ಕೊಡಗು: ಕೊಡಗು ಜಿಲ್ಲೆಯ ಕುಶಾಲನಗರ ತಾಲುಕು ಸುಂಟಿಕೊಪ್ಪ ಸಮೀಪದ ಏಳನೇ ಹೊಸಕೋಟೆಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೆಳ್ಳಂಬೆಳಗೆ ಕಾಡಾನೆಗಳು ಕಾಣಿಸಿಕೊಂಡಿವೆ. ಭಾನುವಾರ ಮುಂಜಾನೆ ಗ್ರಾಮ ಪಂಚಾಯಿತಿ ಬಳಿ ಇರುವ ಸಾವಿತ್ರಿ ಎಂಬುವವರ ತೋಟದ ಮೂಲಕ ಬಂದ ಕಾಡಾನೆಯೊಂದು ಆಗ ತಾನೇ ಮಸೀದಿಗೆ ತೆರಳಿ ನಮಾಜ್ ಮುಗಿಸಿ ಬರುತ್ತಿದ್ದ ವ್ಯಕ್ತಿಯೊಬ್ಬರ ಮೇಲೆ ದಾಳಿ ನಡೆಸಲು ಮುಂದಾಗಿದೆ.
Muskmelon Seeds: ಕರ್ಬೂಜ ಹಣ್ಣಿನ ಬೀಜಗಳಿಂದ ಎಷ್ಟೆಲ್ಲಾ ಅದ್ಭುತ ಪ್ರಯೋಜನಗಳಿವೆ ಗೊತ್ತಾ..?
ಆದರೆ ಅವರು ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ. ಅವರ ಕಾರನ್ನು ಜಖಂಗೊಳಿಸಿ ತೋಟದೊಳಗೆ ಕಣ್ಮರೆಯಾದಂತೆ ಅದೇ ಮಾರ್ಗದಲ್ಲಿ ಮತ್ತೊಂದು ಕಾಡಾನೆ ಕಾಣಿಸಿಕೊಂಡಿದೆ. ದಿಢೀರ್ ಆಗಿ ಕಾಣಿಸಿಕೊಂಡ ಕಾಡಾನೆಗಳಿಂದ ಈ ಭಾಗದ ಜನ ಭಯಬೀತರಾದರು. ಎರಡು ಕಾಡಾನೆಗಳ ಪೈಕಿ ಒಂದರ ವಿಡಿಯೋ ಸೆರೆಯಾಗಿದೆ.