ಕಲಬುರಗಿ:- ಜಿಲ್ಲೆ ಅಳಂದ ಪಟ್ಟಣದ ಲಾಡ್ಲೇ ಮಷಾಕ್ ದರ್ಗಾದಲ್ಲಿರುವ ರಾಘವ ಚೈತನ್ಯ ಶಿವಲಿಂಗಕ್ಕೆ ಹೈಕೋರ್ಟ್ ಅನುಮತಿ ಪ್ರಕಾರ 15 ಜನ ತೆರಳಿ ಪೂಜೆ ಸಲ್ಲಿಸಿದ್ರು..ಶ್ರೀರಾಮ ಸೇನೆಯ ಸಿದ್ಧಲಿಂಗ ಶ್ರೀ ನೇತ್ರತ್ವದಲ್ಲಿ ಪೂಜೆ ಸಲ್ಲಿಸಿದ್ದು ಪೂಜೆಯಲ್ಲಿ ಬಿಜೆಪಿ ಯುವ ಮುಖಂಡರಾದ ಚಂದು ಪಾಟೀಲ್ ಶಿವರಾಜ್ ಪಾಟೀಲ್ ಹರ್ಷಾ ಗುತ್ತೇದಾರ್ ಹಾಗು ಇತರರು ಹೀಗೆ ಒಟ್ಟು 15 ಜನ ಹಿಂದೂ ಕಾರ್ಯಕರ್ತರು ಭಾಗಿಯಾಗಿದ್ರು.
ಕೇಸರಿ ಶಲ್ಯ ಧರಿಸಿದ ಕಾರ್ಯಕರ್ತರು ಹೂ ಹಣ್ಣು ಕಾಯಿ ಕರ್ಪೂರ ಎಲ್ಲವನ್ನ ತೆಗೆದುಕೊಂಡು ಸಂಪ್ರದಾಯದಂತೆ ಪೂಜೆ ಮಾಡಿದ್ರು.ಇದೇವೇಳೆ ಮುಂಜಾಗರುಕತಾ ಕ್ರಮವಾಗಿ ಬಿಗಿ ಬಂದೋಬಸ್ತ್ ಮಾಡಿದ್ದ ಹಿನ್ನಲೆ ಶಿವರಾತ್ರಿ ಪೂಜೆ ಸುಸೂತ್ರವಾಗಿ ನಡೆಯಿತು..