ಧಾರವಾಡ: ರಾಜ್ಯ ರಾಜ್ಯಧಾನಿ ಹಾಗೂ ಮೈಸೂರು ಭಾಗದಲ್ಲಿ ಕಾಣಿಸಿಕೊಳ್ಳುತ್ತಿದ್ದ ಚಿರತೆಗಳು ಈಗ ಧಾರವಾಡ ಜಿಲ್ಲೆಯಲ್ಲೂ ಕಾಣಿಸಿಕೊಳ್ಳುತ್ತಿದ್ದು, ಗ್ರಾಮೀಣ ಭಾಗದಲ್ಲಿ ಜನರಲ್ಲಿ ಚಿರತೆಯ ಓಡಾಟ ವಿಡಿಯೋ ಭಯ ಹುಟ್ಟಿಸಿದೆ. ಧಾರವಾಡ ಜಿಲ್ಲೆಯ ಗಡಿ ಭಾಗ ಗ್ರಾಮವಾದ ಗುಳೇದಕೊಪ್ಪ ಹಾಗೂ ಮಾಡಿಕೊಪ್ಪದ ನಡುವೆ ಮೂರು ಚಿರತೆಗಳು ರೈತರ ಕಣ್ಣಿಗೆ ಬಿದ್ದಿವೆ.
ಹಳೇ ತೆಗೂರು, ಗುಳೇದಕೊಪ್ಪ, ಮದಿಕೊಪ್ಪ ಭಾಗದಲ್ಲಿ ಚಿರತೆಗಳು ಓಡಾಡುತ್ತಿರುವದನ್ನು ಗ್ರಾಮಸ್ಥರು ಖಾತ್ರಿ ಪಡಿಸಿದ್ದು, ಗ್ರಾಮಸ್ಥರ ಮಾಹಿತಿ ಮೇರೆಗೆ ಸ್ಥಳಕ್ಕೆ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಭೇಟಿ ನೀಡಿ ಪರಿಶೀಲನೆ ಕೈಗೊಂಡಿದ್ದಾರೆ. ಜೊತೆಗೆ ಸಾರ್ವಜನಿಕರ ಹಾಗೂ ಬೇರೆ ಪ್ರಾಣಿಗಳ ಪ್ರಾಣಿಗಳ ಪ್ರಾಣ ಹಾನಿ ತಡೆಯುವ ದೃಷ್ಟಿಯಿಂದ ಗುಳೇದಕೊಪ್ಪ ಪಂಚಾಯತಿಯಿಂದ ಸುತ್ತ ಮುತ್ತಲಿನ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷದ ಕುರಿತು ಮಾಹಿತಿ ನೀಡಿ ಡಂಗುರ ಸಾರಲಾಗಿದೆ.