ಕೋಲಾರ: ಕಡ್ಡಾಯವಾಗಿ ಕನ್ನಡ ನಾಮಫಲ ಅಳವಡಿಸಲು ಒತ್ತಾಯಿಸಿ ಕೋಲಾರದಲ್ಲಿ ಕರವೇ ವತಿಯಿಂದ ಬೃಹತ್ ಪ್ರತಿಭಟನಾ ರ್ಯಾಲಿ ನಡೆಸಿದರು, ಟಿ.ಎನಾರಾಯಣಗೌಡ ಸ್ಥಾಪಿತ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಘಟಕದ ಜಿಲ್ಲಾಧ್ಯಕ್ಷ ಮೇಡಿಹಾಳ ರಾಘವೇಂದ್ರ ನೇತೃತ್ವದಲ್ಲಿ ಬೃಹತ್ ಪ್ರತಿಭಟನಾ ರ್ಯಾಲಿ ನಡೆಸಿ ಕನ್ನಡ ನಾಮಫಲಕ ಅಳವಡಿಸಲು ಜಾಗೃತಿ ಮೂಡಿಸುವುದರ ಜೊತೆಗೆ ಎಚ್ಚರಿಕೆಯನ್ನು ನೀಡಿದರು,
ಕೋಲಾರ ನಗರದ ಗಾಂಧಿವೃತ್ತದಿಂದ ನಗರದ ಪ್ರಮುಖ ರಸ್ತೆಗಳಲ್ಲಿ ಬೃಹತ್ ಪ್ರತಿಭಟನಾ ರ್ಯಾಲಿ ನಡೆಸಿದರು, ಸರ್ಕಾರದ ನಿಯಮಾನುಸಾರ ಶೇ.೬೦ ರಷ್ಟು ಕನ್ನಡ ಬಾಷೆಯನ್ನು ಬಳಸಬೇಕು ಎಂಧು ಈಗಾಗಲೇ ರಾಜ್ಯ ಸರ್ಕಾರ ಸುಗ್ರೀವಾಜ್ಙೆ ನಮಾಡಿದೆ ಹಾಗಾಗಿ ಕಡ್ಡಾಯವಾಗ ಕನ್ನಡ ನಾಮಫಲ ಅಳವಡಿಸಬೇಕು ಎಂದು ಒತ್ತಾಯಿಸಿದರಲ್ಲದೆ, ತಹಶೀಲ್ದಾರ್ ಹಾಗೂ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು, ಕಡ್ಡಯಾ ನಾಫಲಕ ಜಾರಿಯಾಗಬೇಕು, ಟಿ.ನಾರಯಣಗೌಡರ ನಾಯಕತ್ವದ ಹೋರಾಟ ಪ್ರತಿಭಲವಾಗಿ ಶೇ೬೦ ರಷ್ಟು ಕನ್ನಡ ಭಾಷೆಗೆ ಆದ್ಯತೆ ನೀಡಬೇಕು ಎಂದು ಸುಗ್ರಿವಾಜ್ಙೆ ಹೊರಡಿಸಿದೆ.
ನಿಯಮಾನುಸಾರ ಡಿಸೆಂಬರ್ ತಿಂಗಳಲ್ಲಿ ನಡೆದ ಹೋರಾವು ಕ್ರಾಂತಿ ರೂಪಕ್ಕೆ ಹೋದಾಗ ಆಗ್ಲ ನಾಮಫಲಕ ಕಿತ್ತೆಸೆದಿದ್ದರು, ಟಿ.ಎ ನಾರಾಯಣಗೌಡ ಸೇರಿದಂತೆ ಹಲವು ಕಾರ್ಯಕರ್ತರವನ್ನು ಪೋಲೀಸರು ಬಂದಿಸಿ ೧೪ ದಿನಗಳ ಕಾಲ ಜೈಲಿನಲ್ಲಿಟ್ಟಿದ್ದರು, ಪೆ.೨೮ ರ ಒಳಗೆ ಕಡ್ಡಾಯವಾಗಿ ಕನ್ನಡ ನಾಮಪಲಕ ಹಾಕದೇ ಇದ್ದರೆ ಪೆ.೨೮ ರ ನಂತರ ಕರವೇ ಬೀದಿಗಳಿದು ಆಗ್ಲ ನಾಮಫಲಕಗಳಿಗೆ ಕಪ್ಪು ಮಸಿ ಬಳಿಯುವ ಮೂಲಕ ಕ್ರಾಂತಿ ಹೋರಾಟಕ್ಕೆ ಮುಂದಾಗಬೇಕಾಗುತ್ತದೆ,
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಕೂಡಲೇ ಟಿ.ಎ. ನಾರಾಯಣಗೌಡ ಹಾಗೂ ಕರವೇ ಕಾರ್ಯತರ ಮೇಲೆ ಹಾಕಿರುವ ಕೇಸುಗಳನ್ನು ವಾಪಸ್ ಪಡೆಯದಿದ್ದದಲ್ಲಿ ಮುಂದಿನ ಲೋಕಸಭ ಚುನಾವಣೆಯಲ್ಲಿ ಒಳ್ಳೆಯ ನಿರ್ದಾರವನ್ನು ತೆಗೆದುಕೊಳ್ಳ ಬೇಕಾಗುತ್ತದೆ ಕನ್ನಡ ವಿಷಯ ಬಂದಾಗ ಕರವೇ ಕಾರ್ಯಕರ್ತರ ಕನ್ನಡಕ್ಕಾಗಿ ಕನ್ನಡ ಬಾಯೋದ್ಪಾಕರಾಗಲು ಸಿದ್ದ ಯಾವುದೇ ಕಾರಣಕ್ಕೂ ನಾರಾಯಣಗೌಡರ ಸಂಘಟನೆ ಕಾರ್ಯಕರ್ತರು ಕುಗ್ಗೋದಿಲ್ಲ ಎಂದು ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.