ವಿರಾಟ್ ಅವರ ಬಾಲ್ಯದ ಕೋಚ್ ಹೇಳಿಕೆಭಾರತೀಯ ಕ್ರಿಕೆಟ್ನಲ್ಲಿ ಕೋಲಾಹಲಕ್ಕೆ ಕಾರಣವಾಗಿದ್ದು, ಕೊಹ್ಲಿ ರಾಜಕೀಯದ ಬಲಿಪಶು ಎಂದು ಅವರು ಹೇಳಿದ್ದಾರೆ.
ಟೀಂ ಇಂಡಿಯಾದ ಬೆನ್ನೆಲುಬಾಗಿರುವ ವಿರಾಟ್ ಕೊಹ್ಲಿ ಟಿ20 ವಿಶ್ವಕಪ್ ನಿಂದ ಹೊರಗಿಡುವ ಯೋಚನೆಯನ್ನು ಬಿಸಿಸಿಐ ನಡೆಸಿದೆ ಎಂಬ ಮಾತು ಎಲ್ಲಡೆ ಕೇಳಿಬರುತ್ತಿದೆ. ಇದರ ನಡುವೆ ರಾಜಸ್ಥಾನ್ ರಾಯಲ್ಸ್ ವಿರುದ್ಧ 67 ಎಸೆತಗಳಲ್ಲಿ ಶತಕ ಸಿಡಿಸಿ ಕೊಹ್ಲಿ ತಮ್ಮನ್ನು ಸಾಭೀತು ಪಡಿಸಿದ್ದಾರೆ. ಆದ್ರೂ ವಿರಾಟ್ ಕೊಹ್ಲಿ ನಿಧಾನವಾಗಿ ಬ್ಯಾಟಿಂಗ್ ಮಾಡಿದರು ಎಂಬ ಮಾತು ಹೇಳಲಾಗುತ್ತಿದೆ.
Namma Metro: ಆತ ಮದ್ಯ ಸೇವಿಸಿದ್ದ ಕಾರಣ ಒಳಗೆ ಬಿಟ್ಟಿಲ್ಲ – ಕಾರ್ಮಿಕನಿಗಾದ ಅವಮಾನದ ಬಗ್ಗೆ BMRCL ಸ್ಪಷ್ಟನೆ!
ಕೊಹ್ಲಿ ನಿಧಾನವಾಗಿ ಬ್ಯಾಟ್ ಮಾಡುತ್ತಾರೆ. ವಿಶ್ವಕಪ್ಗೆ ಭಾರತ ತಂಡದಲ್ಲಿ ವಿರಾಟ್ ಕೊಹ್ಲಿಯನ್ನು ಸೇರಿಸಿಕೊಳ್ಳುವುದು ಹೀಗಾಗಿ ಅನುಮಾನ ಎನ್ನಲಾಗುತ್ತಿದೆ. ಆದರೆ ಅನೇಕರು ದಿಗ್ಗಜ ಕ್ರಿಕೆಟಿಗರು ಹಾಗೂ ನಾಯಕ ರೋಹಿತ್ ಸಹ ಒಪ್ಪಿಕೊಳ್ಳಲು ಹಿಂಜರಿಯುತ್ತಿದ್ದಾರೆ
ಈ ಚರ್ಚೆಗಳ ನಡುವೆ ವಿರಾಟ್ ಅವರ ಬಾಲ್ಯದ ಕೋಚ್ ಹೇಳಿಕೆಭಾರತೀಯ ಕ್ರಿಕೆಟ್ನಲ್ಲಿ ಕೋಲಾಹಲಕ್ಕೆ ಕಾರಣವಾಗಿದೆ. ಕೊಹ್ಲಿ ರಾಜಕೀಯದ ಬಲಿಪಶು ಎಂದು ಅವರು ಹೇಳಿದ್ದಾರೆ. ಹೌದು, ಕೊಹ್ಲಿ ಕೋಚ್ ಆಗಿದ್ದ ರಾಜ್ಕುಮಾರ್ ಶರ್ಮಾ ಅವರು ವಿರಾಟ್ ಕೊಹ್ಲಿಯ ಆಯ್ಕೆ ಬಗ್ಗೆ ಮೌನ ಮುರಿದಿದ್ದಾರೆ.
ಕೊಹ್ಲಿ ಬಗ್ಗೆ ರಾಜಕೀಯ ನಡೆಯುತ್ತಿದೆ ಎಂದು ಕಿಡಿಕಾರಿದ್ದಾರೆ. ತನ್ನದೇ ಆದ ಅಜೆಂಡಾದೊಂದಿಗೆ ಲಾಬಿ ನಡೆಯುತ್ತಿದೆ ಎಂದು ರಾಜ್ಕುಮಾರ್ ಶರ್ಮಾ ಹೇಳಿದ್ದಾರೆ. ಈ ಲಾಬಿ ವಿರಾಟ್ ವಿರುದ್ಧ ರಾಜಕೀಯ ಮಾಡುತ್ತಿದೆ. ಆದರೆ ರಾಜನು ಎಂದಿಗೂ ರಾಜ ಎಂದು ಹೇಳಿದ್ದು, ಕ್ರಿಕೆಟ್ ಅರ್ಥ ಮಾಡಿಕೊಂಡವರು ಹಾಗೂ ಅವರ ಅಭಿಮಾನಿಗಳು ತಲೆಕೆಡಿಸಿಕೊಳ್ಳುವುದಿಲ್ಲ.
ಜೊತೆಗೆ ವಿರಾಟ್ ಕೊಹ್ಲಿ ಈ ವಿಚಾರದಲ್ಲಿ ಮೂರ್ಖನಂತೆ ವರ್ತಿಸುವುದಿಲ್ಲ ಎಂದಿದ್ದಾರೆ. ಈ ಬಾರಿ ಕೊಹ್ಲಿ ಐಪಿಎಲ್ನಲ್ಲಿ 5 ಪಂದ್ಯಗಳಲ್ಲಿ 316 ರನ್ ಗಳಿಸಿದ್ದರು. ಸ್ಟ್ರೈಕ್ ರೇಟ್ 146.33 ಹಾಗೂ ಸರಾಸರಿ 105.33 ಇದೆ. ಆದ್ರೆ ಇಲ್ಲಿ ಪ್ರಶ್ನೆ ಅವರ ಸ್ಟ್ರೈಕ್ ರೇಟ್ ಬಗ್ಗೆ. ಆದರೆ, ಕೊಹ್ಲಿ ಇಲ್ಲದೆ ಭಾರತ ವಿಶ್ವಕಪ್ ತಂಡವನ್ನು ಯೋಚಿಸಲು ಸಾಧ್ಯವಿಲ್ಲ ಎಂದು ಬ್ರಿಯಾನ್ ಲಾರಾ ಹೇಳಿದ್ದಾರೆ.