ಮಂಗಳೂರು: ಕಲ್ಲೆಗ ಟೈಗರ್ಸ್… ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಾಕಷ್ಟು ಫೇಮಸ್ ಆಗಿರೋ ಹುಲಿ ವೇಷದ ತಂಡ. ಅಕ್ಷಯ್ ಕಲ್ಲೆಗ ಈ ಹುಲಿವೇಷ ತಂಡದ ನಾಯಕನಾಗಿ ಒಂದು ರೀತಿಯಲ್ಲಿ ಫೇಮಸ್ ಫಿಗರ್ ಕೂಡಾ ಆಗಿದ್ದ. ಆದರೆ ರಾತ್ರಿ ಅದೊಂದು ಸಣ್ಣ ವಿಚಾರಕ್ಕೆ ಕಲ್ಲೆಗ ಟೈಗರ್ಸ್ ನಾಯಕ ಮಚ್ಚಿನೇಟಿಗೆ ಬಲಿಯಾಗಿ ಹೋಗಿದ್ದಾನೆ. ಕಲ್ಲೆಗ ಟೈಗರ್ಸ್… ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಕಳೆದ ಕೆಲ ವರ್ಷಗಳ ಹಿಂದೆ ಹುಟ್ಟಿಕೊಂಡ ಹುಲಿ ವೇಷ ತಂಡ. ಮಂಗಳೂರು ದಸರಾ ಸಮಯದಲ್ಲಿ ನಡೆಯೋ ಹುಲಿ ವೇಷದ ಕಾಂಪಿಟೇಷನ್ನಲ್ಲಿ ಇತರೇ ತಂಡಗಳಿಗೆ ಟೈಟ್ ಫೈಟ್ ಕೊಡ್ತಾ ಇದ್ದ ತಂಡ. ಪುತ್ತೂರು ನಗರಕ್ಕೆ ಎಂಟ್ರಿ ಕೊಡ್ತಾ ಇದ್ದಂತೆ ನಗರೆದಲ್ಲೆಡೆ ಕೂಡಾ ಕಲ್ಲೆಗ ಟೈಗರ್ಸ್ ಬ್ಯಾನರ್ಗಳು ಈ ತಂಡ ಅದೆಷ್ಟು ಫೇಮಸ್ ಅನ್ನೋದಿಕ್ಕೆ ಸಾಕ್ಷಿ.
![Demo](https://ainlivenews.com/wp-content/uploads/2023/12/spoorthi-1.jpg)
ಕಳೆದ ಬಿಗ್ ಬಾಸ್ ರಿಯಾಲಿಟಿ ಶೋ ಒಳಗೆ ಕೂಡಾ ಇದೆ ತಂಡ ಎಂಟ್ರಿ ಕೊಟ್ಟು ರಾಜ್ಯದ ಜನರ ಗಮನ ಸೆಳೆದಿತ್ತು. ಆದ್ರೆ ಅದೇ ತಂಡದ ನಾಯಕ ಅಕ್ಷಯ್ ಕಲ್ಲೆಗ ರಾತ್ರಿ ನಾಲ್ವರು ಯುವಕರ ಮಚ್ಚಿನೇಟಿಗೆ ಬಲಿಯಾಗಿ ಇಹಲೋಕ ತ್ಯಜಿಸಿದ್ದಾನೆ. ಆತನ ಹತ್ಯೆ ಅದೆಷ್ಟು ಭೀಕರವಾಗಿತ್ತು ಅಂದ್ರೆ ಹಲ್ಲೆ ನಡೆಸಿದ ನಾಲ್ವರು ಅಕ್ಷಯ್ ಮೇಲೆ 58 ಬಾರಿ ಮಚ್ಚಿನಿಂದ ಕೊಚ್ಚಿ ಹಾಕಿದ್ದಾರೆ. ಅಷ್ಟಕ್ಕೂ ಇದೇನು ಗ್ಯಾಂಗ್ವಾರ್… ಪೂರ್ವ ದ್ವೇಶದ ಪ್ರತೀಕಾರಕ್ಕಾಗಿ ನಡೆದಿರೋ ಕೊಲೆಯಲ್ಲ . ಬದಲಾಗಿ ಕೇವಲ 2 ಸಾವಿರ ರೂಪಾಯಿ ವಿಚಾರದಲ್ಲಿ ನಡೆದ ವಿವಾದ ಅಕ್ಷಯ್ ಕೊಲೆಗೆ ಕಾರಣವಾಗಿದೆ ಅನ್ನೋದೇ ವಿಪರ್ಯಾಸ.
