ಕೊಪ್ಪಳ: ಯಾರ ಕಪಾಳಕ್ಕೆ ಯಾರು ಹೊಡೆಯುತ್ತಾರೆ ಎಂಬುದು ಲೋಕಸಭಾ ಚುನಾವಣೆ ಫಲಿತಾಂಶದ ದಿನ ಗೊತ್ತಾಗುತ್ತೆ ಎಂದು ಶಿವರಾಜ್ ತಂಗಡಗಿ ಹೇಳಿದ್ದಾರೆ. ಮಾತನಾಡಿದ ಸಚಿವರು, ಚುನಾವಣೆಯಲ್ಲಿ ಕೊಪ್ಪಳದಲ್ಲಿ ಯಾರು ಗೆಲ್ಲುತ್ತಾರೆ ಎಂಬುದು ಕಾದು ನೋಡೋಣ. ಫಲಿತಾಂಶದ ದಿನ ಯಾರ ಕಪಾಳಕ್ಕೆ ಯಾರು ಹೊಡೆಯುತ್ತಾರೆ ಎಂಬುದು ಗೊತ್ತಾಯಲಿದೆ ಎಂದಿದ್ದಾರೆ.
ಶಾಸಕ ಜನಾರ್ದನ ರೆಡ್ಡಿ ಆಟ ಕೊಪ್ಪಳದಲ್ಲಿ ನಡೆಯಲ್ಲ. ಜನಾರ್ದನ ರೆಡ್ಡಿಗೆ ಪುಲ್ವಾಮ ದಾಳಿ, ಸರ್ಜಿಕಲ್ ಸ್ಟ್ರೈಕ್ ಬಳಿ ಗಂಧಗಾಳಿ ಗೊತ್ತಿಲ್ಲದೇ ಮಾತನಾಡುತ್ತಿದ್ದಾರೆ. ತಾಕತ್ ಇದ್ರೆ ಎರಡು ಕೋಟಿ ಉದ್ಯೋಗ ನೀಡೋ ಹೇಳಿಕೆ ಬಗ್ಗೆ ಉತ್ತರ ನೀಡಲಿ ಎಂದರು. ಬಿಜೆಪಿಯಲ್ಲಿ ದೊಡ್ಡ ಅಧಿಕಾರ ನೀಡಿದವರ ರೀತಿ ರೆಡ್ಡಿ ಮಾತನಾಡುತ್ತಿದ್ದಾನೆ.
ರೈತರೇ ಗಮನಿಸಿ.. ಸಪೋಟ ಹಣ್ಣಿನ ಕೃಷಿಯಿಂದ ಗಳಿಸಬಹುದು ಲಕ್ಷಗಟ್ಟಲೇ ಆದಾಯ..!
ಆತನಿಗೆ ಬಿಜೆಪಿಯವರು ಯಾವ ಅಧಿಕಾರ ಕೂಡಾ ನೀಡಲ್ಲಾ. ಹಿಂದೆ ನಮ್ಮನ್ನು ತೋರಿಸಿ ಜನಾರ್ದನ ರೆಡ್ಡಿ ಮಂತ್ರಿಯಾಗಿದ್ದಾನೆ. ಬಿಜೆಪಿಯವರಿಗೆ ಈ ಹಿಂದೆ ರೆಡ್ಡಿ ಯಾರಿಗೆ ಎಷ್ಟು ತೊಂದರೆ ಕೊಟ್ಟಿದ್ದಾನೆ ಅಂತ ಎಲ್ಲರಿಗೂ ಗೊತ್ತಿದೆ. ಹಿಂದೆ ಶ್ರೀರಾಮುಲರನ್ನು ಸೋಲಿಸಿದ್ದು ಯಾರು? ಜನಾರ್ದನರೆಡ್ಡಿಯೇ ಶ್ರೀರಾಮುಲು ಅವರನ್ನು ಸೋಲಿಸಿದ್ದು ಎಂದು ಆರೋಪಿಸಿದರು.