ಗದಗ: ಕರ್ನಾಟಕ ಸೌಹಾರ್ದ ಸಹಕಾರಿ ಸಂಘ ಮುಂಡರಗಿ ಶಾಖೆ ವತಿಯಿಂದ ಮುಂಡರಗಿ ಪಟ್ಟಣದ ಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನದಲ್ಲಿ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಮತ್ತು ನಿವೃತ್ತ ಶಿಕ್ಷಕರಿಗೆ ಸನ್ಮಾನಿಸಿ ಗೌರವಿಸಲಾಯಿತು. ಸಸಿಗೆ ನೀರು ಹಾಕುವ ಮೂಲಕ ಕಾರ್ಯಕ್ರಮವನ್ನು ಪಟ್ಟಣದ ಗಣ್ಯ ವರ್ತಕರಾದ ನಾರಾಯಣಪ್ಪ ಇಲ್ಲೂರ ಉದ್ಘಾಟಿಸಿದರು.
ಬಿಸಿಯೂಟ ಸೇವಿಸಿ ಶಾಲಾ ಮಕ್ಕಳು ಅಸ್ವಸ್ಥ.. 48 ಕ್ಕೂ ಹೆಚ್ಚು ಮಕ್ಕಳು ಆಸ್ಪತ್ರೆಗೆ ದಾಖಲು!
ಈ ವೇಳೆ ಪ್ರಾಸ್ತಾವಿಕವಾಗಿ ಮಾತನಾಡಿದ ಜಗದೀಶ್ ಹಂಚಿನಮನಿ ಡಿಸೆಂಬರ್ 31, 2015ರಲ್ಲಿ ಈ ಸಂಘವು ಅಸ್ತಿತ್ವಕ್ಕೆ ಬಂದಿದ್ದು ಸ್ಲಂನಲ್ಲಿರುವ ಮಹಿಳೆಯರನ್ನು ಸ್ವಾವಲಂಬಿ ಮಾಡುವುದು ಈ ಸಂಘದ ಉದ್ದೇಶವಾಗಿದ್ದು ಸಂಘದಲ್ಲಿ 100 ರಲ್ಲಿ ಶೇಕಡಾ 75 ಮಂದಿ ಮಹಿಳಾ ಸದಸ್ಯರಿದ್ದಾರೆ ಅವರ ಮಕ್ಕಳ ಶಿಕ್ಷಣಕ್ಕೆ ಕಡಿಮೆ ಬಡ್ಡಿ ದರದಲ್ಲಿ ಸಾಲವನ್ನು ನೀಡುತ್ತಿದ್ದೇವೆ. ಇದರೊಟ್ಟಿಗೆ ಸಾಮಾಜಿಕ ಕಾರ್ಯಗಳನ್ನು ನಮ್ಮ ಸಂಘದಿಂದ ಮಾಡುತ್ತಿದ್ದು ಹೀಗಾಗಿ ಸಂಘದ ವತಿಯಿಂದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ನಿವೃತ್ತ ಶಿಕ್ಷಕರಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ ಎಂದು ತಿಳಿಸಿದರು.
ನಂತರ ಮಾತನಾಡಿದ ನಿವೃತ್ತ ಶಿಕ್ಷಕ ಎನ್ ಎನ್ ಕಲಕೇರಿ ವಿದ್ಯಾರ್ಥಿಗಳು 25 ವರ್ಷ ಕಷ್ಟಪಟ್ಟರೆ 75 ವರ್ಷ ಸುಖವಾಗಿರಬಹುದು ವಿದ್ಯಾರ್ಥಿಗಳು ಏನಾದರೂ ಒಂದು ಸಾಧನೆ ಮಾಡಬೇಕು ಅವರ ಜೀವನ ಸಾರ್ಥಕವಾಗುತ್ತದೆ ಎಂದು ತಿಳಿಸಿದರು. ಮಾಂತೇಶ್ ಕಲ್ಮಠ ಮಾತನಾಡಿ ಸಾಮಾಜಿಕ ಕಳಕಳಿಯಿಂದ ಸಂಘವನ್ನು ಕಟ್ಟಿದ್ದೇವೆ ಯಾವುದೇ ಲಾಭದ ಉದ್ದೇಶವಿಲ್ಲ ಬಡ ಮಕ್ಕಳ ಶಿಕ್ಷಣಕ್ಕೆ ಸಂಘವು ಹೆಚ್ಚಿನ ಪ್ರಾಧ್ಯಾನತೆ ನೀಡುತ್ತಿದೆ ಮಕ್ಕಳಿಗೆ ಸನ್ಮಾನ ಮಾಡುವುದರಿಂದ ಅವರಿಗೆ ಹೆಚ್ಚಿನ ಉತ್ತೇಜನ ಕೊಟ್ಟಂತಾಗುತ್ತದೆ ಎಂದು ತಿಳಿಸಿದರು. ಸೋಮರೆಡ್ಡಿ ಗೋಕಾವಿ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು
ಈ ಸಂದರ್ಭದಲ್ಲಿ ಸೋಮಾರೆಡ್ಡಿ ಎಂ ಗೋಕಾವಿ, ನಾರಾಯಣಪ್ಪ ಇಲ್ಲೂರ್, ಪಾಲಾಕ್ಷಪ್ಪ ಗಣದಿನ್ನಿ, ನಾಗೇಶ್ ಹುಬ್ಬಳ್ಳಿ, ಜ್ಯೋತಿ ಹಾನಗಲ್, ಜಗದೀಶ್ ಹಂಚಿನಮನಿ, ಶಂಕರಗೌಡ ಪಾಟೀಲ್, ಮಾಂತೇಶ್ ಕಲ್ಮಠ ಸೇರಿದಂತೆ ಹಲವಾರು ಮುಖಂಡರು ಉಪಸ್ಥಿತರಿದ್ದರು.