“ದೀರ್ಘಕಾಲದ ಬೆನ್ನು ನೋವು” ಇಲ್ಲಿದೆ ಸರಳ ಚಿಕಿತ್ಸೆ: ಪರಿಹಾರ, ಉಚಿತ ಸಲಹೆ
ಬಸ್ ಚಾಲಕ ಚೇತನ್ ಚಲಾಯಿಸುತ್ತಿದ್ದ ಬಸ್ ಅಕ್ಷಯ್ ಕಲ್ಲೆಗ ಅವರ ಸ್ನೇಹಿತ ವಿಖ್ಯಾತ್ ಚಲಾಯಿಸುತ್ತಿದ್ದ ಬೈಕ್ ನಡುವೆ ಅಪಘಾತವಾಗಿತ್ತು. ಈ ವಿಚಾರವಾಗಿ ವಿಖ್ಯಾತ್ ಪರವಾಗಿ ಬಸ್ ಚಾಲಕ ಚೇತನ್ ಜೊತೆ ದೂರವಾಣಿ ಮೂಲಕ ಮಾತನಾಡಿದ್ದ ಅಕ್ಷಯ್ ಪರಿಹಾರವಾಗಿ 2 ಸಾವಿರ ಕೊಡುವಂತೆ ಹೇಳಿದ್ದ. ಆದ್ರೆ ತಡ ರಾತ್ರಿಯಲ್ಲಿ ಅಕ್ಷಯ್ ಹಾಗೂ ವಿಖ್ಯಾತ್ ಇಬ್ಬರು ಒಟ್ಟಾಗಿದ್ದ ವೇಳೆ ಚೇತನ್ ಹಾಗೂ ಇತರ ಮೂವರು ಬಂದು ದಾಳಿ ನಡೆಸಿದ್ದಾರೆ.
ಕಲ್ಲೆಗದ ತಮ್ಮ ಹುಲಿ ತಂಡದ ಕಚೇರಿ ಸಮೀಪ ನಿಂತಿದ್ದ ಅಕ್ಷಯ್ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿದ್ದಾರೆ. ಈ ವೇಳೆ ವಿಖ್ಯಾತ್ ತಪ್ಪಿಸಿಕೊಂಡಿದ್ದರೂ ಅಕ್ಷಯ್ ಮಾತ್ರ ಹೆಣವಾಗಿ ಹೋಗಿದ್ದಾನೆ. ಕೃತ್ಯ ನಡೆಸಿದ ಬಳಿಕ ಚೇತನ್ ಹಾಗೂ ಮನಿಷ್ ಇಬ್ಬರೂ ಪೊಲೀಸ್ ಠಾಣೆಗೆ ಶರಣಾಗಿದ್ದಾರೆ. ಇನ್ನು ಮಂಜುನಾಥ ಹಾಗೂ ಕೇಶವ ಪಡೀಲ್ ಇಬ್ಬರನ್ನು ಇಂದು ಪೊಲೀಸರು ವಶಕ್ಕೆ ಪಡೆದಿದ್ದಾರೆ. ವಿಪರ್ಯಾಸ ಅಂದ್ರೆ ಕೊಲೆಯಾದ ಅಕ್ಷಯ್ ಹಾಗೂ ಕೊಲೆ ಮಾಡಿದ ನಾಲ್ವರು ಆರೋಪಿಗಳು ಎಲ್ಲರೂ ಈ ಹಿಂದೆ ಸ್ನೇಹಿತರಾಗಿದ್ದರು ಅನ್ನೋದು. ಆದ್ರೆ ಈ ರೀತಿ ಕ್ಷುಲ್ಲಕ ಕಾರಣಕ್ಕೆ ಕೊಲೆ ಮಾಡುವ ಹಂತಕ್ಕೆ ಯಾಕೆ ತಲುಪಿದ್ರು ಅನ್ನೋದು ಎಲ್ಲರಿಗೂ ಅಚ್ಚರಿ ತಂದಿದೆ.
ಕೇವಲ 2 ಸಾವಿರ ರೂಪಾಯಿ ವಿಚಾರದಲ್ಲಿ ಈ ಕೊಲೆ ನಡೆದಿರೋ ಬಗ್ಗೆ ಮೇಲ್ನೋಟಕ್ಕೆ ಕಂಡು ಬಂದಿದ್ರೂ ಇಷ್ಟೊಂದು ಬರ್ಬರವಾಗಿ 58 ಬಾರಿ ಕೊಚ್ಚಿ ಕೊಲೆ ಮಾಡಿರೋದು ಅನುಮಾನಕ್ಕೆ ಕಾರಣವಾಗಿದೆ. ಹೀಗಾಗಿ ಪೊಲೀಸರು ಬೇರೆ ಆಯಾಮದಲ್ಲೂ ತನಿಕೆ ಮುಂದುವರೆಸಿದ್ದಾರೆ. ಅಕ್ಷಯ್ ಮೃತದೇಹದ ಅಂತ್ಯ ಸಂಸ್ಕಾರ ಅಕ್ಷಯ್ ನಿವಾಸ ಶೇವಿರೆಯಲ್ಲಿ ನಡೆದಿದ್ದು ಸಾವಿರಾರು ಜನ ಮೃತ ದೇಹದ ಅಂತಿಮ ದರ್ಶನ ಪಡೆದಿದ್ದಾರೆ. ಒಟ್ಟಾರೆ ಹುಲಿವೇಷದ ತಂಡ ಕಟ್ಟಿ ಜಿಲ್ಲೆಯಲ್ಲಿ ಕಲ್ಲೆಗ ಟೈಗರ್ ಅಂತಾನೆ ಕರೆಸಿಕೊಂಡಿದ್ದ ಅಕ್ಷಯ್ ದುರಂತ ಅಂತ್ಯ ಕಂಡಿದ್ದು ಮಾತ್ರ ವಿಪರ್ಯಸವೇ ಸರಿ.
![](https://ainlivenews.com/wp-content/uploads/2024/01/Ad-Banner-copy-scaled.jpg)