಸವರಾಜ್, ಮಲ್ಲೇಶಪ್ಪ, ಜಗದೀಶ, ಕುಮಾರನಾಯ್ಕ, ಲೋಕೇಶ, ವೆಂಕಟೇಶರವರ ತಂಡದಲ್ಲಿದ್ದರು. ಕಾರ್ಯಚರಣೆಯನ್ನು ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ್ ಪ್ರಶಂಸೆ ವ್ಯಕ್ತಪಡಿಸಿರುತ್ತಾರೆ.