ಕೋಲಾರ:- ಜಿಲ್ಲೆಯಲ್ಲಿ ಮತ್ತೊರ್ವ ಬಿಜೆಪಿ ಭಂಡಾಯ ನಾಯಕ ಎನ್ ಡಿ ಎ ಅಭ್ಯರ್ಥಿಗೆ ಬೆಂಬಲ ಸೂಚಿಸಿದ್ದಾರೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮಾಲೂರು ಕ್ಷೇತ್ರದ ರೀತಿಯಲ್ಲಿ ಕೆಜಿಎಫ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗೂ ಸಹ ಭಂಡಾಯ ಬಿಸಿ ತಗುಲಿತ್ತು. ಬಿಜೆಪಿಯಲ್ಲಿ ಟಿಕೆಟ್ ಗಾಗಿ ಅಶ್ಚಿನಿ ಸಂಪಂಗಿ ಮತ್ತು ಮೋಹನ್ ಕೃಷ್ಣ ನಡುವೆ ಪೈಪೋಟಿ ಏರ್ಪಟ್ಟಿತು.
PM ಮೋದಿ ಅವರಿಗೆ ಎಲ್ಲ ರೀತಿಯಲ್ಲಿ ಹಿನ್ನಡೆ ಮಾಡಬೇಕು ಎಂಬ ಷಡ್ಯಂತ್ರ ಇದೆ- ಜೋಶಿ
ಟಿಕೇಟ್ ಮಾಜಿ ಶಾಸಕ ವೈ ಸಂಪಂಗಿ ಪುತ್ರಿ ಅಶ್ವಿನಿ ಸಂಪಂಗಿಗೆ ಒಲಿದಿತ್ತು.ಆ ಮೋಹನ್ ಕೃಷ್ಣ ಪಕ್ಷದ ವಿರುದ್ದ ಮುನಿಸಿಕೊಂಡಿದ್ದರು. ಇದೀಗ ಕೆಜಿಎಫ್ ತಾಲೂಕಿನ ಬೇತಮಂಗಲದಲ್ಲಿ ತಮ್ಮ ಬೆಂಬಲಿಗರ ಸಬೆ ನಡೆಸಿರುವ ಮೋಹನ್ ಕೃಷ್ಣ ಎನ್ ಡಿ ಎ ಅಭ್ಯರ್ಥಿ ಗೆ ತಮ್ಮ ಬೆಂಬಲ ಸೂಚಿಸಿದ್ದಾರೆ.
ಹಾಲಿ ಎನ್ಡಿಎ ಅಭ್ಯರ್ಥಿ ಮಲ್ಲೇಶ್ಬಾಬು ತಮಗೆ ಹಲವು ಭಾರಿ ಸಂಪರ್ಕ ಮಾಡಿದ್ದಾರೆ. ತಮ್ಮನ್ನು ಬೆಂಬಲಿಸುವಂತೆ ಮನವಿ ಮಾಡಿದ್ದಾರೆ. ಆದ್ದರಿಂದ ಅವರನ್ನು ಯಾವುದೆ ಶರತ್ತು ಇಲ್ಲದೆ ಬೆಂಬಲಿಸುವ ನಿರ್ಧಾರವನ್ನು ಕೈಗೊಂಡಿದ್ದಾಗಿ ಬೆಂಬಲಿಗರ ಸಭೆಯಲ್ಲಿ ಹೇಳಿಕೊಂಡಿದ್ದಾರೆ.