ಗದಗ: ನರೇಗಾ ಯೋಜನೆ ಕಾಮಗಾರಿಗೆ ತೆರಳಿದ್ದ ಕೂಲಿ ಕಾರ್ಮಿಕ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಗದಗ ತಾಲೂಕಿನ ಹಿರೇಕೊಪ್ಪ ಗ್ರಾಮದಲ್ಲಿ ನಡೆದಿದೆ. ಬಸಪ್ಪ ಯಲ್ಲಪ್ಪ ಕುರಹಟ್ಟಿ( 55) ಮೃತ ದುರ್ದೈವಿಯಾಗಿದ್ದು,
ಗ್ರಾಮ ಪಂಚಾಯತ್ ನಿಂದ ನೀಡಿದ ನರೇಗಾ ಯೋಜನೆ ಕಾಮಗಾರಿಗೆ ರೈತರ ಜಮೀನಲ್ಲಿ ಬದು ನಿರ್ಮಾಣದ ವೇಳೆ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಬೆಟಗೇರಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.