ಗೌರಿಬಿದನೂರು :ಮಕ್ಕಳ ಕಲಿಕೆಗೆ ಪೂರಕ ಶಿಕ್ಷಣ ನೀಡುವಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಹೆಚ್ಚು ಶ್ರಮವಹಿಸಬೇಕು ಎಂದು ಶಾಸಕ ಕೆ ಎಚ್ ಪುಟ್ಟಸ್ವಾಮಿ ಗೌಡರು ಸಲಹೆ ನೀಡಿದರು
ಗೌರಿಬಿದನೂರು ತಾಲ್ಲೂಕಿನ ತೊಂಡೇಭಾವಿ ಗ್ರಾಮ ಪಂಚಾಯಿತಿ, ಅಲಕಾಪುರ ಗ್ರಾಮ ಪಂಚಾಯಿತಿ, ಹೊಸೂರು ಗ್ರಾಮ ಪಂಚಾಯಿತಿ, ಮುದುಗೆರೆ ಗ್ರಾಮ ಪಂಚಾಯಿತಿ, ಕಾದಲವೇಣಿ ಗ್ರಾಮ ಪಂಚಾಯಿತಿ,ಗೆದರೆ ಗ್ರಾಮ ಪಂಚಾಯಿತಿ ಇನ್ನು ಬೇರೆ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಪಂಚಾಯಿತ್ ರಾಜ್ ಇಂಜಿನಿಯರಿಂಗ್ ಉಪ ವಿಭಾಗ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ,ಶಾಸಕರ ನಿಧಿಯ ಸಹಯೋಗದಲ್ಲಿ ಅಂಗನವಾಡಿ ಕಟ್ಟಡ ನಿರ್ಮಾಣ, ಸಿ ಸಿ ರಸ್ತೆ, ಚರಂಡಿ ನಿರ್ಮಾಣ , ಗ್ರಂಥಾಲಯ ನಿರ್ಮಾಣ, ಕಾಮಗಾರಿಗಳಿಗೆ ಶಾಸಕರು ಗುದ್ದಲಿ ಪೂಜೆ ನೆರವೇರಿಸಿದರು
ಇದೇ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಮಕ್ಕಳ ಮನಸ್ಸು ಬಹಳ ಸೂಕ್ಷ್ಮ. ಅವರ ಮನಸ್ಸಿನಲ್ಲಿ ಯಾವ ರೀತಿ ಬದಲಾವಣೆ ತರಬೇಕೆಂಬ ದೃಷ್ಟಿ ಇಟ್ಟುಕೊಂಡು ಪಾಠ ಮಾಡಬೇಕು. ಮಕ್ಕಳಿಗೆ ಪ್ರಾಥಮಿಕ ಹಂತದಲ್ಲಿ ವಿದ್ಯಾಭ್ಯಾಸ ನೀಡುವ ಅಂಗನವಾಡಿ ಕೇಂದ್ರ ದೇವಸ್ಥಾನವಿದ್ದಂತೆ ಎಂದರು.
ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬಂತೆ ಚಿಕ್ಕ ಮಕ್ಕಳಿಗೆ ಲಾಲನೆ, ಪಾಲನೆ, ಪೋಷಣೆ ಅಂಗನವಾಡಿ ಕೇಂದ್ರದಲ್ಲಿ ಅತಿಮುಖ್ಯವಾಗಿದೆ. ಆದ್ದರಿಂದ ಮಕ್ಕಳಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ತಿಳಿಸಿದರು.
ಅಂಗನವಾಡಿ ಕೇಂದ್ರದಲ್ಲಿ ದೊರಕುವ ಸೌಲಭ್ಯಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸಬೇಕು. ಮಕ್ಕಳಿಗೆ ನೀಡುವ ಆಹಾರ ಪದಾರ್ಥಗಳ ಬಗ್ಗೆ ಹೆಚ್ಚು ನಿಗಾವಹಿಸಬೇಕು. ಗಭೀರ್ಣಿಯರಿಗೆ ನಿಗದಿತ ವೇಳೆಗೆ ಆಹಾರ ಪದಾರ್ಥಗಳನ್ನು ವಿತರಣೆ ನೀಡಬೇಕು ಎಂದ ಅವರು
ಗುಣ ಮಟ್ಟದ ಕಾಮಗಾರಿ ಮಾಡುವ ಮೂಲಕ ದೀರ್ಘ ಕಾಲ ಬಾಳಿಕೆ ಬರುವಂತೆ ಅಧಿಕಾರಿಗಳು ನೋಡಿಕೊಳ್ಳಬೇಕು. ಗ್ರಾಮದ ಜನ ಗುಣ ಮಟ್ಟದ ಕಾಮಗಾರಿ ನಡೆಯುವಂತೆ ನೋಡಿಕೊಳ್ಳುವ ಜತೆಗೆ ಸಹಕರಿಸಬೇಕು ಎಂದರು.
