ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ ಹೊರವಲಯದ ಮಂದಿಗೆ ಚಿರತೆ ಕಾಟದಿಂದ ಕೊನೆ ಕಾಣೋ ಲಕ್ಷಣವೇ ಇಲ್ಲ ಅನ್ನಿಸುತ್ತಿದೆ. ಒಂದಿಲ್ಲೊಂದು ಕಡೆ ಚಿರತೆ ಕಾಣಿಸಿಕೊಳ್ಳುತ್ತಿದ್ದು, ಜನರ ನಿದ್ದೆಗೆಡಿಸಿದೆ. ಜನವಸತಿ ಪ್ರದೇಶಗಳಲ್ಲಿ ಚಿರತೆ ಓಡಾಟದ ಹೆಜ್ಜೆ ಗುರುತು ಪತ್ತೆಯಾಗಿದ್ದು, ಅರಣ್ಯ ಇಲಾಖೆ ಲೆಪರ್ಡ್ ಟಾಸ್ಕ್ ಶುರುವಾಗಿದೆ. ಅಷ್ಟಕ್ಕೂ ಯಾವ ಭಾಗದಲ್ಲಿ ಲೆಪರ್ಡ್ ಕಾಟ ಶುರು ಆಯ್ತು ಅಂತೀರಾ ನೋಡಿ.
ಹೋದ್ಯ ಪಿಶಾಚಿ ಅಂದ್ರೆ ಬಂದ್ಯಾ ಗವಾಕ್ಷಿ ಅಂದಂಗ್ ಆಯ್ತು ಆನೇಕಲ್ ಜನರ ಕತೆ. ಹೌದು ಸದ್ಯ ಚಿರತೆ ಕಾಟ ಮುಗಿಯಿತು ಅಂದು ಕೊಳ್ಳುವಷ್ಟರಲ್ಲಿ ಮತ್ತೆ ಚಿರತೆಯ ಚಿಂತೆ ಜನರನ್ನ ಕಾಡ ತೊಡಗಿದೆ. ಆನೇಕಲ್- ಚಂದಾಪುರ ಮುಖರಸ್ತೆಯಲ್ಲಿನ ಎಸ್ಆರ್ ಆರ್ ಲೇಔಟ್ ನಲ್ಲಿ ಕಳೆದ ರಾತ್ರಿ ಚಿರತೆ ಚಿರತೆ ಕಾಣಿಸಿಕೊಂಡಿದೆ. ಲೇಔಟ್ನ ನಿವಾಸಿಗಳಾದ ಪಾಂಡುರಂಗ ಹಾಗೂ ಅವರ ಮಗ ಶಮಂತ್ ಬೈಕ್ ನಲ್ಲಿ ತೆರಳುತ್ತಿದ್ದಾಗ ಚಿರತೆ ರಸ್ತೆ ದಾಟಿ ಹೋಗುತ್ತಿರುವುದನ್ನ ಕಂಡಿದ್ದಾರೆ. ಕೂಡಲೇ ಲೇಔಟ್ನ ಸೆಕ್ಯೂರಿಟಿ ಹಾಗೂ ನಿವಾಸಿಗಳಿಗೆ ವಿಷಯ ತಿಳಿಸಿದ್ದಾರೆ. ಬಳಿಕ ಚಿರತೆ ಓಡಾಡಿದ ಕಡೆಗಳಲ್ಲಿ ಪರಿಶೀಲನೆ ನಡೆಸಿದಾಗ ಲೇಔಟ್ ಸುತ್ತಮುತ್ತಲಿನ ಕಡೆ ಚಿರತೆ ಓಡಾಟದ ಹೆಜ್ಜೆ ಗುರುತು ಪತ್ತೆಯಾಗಿದ್ದು ಸದ್ಯ ಲೇಔಟ್ ಅಲ್ಲಿ ನಾಯಿ ಬೇಟೆಯಾಡಲು ಚಿರತೆ ಬಂದಿದೆ ಎಂದು ಹೇಳಲಾಗುತ್ತಿದ್ದು, ಜನರಲ್ಲಿ ಚಿರತೆ ಟೆನ್ಶನ್ ಶುರುವಾಗಿದೆ.
ಇನ್ನೂ ಜನರಲ್ಲಿ ಚಿರತೆಯ ಆತಂಕ ಹೆಚ್ಚಿದ ಬೆನ್ನಲ್ಲೇ ಅರಣ್ಯಾ ಇಲಾಖೆ ಅಧಿಕಾರಿಗಳಿಂದ ಕಾರ್ಯಾಚರಣೆ ಶುರುವಾಗಿದೆ. ಚಿರತೆ ಹೆಜ್ಜೆ ಗುರುತುಗಳನ್ನ ಅರಣ್ಯ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಚಿರತೆ ಯಾವ ಕಡೆಗೆ ತೆರಳಿದೆ ಎನ್ನುವ ಬಗ್ಗೆ ಕಾರ್ಯಾಚರಣೆ ನಡೆಸಲಾಗುತ್ತಿದ್ದು, ಸಿಸಿಟಿವಿ ದೃಶ್ಯಾವಳಿ ಕೂಡ ಚೆಕ್ ಮಾಡಲಾಗುತ್ತಿದೆ. ಇನ್ನೂ ಜನ ಸಾಮಾನ್ಯರಿಗೆ ಚಿರತೆ ಇಂದ ಸಮಸ್ಯೆ ಆಗಬಹುದು ಅನ್ನೋ ಕಾರಣಕ್ಕೆ ಇಂದು ರಾತ್ರಿಯೂ ಅರಣ್ಯ ಇಲಾಖೆ ಸಿಬ್ಬಂದಿಯಿಂದ ಲೇಔಟ್ ನಲ್ಲಿ ವಾಚ್ ಮಾಡಲಾಗುತ್ತೆ. ಒಂದು ವೇಳೆ ಚಿರತೆಯ ಹೆಜ್ಜೆ ಗುರುತು ಪತ್ತೆಯಾದ್ರೆ ಬೋನ್ ಇಟ್ಟು ಚಿರತೆ ಸೆರೆಗೆ ಅರಣ್ಯ ಇಲಾಖೆ ಸಿದ್ದತೆ ನಡೆಸುತ್ತಿದೆ.
ಒಟ್ನಲ್ಲಿ ಕಳೆದ ವರ್ಷವೂ ನಗರದ ಹೊರವಲಯದಲ್ಲಿ ಚಿರತೆಯ ಚಿಂತೆ ಜೋರಾಗಿ ಜನ ಸಾಮಾನ್ಯರಿಗೆ ಕಾಡಿತ್ತು. ಈ ವರ್ಷವೂ ಈಗ ಚಿರತೆಯ ಟೆನ್ಶನ್ ಶುರುವಾಗಿದ್ದು, ಅರಣ್ಯ ಇಲಾಖೆ ಆದಷ್ಟು ಬೇಗ ಚಿರತೆ ಕಾಟಕ್ಕೆ ಮುಕ್ತಿ ಕಲ್ಪಿಸಿಕೊಡ್ತಾರ ಎಂದು ಕಾದುನೋಡಬೇಕಿದೆ.