ಜಸ್ಪ್ರೀತ್ ಬುಮ್ರಾ ಮುಂಬೈ ಇಂಡಿಯನ್ಸ್ ತೊರೆಯೋದು ಪಕ್ಕಾ ಆಗಿದೆ.
MS ಧೋನಿ ಫ್ಯಾನ್ಸ್ ಗೆ ಸಿಹಿ ಸುದ್ದಿ: ಹಳೆಯ ನಿಯಮ ಜಾರಿಗೆ ಮುಂದಾದ BCCI!
ಇನ್ನು, ಮುಂಬೈ ಇಂಡಿಯನ್ಸ್ ತೊರೆದ ಬಳಿಕ ಬುಮ್ರಾ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸೇರಲಿದ್ದಾರಾ? ಅನ್ನೋ ಚರ್ಚೆ ನಡೆಯುತ್ತಿದೆ. ಆರ್ಸಿಬಿ ತಂಡವೂ ಬೌಲಿಂಗ್ನಲ್ಲಿ ಭಾರೀ ವೀಕ್ ಆಗಿದ್ದು, ಬುಮ್ರಾ ಬಂದರೆ ಕಪ್ ಗೆಲ್ಲಲು ಸಹಕಾರಿಯಾಗಲಿದೆ. ಹಾಗಾಗಿ ಮೆಗಾ ಆಕ್ಷನ್ನಲ್ಲಿ ಬುಮ್ರಾಗೆ ಆರ್ಸಿಬಿ ಬಿಡ್ ಮಾಡಲಿದೆ ಎಂದು ಹೇಳಲಾಗುತ್ತಿದೆ. ಇದಕ್ಕಾಗಿ ಆರ್ಸಿಬಿ ಬ್ಯಾಟಿಂಗ್ ಕೋಚ್ ಮತ್ತು ಮೆಂಟರ್ ದಿನೇಶ್ ಕಾರ್ತಿಕ್ ಭಾರೀ ತಯಾರಿ ನಡೆಸಿದ್ದಾರೆ.
ಈ ಹಿಂದೆಯೇ ಹಾರ್ದಿಕ್ ಪಾಂಡ್ಯ ಮುಂಬೈ ಇಂಡಿಯನ್ಸ್ ತಂಡಕ್ಕೆ ಮರಳಿದ್ದರು. ಆಗ ತನ್ನ ಬದಲಿಗೆ ಹಾರ್ದಿಕ್ ಪಾಂಡ್ಯಗೆ ನಾಯಕತ್ವ ನೀಡಿದ್ದಕ್ಕಾಗಿ ಬುಮ್ರಾ ಅಸಮಾಧಾನ ಹೊರಹಾಕಿದ್ದರು. ಅದರಲ್ಲೂ ಬುಮ್ರಾ ಇನ್ಸ್ಟಾಗ್ರಾಂನಲ್ಲಿ “ಮೌನವು ಕೆಲವೊಮ್ಮೆ ಉತ್ತಮ ಉತ್ತರವಾಗಿದೆ” ಎಂದು ಸ್ಟೋರಿ ಹಾಕಿದ್ದು ಕ್ರಿಕೆಟ್ ವಲಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿತ್ತು.
ಬುಮ್ರಾ ಮುಂಬೈ ಇಂಡಿಯನ್ಸ್ ತೊರೆಯುವುದು ಪಕ್ಕಾ ಆಗಿದೆ. ಗುಜರಾತ್ ಟೈಟನ್ಸ್ ಬುಮ್ರಾ ಅವರನ್ನು ಟ್ರೇಡ್ ಮೂಲಕ ತಂಡಕ್ಕೆ ಸೇರಿಸಿಕೊಳ್ಳಲು ಆಸಕ್ತಿ ಹೊಂದಿದೆ. ಇನ್ನೂ ಕೆಲವರು ಆರ್ಸಿಬಿ ಟ್ರೇಡ್ ಮೂಲಕ ಬುಮ್ರಾರನ್ನು ತಂಡಕ್ಕೆ ಸೇರಿಸಿಕೊಳ್ಳಬೇಕು. ಇಲ್ಲದೆ ಹೋದಲ್ಲಿ ಮೆಗಾ ಆಕ್ಷನ್ನಲ್ಲೂ ಖರೀದಿ ಮಾಡಬಹುದು ಎಂದು ಹೇಳಲಾಗುತ್ತಿದೆ. ಒಟ್ಟಾರೆ ಈ ಬಾರಿ ಐಪಿಎಲ್ ಹರಾಜಿಗೆ ಮುನ್ನವೇ ಸಾಕಷ್ಟು ಹೈಡ್ರಾಮ ನಡೆಯಲಿದೆ.