ಗ್ರಂಥಾಲಯಗಳು ಅರಿವಿನ ಕೇಂದ್ರಗಳು ಮೊಬೈಲ್ ಹಾವಳಿಗೆ ಮರೆಮಾಚುತ್ತಿರುವ ಹವ್ಯಾಸಗಳಲ್ಲಿ ಓದುವ ಹವ್ಯಾಸ ಸಹ ಒಂದು ಗ್ರಾಮದ ಜನರು ವಿವಿಧ ಪತ್ರಿಕೆಗಳು , ವಿವಿಧ ರೀತಿಯ ಪುಸ್ತಕಗಳು ಓದಲು ಗ್ರಂಥಾಲಯದಲ್ಲಿ ಅನುಕೂಲಕರವಾಗಿರುತ್ತದೆ ಎಂದು ಕರೆ ನೀಡಿದರು
ಇದೇ ಸಂದರ್ಭದಲ್ಲಿ ಪಂಚಾಯತ್ ರಾಜ್ ಇಂಜಿನಿಯರಿಂಗ್ ಅಧಿಕಾರಿ ರಾಘುನಾಥ್, ಅಭಿಯಂತರರಾದ ಚೆಲುವರಾಜು , ನಾರಾಯಣ ಸ್ವಾಮಿ, ಸಿಡಿಪಿಒ ರವಿಕುಮಾರ್, ಕೋಚಿಮುಲ್ ಮಾಜಿ ಅಧ್ಯಕ್ಷರು ಹಾಗೂ ಹಾಲಿ ನಿರ್ದೇಶಕರಾದ ಜೆ ಕಾಂತರಾಜ್, ಲಕ್ಷ್ಮಣ್ ರಾವ್ , ಪುರಸಭೆ ಮಾಜಿ ಅಧ್ಯಕ್ಷ ಎಂ ನರಸಿಂಹ ಮೂರ್ತಿ ,ಕೆ ಎಚ್ ಪಿ ಫೌಂಡೇಶನ್ ವ್ಯವಸ್ಥಾಪಕರಾದ ಶ್ರೀನಿವಾಸ ಗೌಡರು,ತೊಂಡೇಭಾವಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಕಾಮಾಕ್ಷಿ ರಾಮದಾಸ್, ಉಪಾಧ್ಯಕ್ಷರಾದ ಆರ್ ಎನ್ ಜಯಚಂದ್ರ, ಸದಸ್ಯರಾದ ಶಿವಶಂಕರರೆಡ್ಡಿ, ಅಲಕಾಪುರ ಗ್ರಾಮ ಪಂಚಾಯಿತಿ ಸದಸ್ಯರಾದ ಮೌಲಜಾನ್, ಗೆದರೆ ಶ್ರೀನಿವಾಸ್, ರಾಘವ್, ಹೊಸೂರು ಗಿರೀಶ್ ರೆಡ್ಡಿ, ಕಾದಲವೇಣಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಗಂಗರತ್ನಮ್ಮ, ಗ್ರಾಮ ಪಂಚಾಯಿತಿ ಮಾಜಿ ವೇಣುಗೋಪಾಲ ರೆಡ್ಡಿ, ಗ್ರಾಮ ಪಂಚಾಯಿತಿ ಸದಸ್ಯರಾದ ಮರಳೂರು ಗೋಪಾಲ್, ಅಭಿಲಾಷ್ ಅಶ್ವತ್ಥನಾರಾಯಣ್, ಮುಖಂಡರಾದ ಕಾದಲವೇಣಿ , ಡಿ ಜಿ ಬಾಲಕೃಷ್ಣ, ಬ್ರಹ್ಮ ರತ್ನಯ್ಯ , ಮುಂತಾದವರು ಉಪಸ್ಥಿತರಿದ್ದರು,