ಬೆಂಗಳೂರು : ವೃದ್ದನೊಬ್ಬನ ಮೇಲೆ ಕೆಎಸ್ಆರ್ಟಿಸಿ ಬಸ್ ಹರಿದು ವೃದ್ದ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಕೆಂಪೇಗೌಡ ಬಸ್ ನಿಲ್ದಾಣದಲ್ಲಿ ನಡೆದಿದೆ.
Traffic Control Plan: ಟ್ರಾಫಿಕ್ ತಡೆಯಲು ಐಟಿ ಕಂಪನಿಗಳು ಪ್ಲ್ಯಾನ್: 2 ದಿನ ಪಬ್ಲಿಕ್ ಟ್ರಾನ್ಪೋರ್ಟ್ ಬಳಸಲು ಸೂಚನೆ
ಗಂಗಾರೆಡ್ಡಿ (85) ಸಾವಿಗೀಡಾದ ವೃದ್ದ, ಇಂದು ಮಧ್ಯಾಹ್ನ 12.30ರ ಸುಮಾರಿನಲ್ಲಿ ಘಟನೆ ನಡೆದಿದೆ. ಬೆಂಗಳೂರಿನಿಂದ ಆಂಧ್ರದ ಚಿತ್ತೂರಿಗೆ ತೆರಳಲು ಮೆಜೆಸ್ಟಿಕ್ಗೆ ಬಂದಿದ್ದ ಗಂಗಾರೆಡ್ಡಿಗೆ ಚಿಕ್ಕಮಗಳೂರಿಂದ ಬೆಂಗಳೂರಿಗೆ ಬಂದಿದ್ದ ಕೆಎಸ್ಆರ್ಟಿಸಿ ಬಸ್ ಡಿಕ್ಕಿ ಹೊಡೆದಿದೆ. ಗುದ್ದಿದ ರಭಸಕ್ಕೆ ಗಂಗಾರೆಡ್ಡಿ ಸ್ಥಳದಲ್ಲೆ ಸಾವನ್ನಪ್ಪಿದ್ದಾನೆ.
ಘಟನಾ ಸ್ಥಳಕ್ಕೆ ಉಪ್ಪಾರ ಪೇಟೆ ಪೊಲೀಸರು ಭೇಟಿ ನೀಡಿದ್ದು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿದ್ದಾರೆ.