ಬೆಂಗಳೂರು: ಖಾಸಗಿ ವಾಹನಗಳು, ಬೈಕ್ಗಳು ಹೆಚ್ಚಾಗಿ ಸಂಚಾರಿ ನಿಯಮ ಉಲ್ಲಂಘನೆ ಮಾಡುವುದನ್ನು ನೋಡುತ್ತೇವೆ. ಆದರೆ, ನಿಯಮಗಳನ್ನು ರೂಪಿಸುವ ಸರ್ಕಾರಿ ಸಂಸ್ಥೆಯ ವಾಹನಗಳೇ ಈ ನಿಯಮಗಳನ್ನು ಮುರಿದರೆ ಏನು ಮಾಡುವುದು? ಇಂತಹದ್ದೆ ಘಟನೆ ಸದ್ಯ ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇಯಲ್ಲಿ ನಡೆದಿದೆ. ಅಜಾಗರೂಕತೆಯ ವಾಹನ ಚಾಲನೆ ನೋಡಿ ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರು ಟೀಕೆ ಮಾಡಿದ್ದಾರೆ.
ಬಿಜೆಪಿಯವರು ರಾಹುಲ್ ಆಚಾರ, ಮಾತನ್ನು ಅರ್ಥ ಮಾಡಿಕೊಳ್ಳುವಲ್ಲಿ ವಿಫಲ: ಡಾ.ಜಿ.ಪರಮೇಶ್ವರ್
ರಾಜ್ಯ ಪೊಲೀಸರು ಮತ್ತು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್ಎಚ್ಎಐ) ಎರಡು ಸಂಸ್ಥೆಗಳು ಹಲವು ಬಾರಿ ಸಂಚಾರ ಉಲ್ಲಂಘನೆ ಬಗ್ಗೆ ಎಚ್ಚರಿಕೆ ನೀಡುತ್ತಿದ್ದರೂ ಕೂಡ ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇಯಲ್ಲಿ ಸಂಚಾರ ನಿಯಮ ಉಲ್ಲಂಘನೆ ಮುಂದುವರಿದಿದೆ.
ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇಯಲ್ಲಿ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ (ಕೆಎಸ್ಆರ್ಟಿಸಿ) ಬಸ್ ರಾಂಗ್ ಸೈಡ್ನಲ್ಲಿ ಚಲಿಸುತ್ತಿರುವುದು ಕಂಡು ಬಂದಿದೆ. ಈ ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಸಕತ್ ವೈರಲ್ ಆಗಿದೆ. ಸರ್ಕಾರಿ ಬಸ್ನ ಈ ಆಟ ಬಸ್ ಪ್ರಯಾಣಿಕರಿಗೆ ಮತ್ತು ಇತರ ವಾಹನ ಸವಾರರ ಜೀವಕ್ಕೆ ಅಪಾಯ ತಂದೊಡ್ಡಿದೆ.
Dengue Control: ಬೆಂಗಳೂರಲ್ಲಿ ಡೆಂಘಿ ಕಂಟ್ರೋಲ್ ಬಗ್ಗೆ BBMP ಆಯುಕ್ತರು ಹೇಳಿದ್ದೇನು?
ಕಳೆದ ಶನಿವಾರದಂದು ತೆಗೆದು ವಿಡಿಯೋವಿಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಈ ವೀಡಿಯೊದಲ್ಲಿ, ಬಸ್ ಜನನಿಬಿಡ ರಸ್ತೆಯ ಮೂಲಕ ರಾಂಗ್ ಸೈಡ್ನಲ್ಲಿ ಹೋಗುತ್ತಿರುವುದು ಕಂಡುಬಂದಿದೆ. ಶ್ರೇಯಸ್ ಬೇಲೂರ್ ಎಂಬ ಬಳಕೆದಾರರು ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ.
ಬಿಡುವಿಲ್ಲದ ದಿನದಲ್ಲಿ ಕೆಎಸ್ಆರ್ಟಿಸಿ ಬಸ್ ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇಯಲ್ಲಿ ವಿರುದ್ಧ ದಿಕ್ಕಿನಲ್ಲಿ ಚಲಿಸುತ್ತಿತ್ತು. ಅವರು ವೇಗದ ಲೇನ್ನಲ್ಲಿದ್ದಾರೆ .ಈ ಅಜಾಗರೂಕ ಬಸ್ ಡ್ರೈವರ್ನಿಂದಾಗಿ ಒಂದೆರಡು ಕಾರುಗಳು ತ್ವರಿತವಾಗಿ ಲೇನ್ಗಳನ್ನು ಬದಲಾಯಿಸಬೇಕಾಯಿತು” ಎಂದು ಟೀಕಿಸಿದ್ದಾರೆ.