ಬಾಗಲಕೋಟೆ :- ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಹೂಸೂರ ನಗರದಲ್ಲಿ ಸ್ವಾತಂತ್ರ್ಯ ಹೋರಾಟಗಾರರಾದ ವೀರರಾಣಿಕಿತ್ತೂರುಚನ್ನಮ್ಮ ಹಾಗೂ ಅಷ್ಫಖುಲ್ಲಾಖಾನ ರವರ ಜಯಂತೋತ್ಸವನ್ನು ಹಿಂದು-ಮುಸ್ಲಿಂ ಬಾಂಧವರಿಂದ ಆಚರಿಸಿದರು,
ಉಪಚುನಾವಣೆ: ಮುಸ್ಲಿಂ ವ್ಯಕ್ತಿಗೆ ಶಿಗ್ಗಾಂವಿ ಟಿಕೆಟ್ ನೀಡಿದ ಕಾಂಗ್ರೆಸ್!
ಅವರ ಇಬ್ಬರ ಭಾವಚಿತ್ರಕ್ಕೆ ವಿಶೇಷ ಪೂಜೆ, ಗೌರವ ನಮನ ಸಲ್ಲಿಸುವ ಮೂಲಕ ಬುಧವಾರ ಸಂಜೆ ಶಿರಾಜಸಾಬ ಮುರಾದಸಾಬ ದರ್ಗಾ ಬಳಿ ವಿಜೃಂಭನೆಯಿಂದ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಶಂಕರಾನಂದ ಮಠದ ಶ್ರೀ ಪ್ರಮಾನಂದ ಶ್ರೀಗಳು ಮಾತನಾಡಿ ವೀರರಾಣಿ ಕಿತ್ತೂರು ಚೆನ್ನಮ್ಮ ಒಬ್ಬ ಮಹಿಳೆ ಯಾಗಿ ಬ್ರಿಟಿಷ್ ರೊಂದಿಗೆ ದೇಶಕ್ಕಾಗಿ ಹೋರಾಡಿ ತಮ್ಮ ಪ್ರಾಣವನ್ನು ತ್ಯಾಗ ಮಾಡಿದರು ಅಂಥ ಹೋರಾಟಗಾರರನ್ನು ಮೇಲಿಂದ ಮೇಲೆ ನೆನಪು ಮಾಡಿಕೊಳ್ಳುವ ಮೂಲಕ ಧೀರ ಮಹಿಳೆಯ ಆದರ್ಶ ವನ್ನು ನಾವು ಅಳವಡಿಸಿಕೊಳ್ಳಬೇಕು ಎಂದು ಹೇಳಿದರು,
ಸ್ವಾತಂತ್ರ್ಯ ಹೋರಾಟಗಾರರಾದ ಭಗತ್ ಸಿಂಗ್ ರವರ ಆತ್ಮೀಯ ಗೆಳೆಯ ನಗು ನಗುತ್ತಾ 27ನೇ ವರ್ಷಕ್ಕೆ ಬ್ರಿಟಿಷರ ನೇಣುಗಂಬ ಏರಿದ ದೀರ ಸೇನಾನಿ ಶಹಿದ್ ಅಷ್ಫಖುಲ್ಲಾಖಾನ ರವರು ದೇಶಕ್ಕಾಗಿ ಹೋರಾಡಿ ತಮ್ಮ ಗೆಳೆಯರಾದ ರಾಮದಾಸ್ ಭಿಸ್ಮಿ ರವರೊಂದಿಗೆ ಸಾವಿರಾರು ಹಿಂದು ಮುಸ್ಲಿಂ ಕ್ರೈಸ್ತ ಸಿಖ್ ಜನಾಂಗದವರು ಸ್ವಾತಂತ್ರಕ್ಕಾಗಿ ಬ್ರಿಟಿಷರೊಂದಿಗೆ ಹೋರಾಡಿ ತಮ್ಮ ಪ್ರಾಣವನ್ನು ಲೆಕ್ಕಿಸದೆ ವೀರ ಮರಣ ಹೊಂದಿದವರ ಜಯಂತಿ ಆಚರಣೆ ಮಾಡುವ ಮೂಲಕ ಇಂದಿನ ಪೀಳಿಗೆಗೆ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದವರ ಹೆಸರನ್ನು ನೆನಪು ಮಾಡಿದಂತಾಗುತ್ತದೆ ಎಂದು ಸಮಾಜ ಚಿಂತಕರಾದ ಫಾರುಕ್ ನದಾಫ, ಹೇಳಿದರು,
ಈ ಸಂದರ್ಭದಲ್ಲಿ ನಗರಸಭೆ ಸ್ಥಾಯಿ ಸಮಿತಿ ಚೇರಮನ ಅರುಣ ಬುದ್ನಿ, ಹಾರುಣ ಹೊರಟ್ಟಿ, ನೋರಸಾಬ ಮುಜಾವರ, ಸದಾಶಿವ ಉಳವಿಮಠ, ಅಬ್ದುಲ ಹೊರಟ್ಟಿ, ಮುಬಾರಕ ಜಮಖಂಡಿ, ಸಿರಾಜ ಹೊರಟ್ಟಿ, ಅಕ್ರಮ್ ಜಮಾದಾರ, ಫರೀದ್ ಅತ್ತಾರ, ಮಹಿಬೂಬ ಹೊರಟ್ಟಿ, ಮಲ್ಲು ಹಕ್ಕಲದಡ್ಡಿ, ಹಾಫೀಜ ಜಮಖಂಡಿ, ಅಸ್ಲಂ ಇನಾಮದಾರ, ಶರೀಫ ಮುಜಾವರ, ಮಹ್ಮದ ಜಮಾದಾರ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಪ್ರಕಾಶ ಕುಂಬಾರ
ಬಾಗಲಕೋಟೆ