ಕಲಬುರಗಿ ಜಿಲ್ಲೆ ಜೇವರ್ಗಿ ತಾಲೂಕಿನ ಕಾಕಂಡಕಿಯಲ್ಲಿ ಅಚ್ಚರಿ ಪವಾಡವೊಂದು ನಡೆದಿದೆ. ಕಾಕಂಡಕಿಯ ಗುರು ಮಲ್ಲಾರಾಧ್ಯರ ಜಾತ್ರೆಯಲ್ಲಿ ನಡೆದ ಪವಾಡ ಎಲ್ಲರನ್ನೂ ಬೆರಗುಗೊಳಿಸಿದೆ. ಅಷ್ಟಕ್ಕೂ ಆ ಪವಾಡವಾದ್ರೂ ಏನು ಅನ್ನೋದನ್ನ ಹೇಳ್ತೀವಿ ಕೇಳಿ.. ರಾತ್ರಿ ಏಕಾಎಕಿ ರಥೋತ್ಸವದ ವೇಳೆ ಭಾರಿ ಮಳೆ ಬಂತು.ಆಗ ತೇರು ಎಳೆಯುವುದು ಹೇಗೆ ಅನ್ನೋ ಪ್ರಶ್ನೆ ಮೂಡಿತು ಕಾರಣ,
ಮೊಳಕಾಲುದ್ದ ಮಳೆ ನೀರು ಜೊತೆಗೆ ಕೆಸರು. ವಿಶೇಷ ಅಂದ್ರೆ ಅದೇ ಕೆಸರಿನಲ್ಲಿ ಸರಾಗವಾಗಿ ದಡ ಸೇರಿತು ತೇರು..ಕೋರಿಸಿದ್ಧೇಶ್ವರ ಮಠದ ಶ್ರೀ ತೋಟೇಂದ್ರ ಸ್ವಾಮಿಜಿಯ ನೇತ್ರತ್ವದಲ್ಲಿ ರಥೋತ್ಸವ ಜರುಗಿ ಪವಾಡ ನಡೆದಿದ್ದು ಭಕ್ತರಿಂದ ಆಗದ ಕೆಲಸ ದೇವರ ಪವಾಡದಿಂದ ಆಯಿತು ಅನ್ನೋ ಮಾತು ಜಾತ್ರೆಗೆ ಬಂದಿದ್ದ ಭಕ್ತರಿಂದ ಹೊರಬಿತ್ತು..