ಮುಂದಿನ ವರ್ಷ ನಡೆಯಲಿರೋ ಐಪಿಎಲ್ಗೆ ಕ್ಯಾಪ್ಟನ್ ಕೆ.ಎಲ್ ರಾಹುಲ್ ಅವರನ್ನು ಲಕ್ನೋ ಸೂಪರ್ ಜೈಂಟ್ಸ್ ರೀಟೈನ್ ಮಾಡಿಕೊಳ್ಳೋದು ಡೌಟ್ ಎನ್ನಲಾಗುತ್ತಿದೆ. ಹಾಗಾಗಿ ಕೆ.ಎಲ್ ರಾಹುಲ್ ಆರ್ಸಿಬಿಗೆ ಬರಲೇಬೇಕು ಎಂದು ಪಟ್ಟು ಹಿಡಿದಿದ್ದಾರೆ. ಈ ಬೆನ್ನಲ್ಲೇ ಕೆ.ಎಲ್ ರಾಹುಲ್ ಆರ್ಸಿಬಿ ಬಗ್ಗೆ ಮಾತಾಡಿದ್ದಾರೆ.
ಶೋಚನೀಯ ಸ್ಥಿತಿಯಲ್ಲಿ ಕಲ್ಪಲ್ಲಿ ಸ್ಮಶಾನ.. ಮೂಲ ಸೌಕರ್ಯಗಳಿಲ್ಲದೆ ಸಿಬ್ಬಂದಿಗಳು ಪರದಾಟ!
ಮೊದಲು ನನ್ನ ಜನ ಟೆಸ್ಟ್ ಪ್ಲೇಯರ್ ಎಂದು ಕರೆಯುತ್ತಿದ್ದರು. ನಾನು ವೈಟ್ ಪ್ಲೇಯರ್ ಅಲ್ಲ ಎಂದು ತೀರ್ಮಾನಿಸಿದ್ದರು. ನಾನು 2016ರಲ್ಲಿ ಆರ್ಸಿಬಿಗೆ ಬಂದ ಮೇಲೆ ಎಲ್ಲರ ಅಭಿಪ್ರಾಯ ಬದಲಾಯ್ತು. ನಾನು ಆರ್ಸಿಬಿ ಪರ ಅದ್ಭುತ ಪ್ರದರ್ಶನ ನೀಡಿದ್ದೆ. ಆಗ ನಾನು ಟಿ20 ಪ್ಲೇಯರ್ ಆಗಬಹುದು ಎಂದು ಜನ ನಂಬಿದ್ರು ಎಂದಿದ್ದಾರೆ ಕೆ.ಎಲ್ ರಾಹುಲ್. ಈ ಮೂಲಕ ಮತ್ತೆ ಆರ್ಸಿಬಿ ಬರೋ ಸುಳಿವು ನೀಡಿದ್ದಾರೆ
ಎಷ್ಟು ಕೋಟಿ ಆದ್ರೂ ಪರ್ವಾಗಿಲ್ಲ ನಾವು ಕೊಡ್ತೀವಿ. ನಮ್ಮ ಕರ್ನಾಟಕದ ಹುಡುಗ ಆರ್ಸಿಬಿಗೆ ಬರಲಿ. ಅವರಿಗೆ ಆಗೋ ಅವಮಾನ ನಾವು ನೋಡಕ್ಕೆ ಆಗ್ತಿಲ್ಲ. ಕೆ.ಎಲ್ ರಾಹುಲ್ ಅವರೊಂದಿಗೆ ಗೋಯೆಂಕಾ ನಡೆಸಿಕೊಂಡ ರೀತಿ ಬಹಳ ಅಮಾನವೀಯ ಎಂದು ಆಕ್ರೋಶ ಹೊರಹಾಕಿದ್ದಾರೆ.
2016ರಲ್ಲಿ ಕೆ.ಎಲ್ ರಾಹುಲ್ ಆರ್ಸಿಬಿ ತಂಡದಲ್ಲಿ ಇದ್ದರು. ಆ ಸೀಸನ್ನಲ್ಲಿ ರಾಹುಲ್ ಉತ್ತಮ ಬ್ಯಾಟಿಂಗ್ ಮಾಡಿದ್ರು. ತಾನು ಆಡಿದ್ದ 12 ಇನ್ನಿಂಗ್ಸ್ನಲ್ಲಿ 397 ರನ್ ಸಿಡಿಸಿದ್ರು. ಈ ಪೈಕಿ 4 ಅರ್ಧಶತಕಗಳು ದಾಖಲಾಗಿದ್ದವು. ಬರೋಬ್ಬರಿ 16 ಸಿಕ್ಸರ್, 37 ಫೋರ್ ಚಚ್ಚಿದ್ರು ರಾಹುಲ್. ಇವರ ಬ್ಯಾಟಿಂಗ್ ಸ್ಟ್ರೈಕ್ ರೇಟ್ 150ಕ್ಕೂ ಹೆಚ್ಚಿತ್ತು.