ಕೋಲಾರ:- ಉದ್ಯಮಿ ಅಪಹರಿಸಿ ಹಣಕ್ಕೆ ಬೇಡಿಕೆ ಇಟ್ಟ ನಾಲ್ವರು ನಕಲಿ ಪೊಲೀಸರನ್ನು ಅರೆಸ್ಟ್ ಮಾಡಲಾಗಿದೆ.
ಉದ್ಯಮಿ ನಾಗರಾಜ್ ಎಂಬುವವರನ್ನು ಕಳೆದ ಆಗಸ್ಟ್.9 ರಂದು ಸಿನಿಮೀಯ ರೀತಿಯಲ್ಲಿ ನಕಲಿ ವೇಷಧಾರಿ ಪೊಲೀಸರು ಅಪಹರಣ ಮಾಡಿ ಹಣ ದೋಚಿದ್ದರು. ಉದ್ಯಮಿ ನಾಗರಾಜ್, ಕೋಲಾರ ಜಿಲ್ಲೆಯ ಮುಳಬಾಗಲು ಪಟ್ಟಣದ ಬಜಾರ್ ಬೀದಿಯಲ್ಲಿ ನಿರ್ಮಾ ಕಂಪನಿಯ ಡಿಸ್ಟ್ರಿಬ್ಯೂಟರ್ ಹಾಗೂ ಪೈನಾನ್ಸ್ ವ್ಯವಹಾರ ಮಾಡುತ್ತಿದ್ದರು.
ಮಂಡ್ಯದ ಮೈಶುಗರ್ ಕಾರ್ಖಾನೆ 5 ದಿನಗಳಿಂದ ಸ್ಥಗಿತ: ಕೋಟಿಗಟ್ಟಲೇ ಅನುದಾನ ಕೊಟ್ಟರೂ ಯಾಕೆ ಈ ಸಮಸ್ಯೆ!?
ನಾಗರಾಜ್ ಆವತ್ತು ಮುಳಬಾಗಿಲು ಪಟ್ಟಣದ ಹೊರವಲಯದಲ್ಲಿ ಎಂದಿನಂತೆ ತಮ್ಮ ಅಂಗಡಿಗೆ ತೆರಳಿ ಕಲೆಕ್ಷನ್ ಮಾಡುತ್ತಿದ್ದರು. ಈ ವೇಳೆ ಇನ್ನೋವಾ ಕಾರಿನಲ್ಲಿ ಬಂದ ಒಬ್ಬ ವ್ಯಕ್ತಿ, ಸಾಹೇಬರು ಕರೆಯುತ್ತಿದ್ದಾರೆ ಬಾ ಎಂದು ಕರೆದಿದ್ದಾನೆ. ಇದರಿಂದ ವಿಚಲಿತಗೊಂಡ ನಾಗರಾಜ್ಗೆ ಸಿಸಿಬಿ ಡಿವೈಎಸ್ಪಿ ಎಂದು ಬೆದೆರಿಸಿ ಕಾರಿನ ಬಳಿ ಕರೆದುಕೊಂಡು ಬಂದು ಆತನನ್ನ ಕಿಡ್ನಾಫ್ ಮಾಡಿಕೊಂಡು ನಂಗಲಿ, ರಾಮಸಂದ್ರ, ಹೊಸಕೋಟೆ, ಹಲವೆಡೆ ಸುತ್ತಾಡಿಸಿದ್ದಾರೆ.
ನೀವು ಗಾಂಜಾ ಮಾರಾಟ ಮಾಡುತ್ತಿದ್ದು, ಅನೇಕ ದೂರುಗಳು ಬಂದಿವೆ ಎಂದು ಕಾರಿನಲ್ಲೇ ಕೂರಿಸಿಕೊಂಡು ಲಾಠಿಯಲ್ಲಿ ಹೊಡೆದಿದ್ದಾರೆ. ನಿಮ್ಮ ಮೇಲೆ ಪ್ರಕರಣ ದಾಖಲು ಆಗದಂತೆ ನೋಡಿಕೊಳ್ಳಲು ನಮ್ಮ ಸಾಹೇಬರು ಹೇಳಿದ್ದಾರೆ. ನಂತರ ನಾಗರಾಜ್ಗೆ ಪತ್ನಿಗೆ ದೂರವಾಣಿ ಮಾಡಿ ಹಣ ತರುವಂತೆ ಒತ್ತಡ ಹಾಕಿದ್ದಾರೆ. ಇದರಿಂದ ನಾಗರಾಜ್ ಅನುಮಾನಗೊಂಡು ಇವರು ಪೊಲೀಸರು ಅಲ್ಲವೆಂದು ತಿಳಿದು, ತಮ್ಮ ಬಳಿ ಯಾವುದೇ ಹಣವಿಲ್ಲ, ಯಾವ ಪ್ರಕರಣ ಬೇಕಾದರೂ ಹಾಕಿ ಎಂದಾಗ ಅಪಹರಣಕೋರರು ಮದನಪಲ್ಲಿ, ಚಿಂತಾಮಣಿ ಸುತ್ತಾಡಿಸಿ ನಾಗರಾಜ್ ಬಳಿಯಿದ್ದ 72 ಸಾವಿರ ರೂಪಾಯಿ ಹಣ ಕಿತ್ತುಕೊಂಡು ಚಿಂತಾಮಣಿಯ ಬಸ್ ನಿಲ್ದಾಣದಲ್ಲಿ ಬಿಟ್ಟು ಪರಾರಿಯಾಗಿದ್ದಾರೆ.
ಇನ್ನು ನಾಗರಾಜ್ ಪತ್ನಿಗೆ ದೂರವಾಣಿ ಕರೆ ಮಾಡಿ ಹಣ ತೆಗೆದುಕೊಂಡು ಬರುವಂತೆ ತಿಳಿಸಿದಾಗ ಅನುಮಾನಗೊಂಡ ನಾಗರಾಜ್ ಪತ್ನಿ ಪ್ರಮೀಳಾ ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ. ಕೂಡಲೇ ಕಾರ್ಯಪ್ರವೃತ್ತರಾದ ಮುಳಬಾಗಲು ನಗರ ಠಾಣೆ ಪೊಲೀಸರು, ನಕಲಿ ಪೊಲೀಸರ ಜಾಡು ಹಿಡಿದು ಹೋದಾಗ ನಾಲ್ಕು ಜನ ಆರೋಪಿಗಳು ಈ ಕೃತ್ಯದಲ್ಲಿ ಭಾಗಿಯಾಗಿರುವುದು ತಿಳಿದು ಬಂದಿದೆ.