ಬೆಂಗಳೂರು: ಕೊಡಿಗೇಹಳ್ಳಿಯ ಚಿನ್ನದಂಗಡಿ ದರೋಡೆ ಯತ್ನದ ವೇಳೆ ತಮ್ಮ ಗುಂಪಿನವರೇ ಹಾರಿಸಿದ್ದ ಗುಂಡೇಟಿನಿಂದ ಗಾಯಗೊಂಡಿದ್ದ ಆರೋಪಿ ಸೂರಜ್ ಮಧ್ಯಪ್ರದೇಶದ ಗ್ವಾಲಿಯರ್ ಆಸ್ಪತ್ರೆಯಲ್ಲಿ ಸಾವಿಗೀಡಾಗಿದ್ದಾನೆ.
Loksabha Election: ರಾಜಕೀಯವಾಗಿ ನಮಗೆ ವಿಷ ಹಾಕಿದ್ದಿರಿ: ಡಿಸಿಎಂ ವಿರುದ್ಧ HDK ಆಕ್ರೋಶ!
ಮಾ.14 ರಂದು ಕೊಡಿಗೇಹಳ್ಳಿಯ ಲಕ್ಷ್ಮೀ ಬ್ಯಾಂಕರ್ಸ್ & ಜ್ಯುವೆಲರ್ಸ್ ದರೋಡೆಗೆ ನಾಲ್ವರ ಗುಂಪು ಯತ್ನಿಸಿತ್ತು. ಈ ವೇಳೆ ದರೋಡೆಕೋರರ ಗುಂಪು ಗುಂಡು ಹಾರಿಸಿತ್ತು. ಪರಿಣಾಮ ಮಾಲೀಕ ಹಾಗೂ ಕೆಲಸಗಾರರೊಬ್ಬರಿಗೆ ಗುಂಡು ತಗುಲಿ ಗಾಯಗೊಂಡಿದ್ದರು. ಇದೇ ವೇಳೆ ಅದೇ ಗ್ಯಾಂಗ್ನ ಆರೋಪಿ ಆಶು ಪಂಡಿತ್ ಹಾರಿಸಿದ್ದ ಗುಂಡು ಸೂರಜ್ ಕತ್ತಿಗೆ ತಗುಲಿತ್ತು. ಬಳಿಕ ಜನ ಸೇರುತ್ತಿದ್ದಂತೆ ಆತನನ್ನು ಕರೆದುಕೊಂಡು ಕಳ್ಳರ ಗ್ಯಾಂಗ್ ಪರಾರಿಯಾಗಿತ್ತು.
ಹನುಮಾನ್ ಚಾಲೀಸಾ ಕೇಸ್: ಶೋಭಾ ಕರಂದ್ಲಾಜೆ ಸೇರಿದಂತೆ ಹಿಂದೂ ಕಾರ್ಯಕರ್ತರು ವಶಕ್ಕೆ!
ದರೋಡೆಕೋರರ ಗುಂಪು, ಆಂಧ್ರಪ್ರದೇಶದ ಆನಂತರಪುರಕ್ಕೆ ತೆರಳಿ ಅಲ್ಲಿಂದ ರೈಲಿನಲ್ಲಿ ಮಧ್ಯಪ್ರದೇಶದ ಗ್ವಾಲಿಯರ್ಗೆ ಪರಾರಿಯಾಗಿತ್ತು. ಬಳಿಕ ಸೂರಜ್ನ ಸಹಚರರು ಆತನನ್ನು ಗ್ವಾಲಿಯರ್ ಆಸ್ಪತ್ರೆಗೆ ದಾಖಲಿಸಿದ್ದರು. ಇದೀಗ ಚಿಕಿತ್ಸೆ ಫಲಕಾರಿಯಾಗದೇ ಆತ ಸಾವಿಗೀಡಾಗಿದ್ದಾನೆ. ಈ ಸಂಬಂಧ ಮೂವರು ಆರೋಪಿಗಳನ್ನು ಕೊಡಿಗೇಹಳ್ಳಿ ಪೊಲೀಸರು ಬಂಧಿಸಿದ್ದಾರೆ.