ಅಫ್ಗಾನಿಸ್ತಾನ ವಿರುದ್ಧ ಮೂರು ಟಿ20 ಪಂದ್ಯಗಳ ಸರಣಿಗೆ ಅನುಭವಿಗಳಾದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರಿಗೆ ಅವಕಾಶ ಮಾಡಿರುವುದು ಇತ್ತೀಚಿನ ಒಂದು ನಿದರ್ಶನ.
2002ರ ನವೆಂಬರ್ನಲ್ಲಿ ಟಿ20 ವಿಶ್ವಕಪ್ ಸೆಮಿಫೈನಲ್ನಲ್ಲಿ ಭಾರತ ಮುಖಭಂಗ ಅನುಭವಿಸಿದ ನಂತರ ಸುಮಾರು 14 ತಿಂಗಳ ಕಾಲ ಇವರಿಬ್ಬರು ತಂಡದಿಂದ ಹೊರಗಿದ್ದರು. ನಂತರ ಹಾರ್ದಿಕ್ ಪಾಂಡ್ಯ ಅವರಿಗೆ ನಾಯಕತ್ವ ವಹಿಸಲಾಯಿತು. ಅವರು ಗಾಯಾಳಾದಾಗ, ಸೂರ್ಯಕುಮಾರ್ ಯಾದವ್ ಅವರಿಗೆ (ತವರಿನಲ್ಲಿ ಆಸ್ಟ್ರೇಲಿಯಾ ವಿರುದ್ಧ ಮತ್ತು ಹೊರಗಡೆ ದಕ್ಷಿಣ ಆಫ್ರಿಕಾ ವಿರುದ್ಧ) ತಂಡದ ನೇತೃತ್ವ ವಹಿಸಲಾಯಿತು.
ಈಗ ಹಾರ್ದಿಕ್ ಮತ್ತು ಸೂರ್ಯ ಅವರಿಬ್ಬರೂ ಗಾಯಾಳಾಗಿ ತಂಡಕ್ಕೆ ಲಭ್ಯರಿಲ್ಲ. ಋತುರಾಜ್ ಗಾಯಕವಾಡ ಅವರಿಗೆ ಬೆರಳಿನ ಗಾಯವಾಗಿದೆ. ಆದರೆ ಇತರ ಆಟಗಾರರಿದ್ದರೂ, ಈ ಇಬ್ಬರು ಏಕದಿನ ಮಾದರಿಯ ಅನುಭವಿಗಳನ್ನು ತಂಡಕ್ಕೆ ಮರಳಿ ಕರೆತರಲಾಗಿದೆ. ರೋಹಿತ್ ಮತ್ತು ಕೊಹ್ಲಿ ಅವರಿಗೂ ಕೊನೆಯದಾಗಿ ಆಡಬೇಕೆಂಬ ಬಯಕೆಯಿರುವುದು ಸಹಜ. ಅಜಿತ್ ಅಗರಕರ್ ನೇತೃತ್ವದ ಆಯ್ಕೆ ಸಮಿತಿ ಅವರಿಗೆ ಅವಕಾಶ ನೀಡಿದೆ. ಈ ಸರಣಿಯಲ್ಲಿ ಮತ್ತು ಐಪಿಎಲ್ನಲ್ಲಿ ಗಳಿಸುವ ಯಶಸ್ಸಿನ ಮೇಲೆ ವಿಶ್ವಕಪ್ ತಂಡಕ್ಕೆ ಅವರ ಆಯ್ಕೆ ಅವಲಂಬಿಸಿದೆ. ಆದರೆ ಈ ಆಯ್ಕೆಯಿಂದ ಅವರಿಗೆ ಬಾಗಿಲು ಮುಚ್ಚಿಲ್ಲ ಎಂಬ ಸಂದೇಶವಂತೂ ರವಾನೆಯಾಗಿದೆ.