ಕೆ.ಆರ್.ಪುರ:- ಸುಧೀರ್ಘ 7 ಹಂತಗಳಲ್ಲಿ ನಡೆದ ಲೋಕಸಭೆ ಚುನಾವಣೆ ಮುಕ್ತಾಯವಾಗುತಿದ್ದಂತೆ ವಿವಿಧ ವಾಹಿನಿಗಳು, ಸಂಸ್ಥೆಗಳಿಂದ ಚುನಾವಣೋತ್ತರ ಸಮೀಕ್ಷೆ ಪ್ರಕಟಿಸಲಾಗಿದೆ.ಬಹುತೇಕ ಎಲ್ಲಾ ಸಮೀಕ್ಷೆಗಳಲ್ಲಿ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟ ಭರ್ಜರಿ ಬಹುಮತದೊಂದಿಗೆ ಅಧಿಕಾರಕ್ಕೆ ಬರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಸರ್ಕಾರದ ಲೇಟರ್ ಹೆಡ್ ದುರ್ಬಳಕೆ… ಡಾ.ಸುಧಾಕರ್ ವಿರುದ್ಧ ದಾಖಲಾಯ್ತು ಕೇಸ್!
ಅದೇ ರೀತಿ ಕೇಂದ್ರದಲ್ಲಿ ಮತ್ತೊಮ್ಮೆ ನರೇಂದ್ರ ಮೋದಿ ಅವರು ಪ್ರಧಾನಿಯಾಗಲಿ ಎಂದು ಕೆ.ಆರ್.ಪುರದ ಮಹಭಲೇಶ್ವರ ದೇವಾಲಯದ ಮುಂದೆ 101 ತೆಂಗಿನಕಾಯಿ ಒಡೆಯುವ ಮೂಲಕ ಬಿಜೆಪಿ ಮುಖಂಡ ದೇವಸಂದ್ರದ ಡಿ.ಎ.ಶ್ರೀನಿವಾಸ್ ಅವರು ವಿಶೇಷ ಪೂಜೆ ಸಲ್ಲಿಸಿದರು.ಕ್ಷೇತ್ರದ ಹಲವು ಮುಖಂಡರು ಮತ್ತು ಕಾರ್ಯಕರ್ತರು ಪಾಲ್ಗೊಂಡು ಸಂಭ್ರಮಾಚರಣೆ ಮಾಡಿಡರು.
ಹೀಗೆ ಬಹುತೇಕ ಸಮೀಕ್ಷೆಗಳು ಎನ್.ಡಿ.ಎ. ಮೈತ್ರಿಕೂಟ ಅಧಿಕಾರಕ್ಕೆ ಬರಲಿದ್ದು, ಮೂರನೇ ಬಾರಿಗೆ ಮೋದಿ ಪ್ರಧಾನಿಯಾಗಲಿದ್ದಾರೆ ಎಂದು ಹೇಳಿವೆ. ಈ ಸಮೀಕ್ಷೆಗಳಲ್ಲಿ ಬಿಜೆಪಿ ಅಧಿಕಾರಕ್ಕೇರುವುದು ನಿರೀಕ್ಷೆ ಇದೆ ಎಂದು ಹೇಳುತ್ತಿದ್ದಂತೆ ದೇಶಾದ್ಯಂತ ಬಿಜೆಪಿ ಕಾರ್ಯಕರ್ತರು, ಬೆಂಬಲಿಗರು ಸಂಭ್ರಮಾಚರಣೆ ನಡೆಸುತ್ತಿದ್ದಾರೆ.
ಈ ಸಂದರ್ಭದಲ್ಲಿ ಮುಖಂಡರಾದ ಸಚ್ಚಿದಾನಂದಮೂರ್ತಿ,ಬಚ್ಚೇಗೌಡ,ಕೆ.ಪಿ
ಕೃಷ್ಣ,ಲೋಕೆಶ್,ಶ್ರೀರಾಮುಲು,ಹಾಗೂ ಬಿಜೆಪಿ ಮಹಿಳಾ ಅಧ್ಯಕ್ಷೆ ಗೌರಮ್ಮ ,ಭಾಗ್ಯಮ್ಮ ಕಾರ್ಯಕರ್ತರು ಇದ್ದರು.