ಬೆಳಗಾವಿ:- ಪ್ರತಿಪಕ್ಷದ ನಾಯಕ ಅಶೋಕಗೆ ಬಿಜೆಪಿ ಶಾಸಕರ ಬೆಂಬಲವೇ ಇಲ್ಲ ಎಂದು ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ.
ಪ್ರಕಟಣೆ ಬಿಡುಗಡೆ ಮಾಡಿದ ಅವರು ಪ್ರತಿಪಕ್ಷದ ನಾಯಕ ಅಶೋಕಗೆ ಬಿಜೆಪಿ ಶಾಸಕರ ಬೆಂಬಲವೇ ಇಲ್ಲ. ಅವರದೇ ಪಕ್ಷದ ಶಾಸಕರು ಪ್ರತಿದಿನ ಅವರಿಗೆ ಮಂಗಳಾರತಿ ಮಾಡುತ್ತಿದ್ದಾರೆ. ಯಾವ ಸ್ಥಾನ ಸಿಕ್ಕಿಲ್ಲವೆಂದು ಬಸನಗೌಡ ಪಾಟೀಲ ಯತ್ನಾಳ ಯಡಿಯೂರಪ್ಪರಿಂದ ಹಿಡಿದು ಎಲ್ಲರ ವಿರುದ್ಧ ಹರಿಹಾಯುತ್ತಿದ್ದಾರೆ.
ಜನರ ಗಮನ ಬೇರೆಡೆ ಸೆಳೆಯುವ ಪ್ರಯತ್ನ ಈ ರೀತಿ ಮಾಡಲು ಪ್ರಯತ್ನಿಸುತ್ತಿದೆ ಅಷ್ಟೇ ಎಂದು ಜರೆದಿದ್ದಾರೆ. ಬೆಳಗಾವಿಯ ಅಧಿವೇಶನದಲ್ಲಿ ಈ ಭಾಗದ ಸಮಸ್ಯೆಗಳ ಪರಿಹಾರ ಕಂಡುಕೊಳ್ಳಲು ಕರೆಯಲಾಗಿದೆ. ಆದರೆ ಚರ್ಚೆಗೆ ಅವಕಾಶ ನೀಡುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ದಮ್ಮು ತಾಕತ್ ಬಗ್ಗೆ ಮಾತನಾಡುವ ಬಿಜೆಪಿಗರು ಕಲಾಪದಲ್ಲಿ ಭಾಗವಹಿಸುವ ಧೈರ್ಯ ತೋರಬೇಕು. ಆದರೆ ಸರ್ಕಾರವೇನಾದರೂ ತಪ್ಪು ಮಾಡಿದ್ದರೆ ಎತ್ತಿ ತೋರಿಸುವ ತಾಕತ್ತು ಪ್ರತಿಪಕ್ಷಕ್ಕೆ ಇಲ್ಲ. ಆಡಳಿತ ಪಕ್ಷವನ್ನು ಎದುರಿಸುವ ಧೈರ್ಯವೇ ಬಿಜೆಪಿಗಿಲ್ಲ. ರಾಜ್ಯದಲ್ಲಿ ಸಮರ್ಥ ಪ್ರತಿಪಕ್ಷ ಇರಬೇಕು. ಬಿಜೆಪಿ ಧರಣಿ ಕೈಬಿಟ್ಟು ಕಲಾಪದಲ್ಲಿ ಭಾಗವಹಿಸಬೇಕೆಂದು ಮನವಿ ಮಾಡಿದ್ದಾರೆ.