ಮಹದೇವಪುರ: ಸಾಹಿತ್ಯದ ಮೂಲಕ ಅಸ್ಪೃಶ್ಯತೆಯನ್ನ ಹೋಗಲಾಡಿಸಿದ ಮಹಾನ್ ಪುರುಷ ಕನಕ ದಾಸರು.
ಜಾತಿ ಸಂಕೋಲೆಯನ್ನು ಕಳಚಿದ ಭಕ್ತ ಶ್ರೇಷ್ಠ ಕನಕದಾಸರ ತತ್ವಾದರ್ಶಗಳನ್ನು ಹಾಗೂ ಕೀರ್ತನೆಯ ಸಂದೇಶಗಳನ್ನು ಪಾಲಿಸುವುದು ನಾವು ಅವರಿಗೆ ಕೊಡುವ ಅತಿ ದೊಡ್ಡ ಗೌರವವಾಗಿದೆ ಎಂದು ಹಿಂದುಳಿದ ಜಾತಿಗಳ ಒಕ್ಕೂಟದ ಕಾರ್ಯದರ್ಶಿ ಆರ್,ರಾಮಕೃಷ್ಣಪ್ಪ ಅವರು ಹೇಳಿದರು.
![Demo](https://ainlivenews.com/wp-content/uploads/2023/12/spoorthi-1.jpg)
ಮಹದೇವಪುರ ಕ್ಷೇತ್ರದ ಗುಂಜೂರು ಪಾಳ್ಯ
ಗ್ರಾಮದಲ್ಲಿ ಸಂತ ಕನಕದಾಸರ 536 ನೇ ಜಯಂತಿ ಕಾರ್ಯಕ್ರಮದಲ್ಲಿ ಕನಕದಾಸರ ಭಾವ ಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.
ಕನಕದಾಸರ ಕೀರ್ತನೆಯಲ್ಲಿ ಅಗಾಧ ವೈಚಾರಿಕ ಚಿಂತನೆ ಯಾವ ಮಟ್ಟದಲಿದೆ ಎಂಬುದು ತಿಳಿಯುತ್ತದೆ ಅವರು ಬರಿ ಹರಿ ಯನ್ನು ಹೊಗಳಿ ದಾಸ ಶ್ರೇಷ್ಠ ರಾಗಲಿಲ್ಲ ಅಂದಿನ ಕಾಲದಲ್ಲಿ ಇಂದಿಗೂ ನಡೆಯುತ್ತಿರುವ ಮೌಡ್ಯದ ಅಂದಾಚರಣೆಗಳನ್ನೂ ತೀಕ್ಷ್ಣವಾಗಿ ಟೀಕಿಸಿದ್ದರು ಎಂದು ಹೇಳಿದರು.
ಕನಕದಾಸರು ತಮ್ಮ ಕೀರ್ತನೆಗಳ ಮೂಲಕ ಜನರ ಮನಸ್ಸುಗಳನ್ನು ಬದಲಿಸುತ್ತಾ ಸಮಾಜವನ್ನು ಸರಿದಾರಿಗೆ ತರುಲು ಶ್ರಮಿಸಿದರು. ಅವರ ಜೀವನ ಹಾಗೂ ಸಾಹಿತ್ಯ ಎರಡೂ ನಮಗೆ ಉತ್ತಮ ಮಾರ್ಗವನ್ನು ತೋರುತ್ತವೆ ಎಂದರು.
ಕುಲ ಕುಲವೆಂದು ಬಡಿದಾಡದಿರಿ ಎಂದು ಕನಕದಾಸರು ನೀಡಿದ ಸಂದೇಶ ಇಂದಿಗೂ ಪ್ರಸ್ತುತ. ಸಂವಿಧಾನದಲ್ಲಿ ಎಲ್ಲರಿಗೂ ಸಮಾನ ಅವಕಾಶ ನೀಡಲಾಗಿದೆ. ಆದರೆ, ನಮ್ಮ ಮನಸ್ಥಿತಿಗಳು ಬದಲಾಗಬೇಕು. ಕನಕದಾಸರು ದೇವರು ಭಕ್ತಿಗೆ ಮಾತ್ರ ಒಲಿಯುತ್ತಾನೆ ಹೊರತು ಜಾತಿಗಲ್ಲ ಎಂಬುದನ್ನು ತೋರಿಸಿದ್ದಾರೆ. ಅವರ ಆದರ್ಶಗಳನ್ನು ಎಲ್ಲರೂ ಪಾಲಿಸೋಣ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಗೋಪಾಲಪ್ಪ,ಬಾಲಾಜಿ, ಮೋಹನ್ ಬಾಬು ,ಮುರಳಿ,ಸುರೇಶ್ ,ಬಸವರಾಜ್, ಶ್ರೀನಿವಾಸಪ್ಪ,ಮೋಹನ್ ಬಾಬು,ಸುರೇಶ್,
ರಾಮ,ಮುನಿಕೃಷ್ಣ,ರಮೇಶ್ ಇದ್ದರು.
![](https://ainlivenews.com/wp-content/uploads/2024/01/Ad-Banner-copy-scaled.jpg)