ಗದಗ: ಕೆ ಎಸ್ ಈಶ್ವರಪ್ಪ ಅವರು ಬಿಜೆಪಿ ಪಕ್ಷವನ್ನು ಕಟ್ಟಲು ಪ್ರಮುಖವಾದ ಪಾತ್ರವನ್ನು ವಹಿಸಿದ್ದಾರೆ. ಈಶ್ವರಪ್ಪ ಅವರ ಮಗನಿಗೆ ಟಿಕೇಟ್ ಸಿಗದಿದಕ್ಕೆ ಬೇಜಾರಾಗಿ ಕೆಲವು ನಿರ್ಧಾರ ಮಾಡಿದ್ದಾರೆ ಅಷ್ಟೆ ಎಂದು ಬಸವರಾಜ್ ಬೊಮ್ಮಾಯಿ ಹೇಳಿಕೆ ನೀಡಿದ್ದಾರೆ. ಗದಗ ನಗರದ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ಪಕ್ಷದ ವರಿಷ್ಠರು ಅವರ ಜೊತೆಗೆ ಮಾತನಾಡುತ್ತಿದ್ದಾರೆ.
ಇನ್ನೂ ಸಮಯ ಇದೆ, ಖಂಡಿತವಾಗಿ ಮನವಲಿಸುವ ವಿಶ್ವಾಸಯಿದೆ. ಹಾವೇರಿ ಕ್ಷೇತ್ರದ ಸರ್ವೆಯನ್ನು ನೋಡಿ ನನ್ನನ್ನು ಪಕ್ಷವೇ ನಿರ್ಧಾರ ಮಾಡಿದೆ ಆದ್ದರಿಂದ ನನಗೆ ಇಲ್ಲಿ ಸ್ಪರ್ಧೆ ಮಾಡೋದು ಮನಸಿನ ವಿಷಯವಲ್ಲ, ಕರ್ತವ್ಯವೇದ ಪ್ರಶ್ನೆಯಾಗಿದ್ದು, ವರಿಷ್ಠರು ಕರೆಯನ್ನು ಕೊಟ್ಟಾಗ, ಆ ಕರ್ತವ್ಯವನ್ನು ನಿಭಾಯಿಸಬೇಕು ಎಂದರು. ಇನ್ನೂ ಗದಗ ಜಿಲ್ಲೆಯಲ್ಲಿ ಮುಖಂಡರಲ್ಲಿ ಸಮನ್ವಯ ಕೊರತೆ ವಿಚಾರಕ್ಕೆ ಎಲ್ಲಿ ಪಕ್ಷ ಜಯ ಸಾಧಿಸುತ್ತದೆ,
ಅಲ್ಲಿ, ಪೈಪೋಟಿ ಇರುತ್ತೇ. ಕಾಂಗ್ರೆಸ್ ಪಕ್ಷದಲ್ಲಿ ಟಿಕೆಟ್ ಕೇಳೋವವರೆ ಇಲ್ಲಾ, ಹೀಗಾಗಿ ಅಲ್ಲಿ ಬಂಡಾಯದ ಪ್ರಶ್ನೇ ಇಲ್ಲಾ, ಲೋಕಸಭಾ ಚುನಾವಣೆಯಾದ ಮೇಲೆ ಕಾಂಗ್ರೆಸ್ ಪಕ್ಷದ ದಯನಿಯ ಸ್ಥಿತಿ ಇಡೀ ದೇಶದಲ್ಲಿ ಆಗುತ್ತೇ ನನ್ನ ರಾಜಕೀಯ ಅನುಭವದಿಂದ ಮತ್ತೊಮ್ಮೆ ಪ್ರಧಾನ ಮಂತ್ರಿಯಾದ ಪ್ರಮಾಣ ವಚನ ಸ್ವೀಕಾರ ಮಾಡಿದ ಮೂರು ತಿಂಗಳಲ್ಲಿ, ದೇಶದಲ್ಲಿ ಸ್ಪಿರಿಟ್ ಆಗುತ್ತೇ ಎಂದು ಹೇಳಿದರು.