ಉತ್ತರ ಕನ್ನಡ:- ಕಾಳಿನದಿ ಬಿರುಕು ವದಂತಿ ವಿಚಾರವಾಗಿ ಸುಳ್ಳು ಸುದ್ದಿ ಹಬ್ಬಿಸಿದವರಿಗೆ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಎಚ್ಚರಿಕೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ನಾಳೆಯಿಂದ 2 ದಿನ ಪವರ್ ಕಟ್: ಯಾವ್ಯಾವ ಏರಿಯಾ ಇಲ್ಲಿದೆ ಚೆಕ್ ಮಾಡಿ!
IRB ಹಾಗೂ NHAI ಅಧಿಕಾರಿಗಳು ಮತ್ತು ತಜ್ಞರು ಇಂದು ಪರಿಶೀಲನೆ ನಡೆಸಿದ್ದಾರೆ. ಹೊಸ ಸೇತುವೆಯಡಿ ಯಾವುದೇ ಬಿರುಕಿಲ್ಲ, ಅದು ಒಂದರ ಮೇಲೊಂದು ಹಾಕಿದ ಕಾಂಕ್ರೀಟ್ ಪದರವಷ್ಟೇ. NHAIಯವರು ಓವರ್ ಲ್ಯಾಪಿಂಗ್ ಆಫ್ ಕಾಂಕ್ರೀಟ್ ಸ್ಲರಿ ಎಂದು ವರದಿ ಕೊಟ್ಟಿದ್ದಾರೆ.
ಕಾಂಕ್ರೀಟ್ ಪದರ ಒಂದರ ಮೇಲೊಂದು ಹಾಕಿದ ಕಾರಣ ಬಿರುಕು ಬಿದ್ದಂತೇ ಕಾಣುತ್ತಿದೆ. ಜನರು ಯಾವುದೇ ಆತಂಕವಿಲ್ಲದೇ ಸೇತುವೆಯಲ್ಲಿ ಪ್ರಯಾಣಿಸಬಹುದು.
ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಸುಳ್ಳು ಮಾಹಿತಿ ಹಬ್ಬಿಸುವವರ ಬಗ್ಗೆ ಮಾಹಿತಿ ಕಲೆ ಹಾಕಲು ಸೂಚಿಸಿದ್ದೇನೆ. ಸುಳ್ಳು ಮಾಹಿತಿ ಹಬ್ಬಿಸುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಎಚ್ಚರಿಸಿದರು.
ಇನ್ನೂ ಕಾರವಾರದ ಕಾಳಿ ನದಿ ಹೊಸ ಸೇತುವೆಯಡಿ ಬಿರುಕು ಕಾಣಿಸಿದ್ದ ವಿಚಾರ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆ ಹುಟ್ಟು ಹಾಕಿತ್ತು.