ಹಾವೇರಿ: ತಾಕತ್ ಇದ್ರೆ ಶಿವಮೊಗ್ಗದಲ್ಲಿ ಮಧು ಬಂಗಾರಪ್ಪ ಸ್ಪರ್ಧಿಸಿ ಗೆದ್ದು ತೋರಿಸಲಿ ಎಂದು ಮಾಜಿ ಸಚಿವ ಆರ್ ಅಶೋಕ್ ಸವಾಲ್ ಹಾಕಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು,ಮಧು ಬಂಗಾರಪ್ಪ ಇದೆ ಮೊದಲ ಬಾರಿಗೆ ಶಾಸಕರಾಗಿದ್ದಾರೋ ಏನೋ.. ನನಗೆ ಗೋತ್ತಿಲ್ಲಾ. ಅನಂತ್ ಕುಮಾರ್ ಹೆಗಡೆ ಐದು ಬಾರಿ ಸಂಸದರಾಗಿ ಆಯ್ಕೆಯಾಗಿದ್ದಾರೆ. ಕಾರವಾರದ ಜನ ಅವರನ್ನು ಆಯ್ಕೆ ಮಾಡಿದ್ದಾರೆ. ಕಾರವಾರ ಜನರಿಗೆ ಅವಮಾನ ಆಗುವಂತ ಹೇಳಿಕೆ ಮಧು ಬಂಗಾರಪ್ಪ ನೀಡಿದ್ದಾರೆ ಎಂದರು.
ಮಧು ಬಂಗಾರಪ್ಪ ಬಿಜೆಪಿಗೆ ಸೇರಿದ ನಂತರ ಟಿಕೆಟ್ ಹಂಚಿಕೆ ತಂಡದಲ್ಲಿದ್ದರೆ ಮಾತನಾಡಲಿ. ಸದ್ಯ ಅವರು ಕಾಂಗ್ರೆಸ್ನಲ್ಲಿದ್ದು, ಅವರ ಪಕ್ಷದಲ್ಲಿ ಯಾರಿಗೆ ಟಿಕೆಟ್ ನೀಡಬೇಕು ಎಂದು ನೋಡಿಕೊಳ್ಳಲಿ. ಇತ್ತೀಚಿಗೆ, ಕಾಂಗ್ರೆಸ್ನಲ್ಲಿ 13 ಕ್ಷೇತ್ರದಲ್ಲಿ ಕಣಕ್ಕಿಳಿಯಲು ಸೂಕ್ತ ಅಭ್ಯರ್ಥಿಗಳೇ ಇಲ್ಲ ಎಂದು ವರದಿಯಾಗಿದೆ. ಇಂತಹ ಗತಿಯಿಲ್ಲದ ಕ್ಷೇತ್ರಗಳಿಗೆ ಟೀಕೆಟ್ ನೀಡಲಿ. ಆಮೇಲೆ ಬಿಜೆಪಿ ಬಗ್ಗೆ ಮಾತನಾಡಲಿ ಎಂದರು.
ವೋಟ್ ಹಾಕಿ ಗೆಲ್ಲುಸುವುದು ಮತದಾರು. ಮಧು ಬಂಗಾರಪ್ಪ ಅಲ್ಲ. ತಿರ್ಮಾನ ತೆಗೆದುಕೊಳ್ಳವುದು ಪ್ರಜ್ಞಾವಂತ ಮತದಾರರು. ಏನು ತೀರ್ಮಾನ ತೆಗೆದು ಕೊಳ್ಳುತ್ತಾರೋ ತೆಗೆದು ಕೊಳ್ಳಲಿ. ಐದು ಬಾರಿ ತೀರ್ಮಾನ ಕೊಟ್ಟಿದ್ದಾರೆ. ಅನಂತ್ ಕುಮಾರ್ ಹೆಗಡೆಗೆ ಟಿಕೇಟ್ ಕೊಡುವುದು ಬಿಡುವುದು ಬಿಜೆಪಿ ಹೈ ಕಮಾಂಡ್ ಬಿಟ್ಟ ವಿಚಾರ. ಮಧು ಬಂಗಾರಪ್ಪ ಶಿವಮೊಗ್ಗದಲ್ಲಿ ಸ್ಪರ್ಧಿಸಿ ಗೆದ್ದು ತೋರಿಸಲಿ. ನಂತರ ಬೇರೆ ಕ್ಷೇತ್ರದ ಬಗ್ಗೆ ಮಾತನಾಡಲಿ ಎಂದು ತಿರುಗೇಟು ನೀಡಿದರು.
ಸೋಲಿನ ಭಯದಲ್ಲಿ ಮಧು ಬಂಗಾರಪ್ಪ ಹಾಗೆಲ್ಲಾ ಮಾತನಾಡುತ್ತಿದ್ದಾರೆ. ದೇಶದಲ್ಲಿ ರಾಮನ ಅಲೇ ಶುರುವಾಗಿದೆ. ಎಲ್ಲಿ ನೋಡಿದರೂ ರಾಮ ರಾಮ ಅಂತಾ ಹೇಳುತ್ತಿದ್ದಾರೆ. ಇವರು ಕೇವಲ ಅಲ್ಪಸಂಖ್ಯಾತರು, ಮುಸ್ಲಿಮರು, ಎಲ್ಲರು ನಮ್ಮ ಬ್ರದರ್ಸ್ ಸಿಸ್ಟರ್ಸ್ ಅಂಥಾ ಹೇಳುತ್ತಿದ್ದಾರೆ. ಅವರು ಬ್ರದರ್ಸ್ ಸಿಸ್ಟರ್ಸ್ ನೋಡಿಕೊಂಡು ಇರಲಿ. ದೇಶದ ಜನ ಮೋದಿಯನ್ನು ಆರಿಸಿ ತರುತ್ತಾರೆ ಎಂದರು.