ಚಾಮರಾಜನಗರ: ರೈತನ ಜಮೀನಿಗೆ ನುಗ್ಗಿ ಚಿರತೆಯೊಂದು ನಾಯಿ ಮೇಲೆ ದಾಳಿ ಮಾಡಿ ಕೊಂದಿರುವ ಘಟನೆ ಚಾಮರಾಜನಗರ ಜಿಲ್ಲೆಯ ಹೆಗ್ಗವಾಡಿಪುರ ಗ್ರಾಮದಲ್ಲಿ ನಡೆದಿದೆ.
ಹೆಗ್ಗವಾಡಿಪುರ ಗ್ರಾಮದ ರೈತ ಮೂರ್ತಿ ಎಂಬುವವರ ಸಾಕು ನಾಯಿಯಾಗಿದ್ದು, ತಡ ರಾತ್ರಿ ನಾಯಿಯನ್ನು ಕೊಂದಾಕಿದೆ. ಸ್ಥಳಕ್ಕೆ ಅರಣ್ಯ ಅಧಿಕಾರಿಗಳು ಬಂದು ಪರೀಶೀಲನೆ ನಡೆಸಿದ್ದಾರೆ. ಕೂಡಲೆ ಚಿರತೆ ಸೆರೆ ಹಿಡಿಯುವಂತೆ ಗ್ರಾಮಸ್ಥರ ಒತ್ತಾಯ ಮಾಡಿದ್ದಾರೆ.