ಚಾಮರಾಜನಗರ: ರೈತರ ಜಮೀನಿನಲ್ಲಿ ಹುಲಿ ಹಾಗೂ ಚಿರತೆ ನಿರಂತರವಾಗಿ ಹಾವಳಿ ನಡೆಸುತ್ತಿದ್ದು ಸಾಕು ಪ್ರಾಣಿಗಳು ನಿರಂತರವಾಗಿ ಬಲಿಯಾಗುತ್ತಿರುವ ಘಟನೆ ರಾಘವಾಪುರ ಗ್ರಾಮದ ಹೊರವಯಲದಲ್ಲಿ ನಡೆದಿದೆ. ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ರಾಘವಾಪುರ ಗ್ರಾಮದಲ್ಲಿ ಚಿರತೆ ಹಾಗೂ ಹುಲಿಯ ಉಪಟಳ ನಿರಂತರವಾಗಿ ಹೆಚ್ಚಿದೆ ಎನ್ನಲಾಗಿದೆ.
ಬಂಡೀಪುರ ಹುಲಿ ಸಂರಕ್ಷಿತ ಅರಣ್ಯ ಪ್ರದೇಶಕ್ಕೆ ಒಳಪಡುವ ರಾಘವಾಪುರ ಗ್ರಾಮದ ಆರ್.ಎಂ.ನಾಗರಾಜು ಎಂಬ ರೈತರ ಜಮೀನಿನಲ್ಲಿ ದಿನನಿತ್ಯ ಹುಲಿ ಹಾಗೂ ಚಿರತೆ ಹಾವಳಿ ಹೆಚ್ಚಿದೆ. ಮಂಗಳವಾರ ರಾತ್ರಿ 10 ಗಂಟೆಯಲ್ಲಿ ಹಾಗೂ ಬುಧವಾರ ಮುಂಜಾನೆ 3 ಗಂಟೆಯಲ್ಲಿ ಮನೆ ಮುಂದೆ ಮಲಗಿದ್ದ ಸಾಕು ನಾಯಿ ಮೇಲೆ ಎರಡು ಬಾರಿ ಚಿರತೆ ದಾಳಿ ನಡೆಸಿದೆ ಎಂದು ತಿಳಿದುಬಂದಿದೆ. ನಾಯಿಯ ಚೀರಾಟದಿಂದ ಓಡಿ ಬಂದು ಚಿರತೆಯಿಂದ ನಾಯಿಯನ್ನು ರಕ್ಷಿಸಲಾಗಿದ್ದು ಪದೇಪದೇ ಚಿರತೆ ಮನೆ ಮುಂದೆ ಅಡ್ಡಾಡುತ್ತಾ ರೈತರಲ್ಲಿ ಆತಂಕ ಸೃಷ್ಟಿಸಿದೆ.
Pavithra Gowda: ನಟಿಯಾಬೇಕೆನ್ನುವ ಕನಸು ಕಂಡಿದ್ದ ಪವಿತ್ರಾ ಗೌಡ ಲೈಫ್ ಹೇಗಿತ್ತು ಗೊತ್ತಾ..?
ಜಮೀನಿನ ಸುತ್ತಮುತ್ತಾ ಹುಲಿ ಅಡ್ಡಾಡುತ್ತಿದ್ದು ಹುಲಿ ಹಾಗು ಚಿರತೆ ದಾಳಿಯಿಂದ ನಾವು ಸಾಕಿದ್ದ ಹಲವು ನಾಯಿಗಳು ಈಗಾಗಲೆ ಬಲಿಯಾಗಿದೆ. ರಾತ್ರೀ ಕೂಡ ಭಾರೀ ಗಾತ್ರದ ಚಿರತೆಯೊಂದು ಮನೆಮುಂದೇ ಮಲಗಿದ್ದ ನಾಯಿ ಮೇಲೆ ಎರಡು ಬಾರಿ ಪ್ರಯತ್ನ ನಡೆಸಿದೆ ಎಂದು ರೈತ ಆರ್.ಎಂ.ನಾಗರಾಜು ತಿಳಿಸಿದರು. ಹುಲಿ ಚಿರತೆಗಳ ಉಪಟಳದಿಂದ ಹೈರಾಣಾಗಿರುವ ರಾಘವಾಪುರ ಗ್ರಾಮದ ರೈತರು ಆತಂಕದಲ್ಲಿದ್ದು ಕೂಡಲೆ ಆತಂಕ ಸೃಷ್ಟಿಸಿರುವ ಹುಲಿ ಹಾಗೂ ಚಿರತೆಗಳನ್ನು ಸೆರೆ ಹಿಡಿಯುವಂತೆ ಸ್ಥಳೀಯ ರೈತರ ಆಗ್ರಹಿಸಿದ್ದಾರೆ.