ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಲೀಗ್ ಹಂತದ ಕೊನೇ ಪಂದ್ಯಗಳಲ್ಲಿ ನೀಡಿದ ಪ್ರದರ್ಶನ ಕಂಡು ಟ್ರೋಫಿ ಗೆಲ್ಲುವ ಎಲ್ಲಾ ಸಾಧ್ಯತೆ ಇದೆ ಎಂದು ಭಾಸವಾಗಿತ್ತು. ದುರದೃಷ್ಟವಶಾತ್ ಆರ್ಸಿಬಿ ಎಲಿಮಿನೇಟರ್ ಪಂದ್ಯದಲ್ಲಿ ತನ್ನ ಹೋರಾಟ ಮುಗಿಸಿದೆ ಎಂದು ಬ್ರೆಟ್ ಲೀ ಹೇಳಿದ್ದಾರೆ. ಆರ್ಸಿಬಿ ಪ್ರಶಸ್ತಿ ರೇಸ್ನಲ್ಲಿ ಇಲ್ಲದೇ ಇರುವ ಕಾರಣ ಸದ್ಯದ ಪ್ರದರ್ಶನದ ಆಧಾರದ ಮೇಲೆ ಕೆಕೆಆರ್ಗೆ ಟ್ರೋಫಿ ಗೆಲ್ಲುವ ಎಲ್ಲಾ ಅವಕಾಶವಿದೆ ಹಾಗೂ ಅರ್ಹ ತಂಡ ಕೂಡ ಆಗಿದೆ ಎಂದಿದ್ದಾರೆ.
“ಆರಂಭದಿಂದಲೂ ನನಗೆ ಆರ್ಸಿಬಿ ತಂಡದ ಮೇಲೆ ಅಪಾರ ನಿರೀಕ್ಷೆ ಇತ್ತು. ಎಲಿಮಿನೇಟರ್ ಪಂದ್ಯ ಸೋತು ಆರ್ಸಿಬಿ ಸ್ಪರ್ಧೆಯಿಂದ ಹೊರಬಿದ್ದಾಗ ನನಗೆ ಬಹಳಾ ಬೇಸರವಾಯಿತು. ಈಗ ಸದ್ಯದ ಪ್ರದರ್ಶದ ಆಧಾರದ ಮೇಲೆ ಹೇಳುವುದಾದರೆ ಕೋಲ್ಕತಾ ನೈಟ್ ರೈಡರ್ಸ್ ತಂಡ ಟ್ರೋಫಿ ಗೆಲ್ಲುವ ಫೇವರಿಟ್ ಆಗಿದೆ. ನನ್ನ ಪ್ರಕಾರ ಟ್ರೋಫಿ ಗೆಲುವಿಗೆ ಕೆಕೆಆರ್ ಅರ್ಹ ತಂಡವಾಗಿದೆ. ಫೈನಲ್ಗೆ ನೇರ ಅರ್ಹತೆ ಪಡೆಯುವಂತಹ ಶ್ರಮ ವಹಿಸಿದೆ.
500 Note Update: ನಿಮ್ಮ ಬಳಿ 500 ರೂಪಾಯಿ ನೋಟು ಇದ್ಯಾ..? ಕ್ಷಣಮಾತ್ರದಲ್ಲಿ ನೀವು ಆಗ್ಬೋದು ಮಿಲಿಯನೇರ್
ಹೀಗಾಗಿ ಈ ತಂಡವನ್ನು ಸೋಲಿಸುವುದು ಅಷ್ಟು ಸುಲಭದ ಮಾತಲ್ಲ,” ಎಂದು ಬ್ರೆಟ್ ಲೀ ಅಭಿಪ್ರಾಯ ಪಟ್ಟಿದ್ದಾರೆ. ಬ್ರೆಟ್ ಲೀ ಅವರ ಈ ಮಾತಿಗೆ ಶ್ರೀಲಂಕಾದ ಮಾಜಿ ದಿಗ್ಗಜ ಬ್ಯಾಟರ್ ತಿಲಕರತ್ನೆ ದಿಲ್ಷಾನ್ ಕೂಡ ಸಮ್ಮತಿಸಿದ್ದಾರೆ. ಆರ್ಆರ್ ಮತ್ತು ಎಸ್ಆರ್ಎಚ್ ತಂಡಕ್ಕಿಂತಲೂ ಕೆಕೆಆರ್ ಅತ್ಯಂತ ಅರ್ಹತ ತಂಡವಾಗಿದೆ ಎಂದಿದ್ದಾರೆ. “ಐಪಿಎಲ್ ಟೂರ್ನಿಯುದ್ದಕ್ಕೂ ಕೋಲ್ಕತಾ ನೈಟ್ ರೈಡರ್ಸ್ ತಂಡ ಅತ್ಯಂತ ಸ್ಥಿರ ಪ್ರದರ್ಶನ ನೀಡಿದೆ.
ರಾಜಸ್ಥಾನ್ ರಾಯಲ್ಸ್ ಕೂಡ ಉತ್ತಮ ಆಟವಾಡಿದೆ. ಆದರೆ ಲೀಗ್ ಹಂತದ ಅಂತ್ಯದಲ್ಲಿ ಅವರ ಪ್ರದರ್ಶನ ಮಂಕಾಯಿತು. ಕೆಕೆಆರ್ ತಂಡ ಮೂರೂ ವಿಭಾಗಗಳಲ್ಲಿ ಭರ್ಜರಿ ಆಟವಾಡಿದೆ. ಬ್ಯಾಟಿಂಗ್, ಬೌಲಿಂಗ್ ಮತ್ತು ಫೀಲ್ಡಿಂಗ್ನಲ್ಲಿ ನೀಡಿರುವ ಉತ್ತಮ ಪ್ರದರ್ಶನ ಕಾರಣ ಕೆಕೆಆರ್ ಟ್ರೋಫಿ ಗೆಲುವಿಗೆ ಅರ್ಹವಾಗಿದೆ,” ಎಂದು ದಿಲ್ಷಾನ್ ಹೇಳಿದ್ದಾರೆ.