ಗದಗ:- ಜಿಲ್ಲೆಯಲ್ಲಿ ಶ್ರೀರಾಮನ ಮೆರವಣಿಗೆಗೆ ಪೊಲೀಸ್ ಇಲಾಖೆಯಿಂದ ಅನುಮತಿ ದೊರೆಯದ ಹಿನ್ನಲೆ ಸಂಕ್ಷಿಪ್ತ ಮೆರವಣಿಗೆಗೆ ಶ್ರೀರಾಮಸೇನಾ ಕಾರ್ಯಕರ್ತರು ಕಾಂಜ್ ಮೇಳದೊಂದಿಗೆ ಕೈಯ್ಯಲ್ಲಿ ಶ್ರೀರಾಮನ ಭಾವಚಿತ್ರ ಹಿಡಿದು ಮೆರವಣಿಗೆ ಮಾಡಿದ್ದಾರೆ.
ಜೋಡಮಾರುತಿ ದೇವಸ್ಥಾನದಿಂದ ತ್ರಿಕೂಟೇಶ್ವರ ದೇವಸ್ಥಾನದವರೆಗೆ ಮೆರವಣಿಗೆ ಮಾಡಲಾಗಿದೆ. ಕೇಸರಿ ಶಾಲು ಧರಿಸಿ ಮೆರವಣಿಗೆಯಲ್ಲಿ ಯುವಕರು, ಹಿರಿಯರು ಪಾಲ್ಗೊಂಡಿದ್ದು, ಶ್ರೀರಾಮ ಜೈಕಾರ ಕೂಗಿ ಮೆರವಣಿಗೆಯಲ್ಲಿ ಮಹಿಳೆಯರು ಸಾಗಿದ್ದಾರೆ.
ಮೆರವಣಿಗೆಗೆ ತಂದಿದ್ದ ಮೂರ್ತಿಗಳನ್ನು ಮಾರುತಿ ದೇವಸ್ಥಾನದ ಎದುರು ಶ್ರೀರಾಮಸೇನೆ ದರ್ಶನಕ್ಕೆ ಇಟ್ಟಿದೆ.